Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Reading: ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
Have an existing account? Sign In
Follow US
Basava Media > Blog > ಗ್ಯಾ ಲರಿ > ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
ಗ್ಯಾ ಲರಿ

ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 17, 2024
Share
List of Images 1/7
koppala rotti dasoha kalyana parva (1)
koppala rotti dasoha kalyana parva (2)
koppala rotti dasoha kalyana parva (3)
koppala rotti dasoha kalyana parva (4)
koppala rotti dasoha kalyana parva (5)
koppala rotti dasoha kalyana parva (6)
koppala rotti dasoha kalyana parva (7)
SHARE

ಕೊಪ್ಪಳ:

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ “ಕಲ್ಯಾಣ ಪರ್ವ” ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ ಜೋಳದ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ.

ಈ ಬೃಹತ್ ಕಾರ್ಯಕ್ರಮವನ್ನು ಡಾ. ಗಂಗಾ ಮಾತಾಜಿಯವರ ಬಸವಧರ್ಮ ಪೀಠದಿಂದ ಅಕ್ಟೋಬರ್ 18 ರಿಂದ 20ರವರೆಗೆ ಆಯೋಜಿಸಲಾಗಿದೆ.

ಮುಖ್ಯವಾಗಿ ಟಣಕನಕಲ್ ಗ್ರಾಮ ಹಾಗೂ ಹಟ್ಟಿ ಗ್ರಾಮದಿಂದ ಸುಮಾರು ನೂರು ಮನೆಯವರು ಇಷ್ಟೊಂದು ರೊಟ್ಟಿ ಮಾಡಿಕೊಟ್ಟಿದ್ದಾರೆ.

ಗ್ರಾಮದ ರೈತರಿಂದ ದಾಸೋಹದ ಮೂಲಕ ಸಂಗ್ರಹಿಸಲಾದ ಒಟ್ಟು ಮೂರು ಕ್ವಿಂಟಲ್ ಜೋಳವನ್ನು ಗಿರಣಿಗೆ ಹೊಯ್ದು ಹಿಟ್ಟು ಹಾಕಿಸಲಾಯಿತು. ನಂತರ ಹಿಟ್ಟನ್ನು ಹಂಚಿಕೊಂಡು ಪ್ರತಿ ಮನೆಯ ಶರಣೆಯರು ಕಳೆದೊಂದು ವಾರದಿಂದ ರೊಟ್ಟಿ ತಯಾರಿಸಿದರು. ನಂತರ ರೊಟ್ಟಿಗಳನ್ನು ಒಂದು ಕಡೆ ಸಂಗ್ರಹಿಸಿ ಇದೇ ಗ್ರಾಮಗಳಿಂದ ಸಮಾವೇಶದಲ್ಲಿ ಫಾಲ್ಗೊಳ್ಳುವವರ ಮೂಲಕ ವಾಹನಗಳಲ್ಲಿ ಬಸವ ಕಲ್ಯಾಣಕ್ಕೆ ಸಾಗಿಸಲಾಯಿತು.

ಕಳೆದ ಮೂರು ವರ್ಷದಿಂದ ಬಸವಭಕ್ತರಿಂದ ಈ ರೊಟ್ಟಿ ದಾಸೋಹ ಸೇವೆ ನಡೆದಿದೆ.

ಕಳೆದ ಎರಡು ವರ್ಷ ತಲಾ 05 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿತ್ತು, ಈ ವರ್ಷ 10 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ. ಅದರಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ದಾಸೋಹ ಮಾಡಲಾಗಿದೆ ಎಂದು ಬಸವಭಕ್ತರು, ರಾಷ್ಟ್ರೀಯ ಬಸವದಳದ ಕೊಪ್ಪಳ ಜಿಲ್ಲಾ ಮುಖಂಡರು ಆಗಿರುವ ಡಿ.ಟಿ. ಶಿವಬಸಯ್ಯ ಹೇಳುತ್ತಾರೆ.

ಸುಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುವ ಪ್ರತಿ ಶರಣ ಮೇಳಕ್ಕೆ 5 ಕ್ವಿಂಟಲ್ ಮಾದಲಿ(ಸಿಹಿಪದಾರ್ಥ)ಯನ್ನು ಸಹ ದಾಸೋಹ ಮಾಡುತ್ತಾ ಬಂದಿದ್ದೇವೆ ಎಂದು ಶಿವಬಸಯ್ಯ ಹೇಳಿದರು.

Share This Article
Twitter Email Copy Link Print
Previous Article ಶರಣರು ಮಠ ಕಟ್ಟಲಿಲ್ಲ, ಅನುಭವ ಮಂಟಪ ಕಟ್ಟಿದರು: ಚನ್ನಬಸವ ಶಿಕ್ಷಕರು
Next Article ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬೇಡ ಜಂಗಮ ಸಭೆಯಿಂದ ಹೊರನಡೆದ ವೀರಶೈವ ಜಂಗಮರು

By ರವೀಂದ್ರ ಹೊನವಾಡ June 16, 2025
ಚರ್ಚೆ

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

By ಬಸವ ಮೀಡಿಯಾ June 15, 2025
ಅರಿವು

ಸಾಣೇಹಳ್ಳಿ ಶ್ರೀಗಳಿಂದ ಸಾಂತ್ವನ, ರಂಭಾಪುರಿ ಶ್ರೀಗಳಿಂದ ಪಾದಸ್ಪರ್ಶ

By ಪಿ. ರುದ್ರಪ್ಪ ಕುರಕುಂದಿ June 16, 2025
ಚಾವಡಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

By ರವೀಂದ್ರ ಹೊನವಾಡ June 17, 2025
ಇಂದು

ಅಭಿಯಾನಕ್ಕೆ ಸಿದ್ಧವಾಗಲು ಜೂನ್ 30 ಲಿಂಗಾಯತ ಮಠಾಧೀಶರ ಸಮಾವೇಶ

By ರವೀಂದ್ರ ಹೊನವಾಡ June 20, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital