ಹೆಬ್ಬಾಳ ಬಸವ ಭವನದಲ್ಲಿ ಶಿವಶರಣ ಕುಂಬಾರ ಗುಂಡಯ್ಯ ಜಯಂತಿ ಆಚರಣೆ

ಹುಕ್ಕೇರಿ

ತಾಲೂಕಿನ ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ ಬುಧವಾರ ಶಿವಶರಣ ಕುಂಬಾರ ಗುಂಡಯ್ಯ ಅವರ ಜಯಂತಿ ಹಾಗೂ ಮಾಸಿಕ ಶಿವಾನುಭವ ಗೋಷ್ಠಿ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಜಗದ್ಗುರು ಸಿದ್ದಬಸವೇಶ್ವರ ಶೂನ್ಯ ಸಂಪಾದನ ಮಠ, ಹುಣಸಿಕೊಳ್ಳ ಪೂಜ್ಯರಾದ ಸಿದ್ದಬಸವ ದೇವರು ವಹಿಸಿ ಶರಣರ ವಚನಗಳು ಬದುಕಿನ ದಾರಿದೀಪಗಳಾಗಿವೆ. 12ನೇ ಶತಮಾನದ ಶಿವ ಶರಣರು ಕಾಯಕಕ್ಕೆ ಅತಿ ಹೆಚ್ಚು ಮಹತ್ವ ಕೊಟ್ಟವರು, ಕುಂಬಾರ ಗುಂಡಯ್ಯ ಶರಣರು ಕೂಡ ಬೇಡೆನಗೆ ಕೈಲಾಸ ಎಂದು ಹೇಳಿ ಕಾಯಕದಲ್ಲಿ ಕೈಲಾಸ ಕಂಡವರು ಎಂದು ಅನುಭಾವ ನೀಡಿದರು.

ಕಾರ್ಯಕ್ರಮದ ನೇತೃತ್ವವನ್ನು ಯೋಗೀನಾಥ್ಳ ಶರಣರು ವಹಿಸಿದ್ದರು. ಅಕ್ಕನ ಬಳಗದ ಶರಣೆ ಸವಿತಾ ಚಿಲಮಿ, ಕೆಂಪವ್ವಾ ಮುನ್ನೊಳಿಯವರು ಪ್ರಾರ್ಥನೆ ನೆರವೇರಿಸಿದರು. ಶರಣ ಮಹೇಶ್ ಕಾಡಗಿ, ಶರಣೆ ಸಂಗೀತಾ ಕುಂಬಾರ ವಚನ ಗಾಯನ ಮಾಡಿದರು.

ಕುಂಬಾರ ಗುಂಡಯ್ಯ ಮಹಿಳಾ ಸಂಘದವರು ದಾಸೋಹ ಸೇವೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಅಕ್ಕನ ಬಳಗದ ವಿದ್ಯಾ ಮಾಳಗಿ, ಅಶ್ವಿನಿ ಚಿಲಮಿ, ಶೋಭಾ ಜರಳಿ, ಶೈಲಾ ಖೋತ್, ಸುರೇಶ ಕಂಕಣವಾಡಿ, ಶಂಕರ ಶೆಟ್ಟೆನ್ನವರ್, ಪರಪ್ಪ ಗುಂಡಿ, ಸಂತೋಷ ನಾವಲಗೇರ, ಮಹೇಶ ಕುಂಬಾರ, ಬಸವರಾಜ ಮಾಳಗಿ, ಅಶೋಕ ನಾರಾಯಣಕರ, ದಾಸೋಹ ಬಳಗದ ಶರಣರು ಹಾಗೂ ಸಂಕೇಶ್ವರ ರಾಷ್ಟ್ರಿಯ ಬಸವದಳದ ಹಿರಿಯರಾದ ಶಂಕರಗೌಡ ದೇಸಾಯಿ, ಮಹದೇವ ಕುಂಬಾರ, ಸೇರಿದಂತೆ ಗ್ರಾಮದ ನೂರಾರು ಜನ ಶರಣ ಶರಣೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀನಿಧಿ ತೋಳಿ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.