ದಾವಣಗೆರೆ
ದಾವಣಗೆರೆಯ ಬಸವಾನುಯಾಯಿಗಳಿಗೆ ಸಿಡಿಲಾಘಾತದ ಸುದ್ದಿ ಇಂದು ಮಧ್ಯಾಹ್ನ ತಲುಪಿದೆ.
ಒಂದು ಗಂಟೆ ಸುಮಾರಿಗೆ ಶರಣ ಮಹಾಂತೇಶ ಅಗಡಿ, 64, ಅಂಗಡಿಯಲ್ಲಿದ್ದಾಗ ಹೃದಯಾಘಾತವಾಗಿ, ಬಾಪೂಜಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ತಾಯಿ, ಮಡದಿ, ಮಗ, ಮಗಳು, ಮೊಮ್ಮಗನ ಜೊತೆಗೆ ನಾಡಿನ ಅಸಂಖ್ಯಾತ ಶರಣ ಬಳಗವನ್ನು ಅಗಲಿದ್ದಾರೆ.
ಅಗಡಿ ಅವರು ಉದ್ಯಮಿಗಳಾಗಿ ಕಾಯಕಶೀಲರಾಗಿ ಬಸವಾದಿ ಶರಣರ ವಿಚಾರಗಳನ್ನು ಪಾಲಿಸುತ್ತಿದ್ದರು. ಶರಣರ ವಿಚಾರಗಳಿಗೆ ಅಗೌರವ ಆದಾಗ ಗಟ್ಟಿಯಾಗಿ ನಿಂತು ಪ್ರತಿಭಟಿಸುವ ಅಪ್ಪಟ ಅಭಿಮಾನಿಯಾಗಿದ್ದರು.
ದಾವಣಗೆರೆ ಭಾಗದಲ್ಲಿ ಬಸವ ತತ್ವ ಬೆಳೆಸುವಲ್ಲಿ ಬಹಳ ಶ್ರಮಿಸುತ್ತಿದ್ದರು. ಸದಾ ಕಾಯಕ ಶೀಲರಾಗಿದ್ದ ಅವರ ನೊಸಲ ಮೇಲೆ ವಿಭೂತಿ ಸದಾ ರಾರಾಜಿಸುತ್ತಿತ್ತು.

ಎಲ್ಲಾ ಬಸವಪರ ಸಂಘಟನೆಗಳನ್ನು ಒಗ್ಗೂಡಿಸಿ ದಾವಣಗೆರೆ ನಗರದಲ್ಲಿ ಪ್ರಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ ಮಾಡಿರುವುದರಲ್ಲಿ ಇವರ ಪಾತ್ರ ಬಹುಮುಖ್ಯವಾದುದಾಗಿತ್ತು.
ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಲಿಂಗಾಯತ ಕಾಯಕ ಜೀವಿಗಳ ಒಕ್ಕೂಟ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು, ಆಸೆ ಕೈಗೂಡುವ ಮೊದಲೇ, ಕಾಯಕದಲ್ಲಿ ನಿರತರಾಗಿಯೇ ಲಿಂಗೈಕ್ಯರಾಗಿ ಬಸವಾಭಿಮಾನಿಗಳಿಗೆ ತುಂಬಲಾರದ ನಷ್ಟ ಆಗಿದೆ.
ಇಂತಹ ಮಹನೀಯರಾದ ಮಹಾಂತೇಶ ಅಗಡಿ ಅವರ ಕುಟುಂಬದವರಿಗೆ ಬಸವಾದಿ ಶರಣರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಬುಧವಾರ 1 ಗಂಟೆಗೆ ದಾವಣಗೆರೆಯ ಶಾಮನೂರ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಸಾಣೇಹಳ್ಳಿ ಶ್ರೀಗಳಿಂದ ಶೋಕ ಸಂದೇಶ
ದಾವಣಗೆರೆ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭೆಯ ಸಕ್ರಿಯ ಸದಸ್ಯ. ಬಸವತತ್ವದ ಬಗ್ಗೆ ಅಪಾರ ಕಾಳಜಿಯುಳ್ಳ ಉತ್ಸಾಹಿಗಳು. ಬಸವ ಸಂದೇಶ ಸಾರುವ ಕಾರ್ಯಕ್ರಮಗಳು ಎಲ್ಲೇ ನಡೆದರೂ ಹಾಜರಿರುತ್ತಿದ್ದರು.
ಹಣೆಯ ಮೇಲೆ ಸದಾ ಭಸ್ಮ, ಕೊರಳಲ್ಲಿ ಇಷ್ಟಲಿಂಗ, ಬಾಯಲ್ಲಿ ವಚನ ಸಾಹಿತ್ಯ ಅವರ ಬದುಕಿನ ವಿಧಾನ. ಅಂತಹ ಶರಣ ಮಹಾಂತೇಶ ಅಂಗಡಿ ಅವರು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ಅವರ ಮನೆತನಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ನಷ್ಟ. ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿಯನ್ನು ಬಸವಾದಿ ಶರಣರು ಕರುಣಿಸಲಿ ಎಂದು ಹಾರೈಸುತ್ತೇವೆ.
- ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ
ಅಪ್ಪಟ ಬಸವ ನಿಷ್ಠರು, ಗಣಾಚಾರಿಗಳು, ವೈಚಾರಿಕರೂ ಆಗಿದ್ದ ಬಸವ ಗಣಾಚಾರಿ ಮಹಂತೇಶ ಅಗಡಿಯವರು ಲಿಂಗೈಕ್ಯರಾಗಿದ್ದು ಗಣಾಚಾರಿ ಪಡೆಗೆ ತುಂಬಲಾರದ ನಷ್ಟವಾಗಿದೆ. ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭೆಯಲ್ಲಿ ಬಹಳ ಅಚ್ಚುಕಟ್ಟಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ಶರಣ ಮಹಂತೇಶ ಅಗಡಿ ಅವರು ವ್ಯಾಪಾರಸ್ಥರಾಗಿದ್ದರೂ ಯಾವುದೆ ಪ್ರಗತಿಪರ ಸಭೆ ಇರಲಿ ತಪ್ಪದೆ ಸಭೆಗಳಿಗೆ ಹಾಜರಿದ್ದು ಉಪಯುಕ್ತವಾದ ಸಲಹೆಗಳನ್ನು ಕೊಡುತ್ತಿದ್ದರು.
ಲಿಂಗಾಯತ ಸಮಾಜ ಹೇಗೆ ಕಟ್ಟಬೇಕು ಯಾವ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ವಿಚಾರಗಳನ್ನು ತಿಳಿಸಿದ್ದಾರೆ ಅವು ನಮ್ಮಲ್ಲಿ ಅವರ ನೆನಪಾಗಿ ಉಳಿಯುತ್ತವೆ.
ಅವರ ಲಿಂಗಚೈತನ್ಯಕ್ಕೆ ಅನಂತ ಶರಣು ಶರಣಾರ್ಥಿಗಳನ್ನು
ಸಲ್ಲಿಸಿ ಅವರ ದುಖತಪ್ತ ಕುಟುಂಬಕ್ಕೆ ಬಸವಾದಿ ಶರಣರು ಧೈರ್ಯನೀಡಲಿ ಎಂದು ಪ್ರಾರ್ಥಿಸುತ್ತೇನೆ.
– ಕುಮಾರಣ್ಣ ಪಾಟೀಲ
– ಹುಬ್ಬಳ್ಳಿ
ಲಿಂಗಾಯತ ಚಳುವಳಿಯ ಚೖತನ್ಯವೊಂದು ಮರೆಯಾದದ್ದು ಯಾತನೆಯ ಸಂಗತಿ. ಸದಾ ಉತ್ಸಾಹದಿಂದ ಯುವಕರನ್ನು ಪ್ರೋತ್ಸಾಹಿಸಿ, ಹುರಿದುಂಬಿಸಿ ಬಸವ ತತ್ವ ಪ್ರಚಾರದಲ್ಲಿ ತೊಡಗುವಂತೆ ಮಾಡುತ್ತಿದ್ದ ಚೇತನ ಅಗಡಿ ಮಹಾಂತೇಶಣ್ಣನವರು. ತನಃ ಮನ ದನ ಸವೆಸಿ ಬಸವ ಕೖಂಕರ್ಯ ಮಾಂಡಿದ ತಮ್ಮ ಕಿಂಕರತ್ವ ಅನುಕರಣೀಯ. ಹೊಗಿ ಬನ್ನಿ, ನಿಮ್ಮ ಹಾದಿಯಲ್ಲಿ ನಾವೂ ಸಾಗಿ ಬರುತ್ತೇವೆ…
ಶರಣು ಶರಣಾರ್ಥಿ
🥲🙏
ಬಸವಣ್ಣನವರ ಕೃಪೆ ಸದಾ ನಿಮ್ಮ ಮೇಲಿರಲಿ
ಶರಣ ಶ್ರೀ ಮಹಾಂತೇಶ ಅಗಡಿ ದಾವಣಗೆರೆ ಲಿಂಗಾಯತ ಧರ್ಮ ಪ್ರಮುಖ ಹೊರಾಟಗಾರರು ಲಿಂಗೈಕ್ಯ ಆಗಿದ್ದಾರೆ ಎಂದು ತಿಳಿಸಲೂ ವಿಷಾದಿಸುತ್ತೇನೆ :
ತೀವ್ರ ಹೃದಯಾಘಾತಕ್ಕೆ ಒಳಗಾದ ಅಗಡಿಯವರು
ಬಾಪೂಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಯ್ಯೋ ವಿಧಿ, ನನ್ನ ಪರಮಾಪ್ತರು, ಹೋದ ತಿಂಗಳು ಕುಟುಂಬ ಸಹಿತ ಅವರ ಮನೆಗೆ ಭೇಟಿ ಮಾಡಿ ಪ್ರಸಾದ ಮಾಡಿ ಬಂದಿದ್ದೆವು. ಬಸವಾಭಿಮಾನಿ, ಲಿಂಗಾಯತ ಧರ್ಮ ಹೋರಾಟದಲ್ಲಿ ನಮ್ಮ ಜೊತೆ ಜೊತೆ ಸಂಪೂರ್ಣ ತೊಡಗಿಸಿಕೊಂಡಿದ್ದ ಶರಣ ಸರಳ ಜೀವಿ.
ಹೃದಯ ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.
ಅರಗಿಸಿಕೊಳ್ಳಲಾಗದ ದುಃಖದ ಸಂಗತಿ.
ಅಣ್ಣ ಮಹಾಂತೇಶ ಅಂಗಡಿಯಪರು ನಿಷ್ಠಾವಂತ ಬಸವ ಭಕ್ತ, ಗಣಾಾಚಾರಿ, ಜಾಗತಿಕ ಲಿಂಗಾಯತ ಮಹಾಸಭೆಯ ಅತ್ಯುತ್ತಮ ಸಂಘಟಕ.
ಅಂತಿಮ ಶರಣು ಶರಣಾರ್ಥಿಗಳು🙏💐💐
ಅಗಲಿದ ಚೇತನಕ್ಕೆ 🌷🌴🙏
*ಶರಣ ಶ್ರೀ ಮಹಾಂತೇಶ ಅಗಡಿ ದಾವಣಗೆರೆ ನಮ್ಮ ವೇದಿಕೆಯ ಹಿರಿಯ ಸದಸ್ಯರು ಶರಣೆ ನಳಿನೀ ಮಹಾಗಾ0ವಕರ ಇವರ ಅಣ್ಣ ಅಪ್ಪಟ ಬಸವ ಭಕ್ತರು ಲಿಂಗಾಯತ ಹೋರಾಟದ ಅಗ್ರಗಣ್ಯರು ಇಂದು ಬಯಲಲ್ಲಿ ಬಯಲಾಗಿದ್ದಾರೆ ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರೋಣ*