ಕೊಲ್ಲಾಪುರ (ಮಹಾರಾಷ್ಟ್ರ)
ಬಸವ ಭಾರತಿ ಸಂಘಟನೆ ಅಡಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಕ್ಕಳಿಗಾಗಿ 5 ದಿನದ ಬಸವತತ್ವ ಅಧ್ಯಯನ ಶಿಬಿರ ನಡೆಯಿತು.
ಲಿಂಗಾಯತ ಧರ್ಮದ ಇತಿಹಾಸ, ಧರ್ಮಗ್ರಂಥಗಳು, ಇಷ್ಟಲಿಂಗ ಯೋಗ, ವಿವಿಧ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವಿಷಯಗಳ ಕುರಿತು ಉಪನ್ಯಾಸ ನೀಡಲಾಯಿತು, ಉತ್ಸಾಹಭರಿತ, ಆಸಕ್ತಿಯುತ ಚರ್ಚೆಗಳು ನಡೆದವು. ಯೋಗಾಸನಗಳು ಮತ್ತು ಹೊರಾಂಗಣ ಆಟಗಳು ಸಹ ನಡೆದವು.