ಹುಬ್ಬಳ್ಳಿಯಲ್ಲಿ ಮಕ್ಕಳಿಗೆ ಇಷ್ಟ ಲಿಂಗ ಪೂಜೆ, ಸಹಜ ಶಿವಯೋಗ ಕಾರ್ಯಕ್ರಮ

ಹುಬ್ಬಳ್ಳಿ

ಶ್ರಾವಣ ಮಾಸದ ನಿಮಿತ್ತ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗೆ ಇಷ್ಟ ಲಿಂಗ ಪೂಜೆ ಮತ್ತು ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು.

ಭಾನುವಾರ ಬೆಳಿಗ್ಗೆ 7-30 ಘಂಟೆಗೆ ಕಾರ್ಯಕ್ರಮವನ್ನು ಶರಣೆ ನಿರ್ಮಲಾ ಬುರ್ಲಬಡ್ಡಿ ಹಾಗು ಶರಣೆ ಅನಿತಾ ಕುಬಸದ ನಡೆಸಿಕೊಟ್ಟರು. ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಘಂಟೆಕೇರಿ ಓಣಿ ವತಿಯಿಂದ ರಾಜು ಕುಸುಗಲ್, ಉಮೇಶ್ ಸಿಂಧಗಿ, ಪಲ್ಲವಿ ದುಂಬಾಳಿ, ಶೋಭಾ ದುರದುಂಡಿಮಠ. ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದರು.

ಕಾರ್ಯಕ್ರಮ ನಂತರ ಮಕ್ಕಳಿಗೆ ಅಲ್ಫೋಪಹಾರ ನೀಡಲಾಯಿತು. ಮಕ್ಕಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಲು ಪಾಲಕರಲ್ಲಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *