ಗಡಿಭಾಗದ ಮಕ್ಕಳ ಪ್ರತಿಭೆಗೆ ದಿವ್ಯಾಂಜಲಿ ಸಾಕ್ಷಿ: ಗುರುಬಸವ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಕನ್ನಡದ ಜೀ ಕನ್ನಡ ವಾಹಿನಿಯ ಮಹಾನಟಿ ಸೀಜನ್ 2ರ ಸ್ಪರ್ಧೆಗೆ ಆಯ್ಕೆಯಾಗಿರುವ ಬೀದರ್‌ನ ದಿವ್ಯಾಂಜಲಿ ಅವರನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸನ್ಮಾನಿಸಿ, ಆಶೀರ್ವದಿಸಿದರು.

ಬೆಂಗಳೂರಿನಲ್ಲಿ ದಿವ್ಯಾಂಜಲಿ ಅವರನ್ನು ಪೂಜ್ಯರು ಬುಧವಾರ ಭೇಟಿಯಾಗಿ ಗಡಿ ಜಿಲ್ಲೆ ಬೀದರ್‌ನಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ ಎನ್ನುವುದಕ್ಕೆ ದಿವ್ಯಾಂಜಲಿ ಸಾಕ್ಷಿಯಾಗಿದ್ದಾರೆ. ಉತ್ತಮ ಅವಕಾಶ, ಸೂಕ್ತ ವೇದಿಕೆ ಲಭಿಸಿದರೆ ಗಡಿಭಾಗದ ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆ ಹೊರ ಬರಲಿದೆ’ ಎಂದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಬಡವರು, ದೀನ ದುರ್ಬಲ, ನಿರಾಶ್ರಿತರ ಬೆಳೆವಣಿಗೆಗೆ ಬದುಕು ಮೀಸಲಿಟ್ಟಿದ್ದಾರೆ. ಅನಾಥ ಮಕ್ಕಳ ಸೇವೆಯಲ್ಲಿ ಬಸವಣ್ಣನವರನ್ನು ಕಾಣುತ್ತಿದ್ದಾರೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಅನ್ನ, ಅಕ್ಷರ, ಆಶ್ರಯ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಅದರಲ್ಲಿ ದಿವ್ಯಾಂಜಲಿ ಕೂಡ ಒಬ್ಬರಾಗಿದ್ದು, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಆಶೀರ್ವಾದಿಂದ ಉತ್ತಮ ಶಿಕ್ಷಣ, ಸಂಸ್ಕಾರ ಪಡೆದಿರುವ ದಿವ್ಯಾಂಜಲಿ ಕಲೆಯನ್ನು ಆರಾಧಿಸುತ್ತಿದ್ದಾಳೆ’ ಎಂದರು.

ದಿವ್ಯಾಂಜಲಿಗೆ ಮಹಾನಟಿ ಸ್ಪರ್ಧೆಯಲ್ಲಿ ಅವಕಾಶ ಲಭಿಸಿದ್ದು ಅದರ ಸದುಪಯೋಗ ಪಡೆದು ಉತ್ತಮವಾಗಿ ಅಭಿನಯಿಸಿ ಸ್ಪರ್ಧೆಯಲ್ಲಿ ಮುಂದಿನ ಎಲ್ಲ ಸುತ್ತುಗಳಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ’ ಎಂದು ಹಾರೈಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *