ಅಳವಂಡಿ
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ನುಲಿಯ ಚಂದಯ್ಯ ಜಯಂತಿ ಹಾಗೂ ಹುಲಿಗೆಮ್ಮದೇವಿ ಜಾತ್ರೆ ಅಂಗವಾಗಿ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕೊರಮ ಸಮಾಜದ ರಾಜ್ಯ ಕಾರ್ಯದರ್ಶಿ ಕಂಬಣ್ಣ ಬಗನಾಳ ‘12ನೇ ಶತಮಾನದ ಶರಣರಲ್ಲಿ ನುಲಿಯ ಚಂದಯ್ಯ ಸಹ ಒಬ್ಬರಾಗಿದ್ದರು. ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಸಮಾಜ ಸುಧಾರಣೆಯಲ್ಲಿ ಅವರ ವಚನಗಳು ದಾರಿದೀಪವಾಗಿವೆ’ ಎಂದು ಹೇಳಿದರು.
ತಳಿರು, ತೋರಣ, ಹಾಗೂ ಹೂಗಳಿಂದ ಅಲಕೃತಗೊಂಡ ತೆರೆದ ವಾಹನದಲ್ಲಿ ಚಂದಯ್ಯ ಹಾಗೂ ಹುಲಿಗೆಮ್ಮ ದೇವಿಯ ಅವರ ಭಾವಚಿತ್ರವನ್ನಿರಿಸಿ ಮಹಿಳೆಯರ ಕಳಸ, ಕುಂಭ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ನಂತರ ಅನ್ನ ದಾಸೋಹ ಸೇವೆ ನಡೆಯಿತು.
ಅಖಿಲ ಕರ್ನಾಟಕ ಕೊರಮ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಓಜನಳ್ಳಿ ಮಾತನಾಡಿದರು.
ಪ್ರಮುಖರಾದ ರವಿ ಭಜಂತ್ರಿ, ರಮೇಶ ಭಜಂತ್ರಿ, ಜಿಲ್ಲಾಧ್ಯಕ್ಷ ಸಂತೋಷ ಭಜಂತ್ರಿ, ಮರಿಯಪ್ಪ ಭಜಂತ್ರಿ, ಮಹಾಂತೇಶ ಭಜಂತ್ರಿ, ರಂಗಪ್ಪ ಭಜಂತ್ರಿ, ಶ್ರೀಕಾಂತ ಭಜಂತ್ರಿ, ಶ್ರೀಕಾಂತ ಭಜಂತ್ರಿ, ಮಾರುತಿ ಭಜಂತ್ರಿ ಇತರರು ಇದ್ದರು.