‘ಕುಂಕುಮ ಆದ್ರೂ ಹಾಕೊಳ್ಳಿ, ಬಟ್ಟೆ ಬಿಚ್ಚಿಯಾದ್ರು ಅಡ್ಡಾಡ್ರಿ…ಇನ್ನೊಬ್ರಗ್ ಯಾಕೆ ಬೈತಿಯೋ’‘
ಇಳಕಲ್ಲ
ಲಿಂಗಾಯತ ಪೂಜ್ಯರನ್ನು ಬಸವ ತಾಲಿಬಾನಿಗಳು ಎಂದು ನಿಂದಿಸಿರುವ ಕನ್ನೇರಿ ಸ್ವಾಮಿಯನ್ನು ಶಾಸಕ ವಿಜಯಾನಂದ ಏಕವಚನದಲ್ಲಿಯೇ ತರಾಟೆ ತೆಗೆದುಕೊಂಡಿದ್ದಾರೆ .
ಬಾಗಲಕೋಟೆಯಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಉಚ್ಚಾಟಿತ ಬಿಜೆಪಿ ಮುಖಂಡ ಈಶ್ವರಪ್ಪ ಕನ್ನೇರಿ ಸ್ವಾಮಿಯ ಪದಬಳಕೆಯನ್ನು ಸಮರ್ಥಿಸಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಇಳಕಲ್ಲ ಪಟ್ಟಣದಲ್ಲಿ ಮಾತನಾಡಿದ ಕಾಶಪ್ಪನವರ “ಕನ್ನೇರಿ ಸ್ವಾಮಿ ಒಂದಿನ ಬಡಿಸಿಕೊಳ್ತಾರೆ ಅಷ್ಟೇ. ಒಂದು ಧರ್ಮದ ಬಗ್ಗೆ, ಯಾರ ಬಗ್ಗೆಯಾದ್ರೂ ಕೀಳಾಗಿ ಮಾತಾಡಿದ್ರೆ ಜನ ಬಿಡ್ತಾರಾ, ಬಡಿಯೋರು ಇದ್ದಾರೆ,” ಎಂದು ವಾಗ್ಧಾಳಿ ನಡೆಸಿದರು.
“ಇವನೇನ್ರಿ ಬಾಯಿಗೆ ಬಂದಂಗ ಮಾತಾಡೋದು, ಕಾವಿ ಹಾಕಿದ ಇವರ ಬಾಯಾಗ ಬರುವ ಮಾತೇನ್ರಿ ಅವು. ಕಾವಿ ಬಿಚ್ಚಿ ಖಾದಿ ಹಾಕೊಂಡು ಬರೋಕೆ ಹೇಳಿ ಅವನಿಗೆ ಮಾತಾಡ್ತಿವಿ ಆವಾಗ,” ಎಂದು ಎಚ್ಚರಿಕೆ ನೀಡಿದರು.
ಕನ್ನೇರಿ ಸ್ವಾಮಿಯನ್ನು ನೇರವಾಗಿ ಉದ್ದೇಶಿಸಿ ಮಾತನಾಡುತ್ತ “ಜನರ ಹಾದಿ ತಪ್ಪಿಸುತ್ತಿಲ್ವಾ ನೀನು? ರಾಷ್ಟ್ರದಲ್ಲಿ ಬೆಂಕಿ ಹಚ್ಚುವ ಕೆಲಸಾ ಮಾಡ್ತಿಲ್ವಾ ನೀನು? ತಪ್ಪಲ್ವಾ ಇದು.
…ಕುಂಕುಮ ಆದ್ರೂ ಹಾಕೊಳ್ಳಿ, ನಾಮ ಆದ್ರೂ ಹಾಕೊಳ್ಳಿ, ತಲೆ ಆದ್ರೂ ಬೋಳಿಸ್ಕೊಳ್ಳಿ, ಬಟ್ಟೆ ಬಿಚ್ಚಿಯಾದ್ರು ಅಡ್ಡಾಡ್ರಿ, ನಿಮಗ್ಯಾರ ಬ್ಯಾಡ ಅಂತಾರ ಇನ್ನೊಬ್ರಗ್ ಯಾಕೆ ಬೈತಿಯೋ,” ಎಂದು ಕೇಳಿದರು.
ಕಾವಿ ಹಾಕ್ಕೊಂಡು ಬಾಯಿಗೆ ಬಂದಂಗ ಮಾತಾಡಿದ್ರೆ ಯಾರೂ ಕೇಳಂಗಿಲ್ವಾ ಈ ಕನ್ನೇರಿ ಸ್ವಾಮಿಯನ್ನ… ಅವನಿಗೆ ನಾನೇ ಶ್ರೇಷ್ಠ, ನಾನೇ ದೇವ್ರು ಅನ್ನುವ ಮದ ಏರಿದೆ…ಕನ್ನೇರಿ ಸ್ವಾಮಿ ಆಕಾಶದಿಂದ ಉದುರಿ ಬಂದಿದ್ದಾನಾ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶ ಬೇಡ ಅಂದ್ರೆ ಬೇರೆ ದೇಶ ಕಟ್ಟಿಕೊಂಡು ಹೋಗಿ…ಸನಾತನ ಧರ್ಮಕ್ಕ ಹೋಗ್ರಿ, ಮನುಸ್ಮೃತಿಗಾದ್ರೂ ಹೋಗ್ರಿ ಇಲ್ಲಾ ಯಾವುದರ ಧರ್ಮ ಕಟ್ಕೊಂಡ ಹೋಗಿ, ಪ್ರತ್ಯೇಕ ಮಾಡಿಕೊಳ್ಳಿ, ಎಂದು ಕಾಶಪ್ಪನವರ ಹೇಳಿದರು.

ಶರಣು,
ಶಾಸಕರು ಸರಿಯಾಗಿ ಹೇಳಿದ್ದಾರೆ, ಯಾರಿಗೂ ನಿಂದನೆ ಮಾಡಬಾರದು..
ಮಾನ್ಯ ಶಾಸಕರು ಸರಿಯಾಗಿ ಉಗಿದ್ದಿದ್ದಾರೆ .ಹೀಗೆ ಎಲ್ಲಾ ಬಸವಪರ ರಾಜಕೀಯ ನಾಯಕರು, ಸ್ವಾಮಿಗಳಿಗೆ ಹೀಗೆ ಝಾಡಿಸುತ್ತಾ ಇರಬೇಕು.
ಈ ಕನೇರಿಗೆ ಇಂಥ ಭಾಷೆನೆ ಅರ್ಥ ಆಗುತ್ತೆ ಅವನಿಗೆ ಯಾವ ಭಾಷೆ ಅರ್ಥ ಆಗುತ್ತೊ ಅದೆ ಭಾಷೆಯಲ್ಲಿ ಹೇಳಬೇಕು.
ಒಂದು ಸಾರಿ ಇಲಕಲಗೆ ಬಂದು ಈ ರೀತಿ ಭಾಷಣ ಮಾಡಲಿ
ಆವಾಗ ಗೊತ್ತಾಗುತೈತೆ, ಕನೇರಿಗೆ.
He said it right, Badisikullaka Bandana.
ಕನ್ನೇರಿ ಸ್ವಾಮಿ ಕೇವಲ ಕೇವಲ ಬಸವ ಅನುಯಾಯಿಗಳಿಗೆ ಮಾತ್ರ ಬಸವ ತಾಲಿಬಾನಿ ಎಂದು ಕರೆದಿಲ್ಲ.ಅಲ್ಲಿ ಬಸವಣ್ಣನವರ ಹೆಸರನ್ನು ಉಲ್ಲೇಖಿಸಿ ತಾಲಿಬಾನಿ ಎಂದು ಕರೆದಿದ್ದಾನೆ.ಹಾಗಾದರೆ ಬಸವಣ್ಣ ತಾಲಿಬಾನಿ ಆಗಿದ್ದಾರೆ?. ಈತ ಯಾವ ಧರ್ಮದ ಅಡಿಯಲ್ಲಿ ಸನ್ಯಾಸತ್ವ ಸ್ವಿಕರಿಸಿದ್ದಾನೆ.RSS ತಾಲಿಬಾನಿ ಎಂಬ ಧಮ೯ದ ಅಡಿಯಲ್ಲಿ ಸನ್ಯಾಸತ್ವ ಸ್ವಿಕರಿಸಿದ್ದಾನೆಯೇ?
ಬಸವತತ್ವ ಸಿದ್ದಾಂತದ ಲಾಭ ಮತ್ತು ಹಾನಿಬಗ್ಗೆ. ಬಸವಧರ್ಮ ಎಲ್ಲರಿಗೂ ಲೆಸನ್ನೆಬಯಸುವ, ಲೋಕದ ಜನರೆಲ್ಲಾ ಆ ಪರಮಾತ್ಮನ ಮಕ್ಕಳೆಂಬ ಅರಿವಿರಲಿ ಎಂಬುದು ಆಶಯ. ಧರ್ಮದ ಅನುಕೂಲ ಮತ್ತು ಅನುನುಕೂಲದ ಬಗ್ಗೆ ಏನಾದ್ರೂ ಹೇಳಿದ್ದಾರೆ ಉತ್ತಮ. ಆದರೆ ವೈಕ್ತಿಕವಾಗಿ ಟೀಕೆ ಟಿಪ್ಪಣಿಗಳನ್ನು ಮಾಡುವದು ಅದೂ ಸಭೆಗಳಲ್ಲಿ, ಬಹಳ ವಿಷಾದನೀಯ. ಒಬ್ಬ ತ್ಯಾಗಿ, ಸನ್ಯಾಸಿಗಳು ಯಾವದೇ ಕಾರಣಕ್ಕೂ ಕೂಡ ಬಸವ ತತ್ವ ದ ಅನುಯಾಯಿಗಳ ಬಗ್ಗೆ, ಅವಹೇಳನ ಸಲ್ಲದು.
ಶರಣು ಶರಣಾರ್ಥಿ, ಎಲ್ಲರಿಗೂ ಶುಭವಾಗಲಿ.
ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಈತನಿಗೆ “ನೀನು ಉತ್ತಮ ಪ್ರಜೆಯಲ್ಲ, ಬೇರೆ ಯಾವುದಾದರೂ ಮಠದಲ್ಲಿ ಮೌನ ಧ್ಯಾನ ಮಾಡು” ಎಂದು ಛೀಮಾರಿ ಹಾಕಿದೆ. ಇವನು ಉತ್ತಮ ಪ್ರಜೆಯೇ ಅಲ್ಲ, ಅಂದಮೇಲೆ ಸ್ವಾಮಿಯಾಗಲು ಹೇಗೆ ಅರ್ಹನಾಗುತ್ತಾನೆ?? ಈಗ
ಮತ್ತೊಮ್ಮೆ ಈತ ತನ್ನ ನಾಲಿಗೆ ಹರಿಬಿಟ್ಟು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿ ಅಪರಾಧ ಮಾಡಿದ್ದಾನೆ. ಅಲ್ಲದೆ ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಅಪರಾಧ ಕೂಡ ಮಾಡಿದ್ದಾನೆ. ಬೇಗನೆ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತು ಕೇಸ್ ದಾಖಲು ಮಾಡಬೇಕು.
ಎಲ್ಲಾ ಲಿಂಗಾಯತ ಶಾಸಕರು ಕನ್ನೇರಿಯ ಅಸಂವಿಧಾನಿಕ ಮಾತುಗಳನ್ನು ಖಂಡಿಸಬೇಕು ಈ ನಿಟ್ಟಿನಲ್ಲಿ ಶಾಸಕರಾದ ಕಾಶಪ್ಪನವರು ಕನ್ನೇರಿಯ ಹೇಳಿಕೆ ಖಂಡಿಸಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
Great sir
ಕನೇರಿ ಮಠ ಅಥವಾ ಕನ್ಹೆರಿ ಮಠ,,
ಸರಿ ಸುಮಾರು ಎಳನೆ ಶತಮಾನದಿಂದ ಕಾಣಸಿಗುವ ಈ ಮಠದ ಪರಂಪರೆ ನಿರಮನ್ ಕಾಡಸಿದ್ದೇಶ್ವರರಿಂದ ಪ್ರಾರಂಭವಾಗುತ್ತದೆ,,
ಇವತ್ತು ಈ ಮಠವು ಮಹಾರಾಷ್ಟ್ರದ ಭಾಗವಾಗಿದ್ದರೂ ಕನ್ನಡನಾಡಿನ ಭವ್ಯ ಶರಣ ಪರಂಪರೆ ಹೊಂದಿದ ಮಠ,,,
ಅದು ಅಂದಿನಿಂದಲೂ ಶರಣ-ಸೂಫಿ ಪರಂಪರೆಯ ಮಠವಾಗಿ ಬೆಳೆದುಬಂದಿದೆ,,ಇದರಲ್ಲಿ ಮುಖ್ಯವಾಗಿ ಹದಿನೇಳನೆ ಶತಮಾನದಲ್ಲಿ ಪೀಠಾದಿಪತಿಗಳಾಗಿ ಬಂದ “ನಿರ್ಮಾಯ ಕಾಡಸಿದ್ದೇಶ್ವರ” ಸ್ವಾಮಿಗಳು ಪ್ರಸಿದ್ದರು,,
ಮಠದ ೪೯ನೇ ಪೀಠಾಧಿಪತಿಯಾಗಿ ಬಂದ ಅವರು ಸಮಾಜದಲ್ಲಿ ಬಹು ಬದಲಾವಣೆಗೆ ಶ್ರಮಿಸಿದರು,,
ಇವರು ಮಹಾರಾಷ್ಟ್ರದ ಸಿದ್ದಗಿರಿಮಠದ ಪರಂಪರೆಯವರೂ ಹಾಗು ಸೂಫಿ ಪರಂಪರೆಯ ಶರಣರೂ ಹೌದು,,,
ಕಾಡಸಿದ್ದೇಶ್ವರ ಮಠವು ಎಂದಿನಿಂದಲೂ ತನ್ನದೇ ಆದ ಗೌರವವನ್ನು ಹೊಂದಿದೆ,,ಭಾರತದಲ್ಲಿನ ಭಾವೈಕ್ಯತೆಯ ಪ್ರತೀಕವಾದ ಹಲವು ಮಠಗಳಲ್ಲಿ ಕಾಡಸಿದ್ದೆಶ್ವರ ಮಠವೂ ಒಂದು ಬಲವಾದ ಕೊಂಡಿಯಾಗೆ ಕಾಣಸಿಗುತ್ತದೆ,ಸಮಾಜದಲ್ಲಿನ ಉಚ್ಛ ನೀಚ,ಶ್ರೇಷ್ಠ ಕನಿಷ್ಠ, ಮೇಲು ಕೀಳು,ಜಾತಿವೈಷಮ್ಯ,ಕೋಮುವಾದ ಹೀಗೆ ಸಮಾಜದ ಎಳಿಗೆಗೆ ಮಾರಕವಾದ ಅನಿಷ್ಠ ಆಚರಣೆಗಳನ್ನ ಧಿಕ್ಕರಿಸಿಕೊಂಡೆ ಬೆಳೆದಿದೆ,,
ಮೊದಲಿನಿಂದಲೂ ಭಾವೈಕ್ಯತೆಯ ಮೂಲ ಪರಂಪರೆಯ ಈ ಮಠಕ್ಕೆ ಸೂಫಿ ಪರಂಪರೆಯ ಅವಿನಾವಭಾವ ಸಂಬಂಧ,,,
ಕಾಡಸಿದ್ದೇಶ್ವರ ಎಂಬ ಹೆಸರು ಮಹಮ್ಮದಿಯರ ಬಾಯಲ್ಲಿ “ಜಂಗ್ಲಿಸಾಬ್” ಆಗಿ ಅದೆಷ್ಟೊ ಮಹಮ್ಮದಿಯರ ಹೆಸರಾಗಿರುವದೂ ಸಹ ಭಾವೈಕ್ಯತೆಯ ದ್ಯೋತಕವೂ ಹೌದು,,,,
೪೯ ನೆ ಪೀಠಾಧಿಪತಿಯಾಗಿದ್ದ ನಿರ್ಮಾಯ ಕಾಡಸಿದ್ದೇಶ್ವರರು ಸರಿ ಸುಮಾರು ೫೦೪ ವಚನಗಳನ್ನ ರಚಿಸಿದ್ದಾರೆ,,ಹನ್ನೆರಡನೆ ಬಸವಾದಿ ಪರಂಪರೆಯ ಅಪ್ಪಟ ಅನುಯಾಯಿಗಳಾದ ಶರಣ ಪರಂಪರೆಯ ಈ ಮಠದ ಪೀಠಾಧಿಪತಿಗಳು ಅದೇ ನಿಟ್ಟಿನಲ್ಲಿ ವಚನಗಳನ್ನ ರಚಿಸಿ ಸಮಾಜದ ಓರೆಕೋರೆಗಳನ್ನ ತಿದ್ದಿ ತೀಡಿದ್ದಾರೆ,,
“ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ” ಎಂಬ ನಾಮಾಂಕಿತದಿಂದ ರಚಿತವಾದ ವಚನಗಳು ಬಹು ಜನಪ್ರಿಯತೆಯನ್ನ ಪಡೆದುಕೊಂಡಿವೆ,,
ಅವರ ಎರಡು ವಚನಗಳನ್ನೂ ಇಲ್ಲಿ ನಿಮ್ಮೆಲ್ಲರ ಜತೆ ಹಂಚಿಕೊಂಡಿದ್ದೆನೆ,,,
ಇಂತಹ ಭಾವೈಕ್ಯದ ಸಂಕೇತವಾದ ದೇಶದ ಶರಣಪರಂಪರೆಯ ಒಂದು ಮಹಾನ್ ಮಠಕ್ಕೆ ಒಕ್ಕರಿಸಿರುವದೊಂದು “ಕೋಮುವಾದದ ವೈರಸ್”
ಇವತ್ತಿನ ಸಿದ್ದೇಶ್ವ
ಬಸವಾದಿ ಶರಣರ ಸಮಾನತೆಯ ಸಾರವನ್ನ ಚೆಲ್ಲಿ ಸನಾತನಿಗಳ ಶ್ರೇಣಿಕೃತ ವರ್ಣವ್ಯವಸ್ತೆಯ,ಜಾತಿವ್ಯವಸ್ತೆಯ ತಳಹದಿಗೆ ತನ್ನನ್ನೆ ಸಮರ್ಪಿಸಿಕೊಂಡ ಕೋಮುವ್ಯಾದಿ ರಕ್ಕಸಮನಸ್ಥಿತಿಯ ಠಕ್ಕನೊಬ್ಬ ಅವನ್ನ ಮರೆಮಾಚಲು ಖಾವಿಧರಿಸಿ ನಡೆಯುತ್ತಿರುವದು ಸಮಾಜದ ಅಧಪತನದ ಸಂಕೇತವೇ ಹೌದು,,,
ಶ್ರೇಷ್ಠ ಸಮಾನತೆ,ಭಾವೈಕ್ಯತೆ,ಶಾಂತಿ ಸಹೋದರತ್ವದ ಕಾಡಸಿದ್ದೇಶ್ವರ ಮಠವನ್ನ ಇಂತಹ ನೀಚ ಮನಸ್ಥಿತಿಯ ಠಕ್ಕ ಖಾವಿಧಾರಿಗಳಿಂದ ಕಾಪಾಡಬೇಕಾದದ್ದು ಹಾಗು ಮಠದ ಪರಂಪರೆಯನ್ನ ಉಳಿಸಿ ಬೆಳೆಸ ಬೇಕಾದದ್ದು ಈ ನಾಡಿನ ಪ್ರತಿಯೊಬ್ಬ ಶರಣ ಚಿಂತನೆಗಳ ಅನುಯಾಯಿಗಳ ಕರ್ತವ್ಯ,,,
ಜೈ ಬಸವೇಶ,ಜೈ ಸಮಾನತೆಯ ಕಾಡಸಿದ್ದೇಶ,,🙏