ಕೊಪ್ಪಳದಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಧರ್ಮದವರನ್ನು ನಿಂದಿಸಿರುವ ಕನ್ನೇರಿ ಕಾಡಸಿದ್ದೇ‍ಶ್ವರ ಸ್ವಾಮಿ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಬಸವಪರ ಸಂಘಟನೆಗಳು ಪ್ರತಿಭಟಿಸಿ ಸರ್ಕಾರವನ್ನು ಒತ್ತಾಯಿಸಿದವು.

ಕಾಡಸಿದ್ದೇಶ್ವರ ಸ್ವಾಮಿ ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಕಲಾಮಂಡಳಿಯೆಂದು ಟೀಕಿಸಿದ್ದಾರೆ. ಈ ರೀತಿಯ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿಭಂಗ ಮಾಡುವ, ಕೋಮುಗಲಭೆ ಸೃಷ್ಟಿಸುವ, ಜನರ ಮದ್ಯೆ ವಿಷಬೀಜ ಬಿತ್ತುವ ಈ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆಗ್ರಹಿಸಿವೆ.

ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಕೊಪ್ಪಳದ ತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಶೋಕ ವೃತ್ತದಿಂದ ಆರಂಭಗೊಂಡ ಮೆರವಣಿಗೆ ತಹಶೀಲ್ದಾರರ ಕಾರ್ಯಾಲಯದವರೆಗೆ ನಡೆಯಿತು.

ಪ್ರತಿಭಟನೆಯಲ್ಲಿ ಜೆ.ಎಲ್.ಎಂ. ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಜೇಶ ಸಸಿಮಠ, ಯುವಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟನ ಅಧ್ಯಕ್ಷ ಗುಡದಪ್ಪ ಹಡಪದ, ರಾಷ್ಟ್ರೀಯ ಬಸವದಳ ಅಧ್ಯಕ್ಷ ಶಿವಬಸಯ್ಯ ವೀರಾಪೂರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ ಕುಕನೂರ, ಕಾರ್ಯದರ್ಶಿ ಸೋಮನಗೌಡ ವಗರನಾಳ, ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ವಣಗೇರಿ, ಕಾರ್ಯದರ್ಶಿ ಶರಣಬಸನಗೌಡ ಪಾಟೀಲ, ವೀರಭದ್ರಪ್ಪ ನಂದ್ಯಾಳ, ಬಾಪುಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ನಾಲ್ವಾಡ, ತಾಲೂಕ ಬಣಜಿಗ ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣಾ ಬಳ್ಳೊಳ್ಳಿ, ಲಿಂಗಾಯತ ಮುಖಂಡರಾದ ಮಾರುತಿ ಅಂಗಡಿ, ಮಂಜುನಾಥ ಶೇಡದ, ಮುತ್ತಣ್ಣ ಬೀರಲದಿನ್ನಿ, ಪರಪ್ಪ ಗೊಂದಿಹೊಸಳ್ಳಿ, ಈಶಪ್ಪ ದಿನ್ನಿ, ದೇವೀಶ ಗಬ್ಬೂರ, ಶರಣಬಸವ ಬಳ್ಳಾರಿ, ರೇಣಕಪ್ಪ ಮಂತ್ರಿ, ಮಂಜುನಾಥ ಹಿರೇಮಠ, ಕಳಕಪ್ಪ ವಿವೇಕಿ, ಶಂಕ್ರಪ್ಪ ಟಣಕನಕಲ್, ಸಂಗಮೇಶ ಕಡಗದ, ಮಹಿಳಾ ಮುಖಂಡರಾದ ಈರಮ್ಮ ಕೊಳ್ಳಿ, ಶಿಲ್ಪಾ ಸಸಿಮಠ, ನಿರ್ಮಲಾ, ವಿಶಾಲಾಕ್ಷಿ, ಮಲ್ಲಮ್ಮ ಕಡಗದ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *