Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
ಗ್ಯಾ ಲರಿ

ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 17, 2024
Share
List of Images 1/7
koppala rotti dasoha kalyana parva (1)
koppala rotti dasoha kalyana parva (2)
koppala rotti dasoha kalyana parva (3)
koppala rotti dasoha kalyana parva (4)
koppala rotti dasoha kalyana parva (5)
koppala rotti dasoha kalyana parva (6)
koppala rotti dasoha kalyana parva (7)
SHARE

ಕೊಪ್ಪಳ:

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ “ಕಲ್ಯಾಣ ಪರ್ವ” ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ ಜೋಳದ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ.

ಈ ಬೃಹತ್ ಕಾರ್ಯಕ್ರಮವನ್ನು ಡಾ. ಗಂಗಾ ಮಾತಾಜಿಯವರ ಬಸವಧರ್ಮ ಪೀಠದಿಂದ ಅಕ್ಟೋಬರ್ 18 ರಿಂದ 20ರವರೆಗೆ ಆಯೋಜಿಸಲಾಗಿದೆ.

ಮುಖ್ಯವಾಗಿ ಟಣಕನಕಲ್ ಗ್ರಾಮ ಹಾಗೂ ಹಟ್ಟಿ ಗ್ರಾಮದಿಂದ ಸುಮಾರು ನೂರು ಮನೆಯವರು ಇಷ್ಟೊಂದು ರೊಟ್ಟಿ ಮಾಡಿಕೊಟ್ಟಿದ್ದಾರೆ.

ಗ್ರಾಮದ ರೈತರಿಂದ ದಾಸೋಹದ ಮೂಲಕ ಸಂಗ್ರಹಿಸಲಾದ ಒಟ್ಟು ಮೂರು ಕ್ವಿಂಟಲ್ ಜೋಳವನ್ನು ಗಿರಣಿಗೆ ಹೊಯ್ದು ಹಿಟ್ಟು ಹಾಕಿಸಲಾಯಿತು. ನಂತರ ಹಿಟ್ಟನ್ನು ಹಂಚಿಕೊಂಡು ಪ್ರತಿ ಮನೆಯ ಶರಣೆಯರು ಕಳೆದೊಂದು ವಾರದಿಂದ ರೊಟ್ಟಿ ತಯಾರಿಸಿದರು. ನಂತರ ರೊಟ್ಟಿಗಳನ್ನು ಒಂದು ಕಡೆ ಸಂಗ್ರಹಿಸಿ ಇದೇ ಗ್ರಾಮಗಳಿಂದ ಸಮಾವೇಶದಲ್ಲಿ ಫಾಲ್ಗೊಳ್ಳುವವರ ಮೂಲಕ ವಾಹನಗಳಲ್ಲಿ ಬಸವ ಕಲ್ಯಾಣಕ್ಕೆ ಸಾಗಿಸಲಾಯಿತು.

ಕಳೆದ ಮೂರು ವರ್ಷದಿಂದ ಬಸವಭಕ್ತರಿಂದ ಈ ರೊಟ್ಟಿ ದಾಸೋಹ ಸೇವೆ ನಡೆದಿದೆ.

ಕಳೆದ ಎರಡು ವರ್ಷ ತಲಾ 05 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿತ್ತು, ಈ ವರ್ಷ 10 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ. ಅದರಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ದಾಸೋಹ ಮಾಡಲಾಗಿದೆ ಎಂದು ಬಸವಭಕ್ತರು, ರಾಷ್ಟ್ರೀಯ ಬಸವದಳದ ಕೊಪ್ಪಳ ಜಿಲ್ಲಾ ಮುಖಂಡರು ಆಗಿರುವ ಡಿ.ಟಿ. ಶಿವಬಸಯ್ಯ ಹೇಳುತ್ತಾರೆ.

ಸುಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುವ ಪ್ರತಿ ಶರಣ ಮೇಳಕ್ಕೆ 5 ಕ್ವಿಂಟಲ್ ಮಾದಲಿ(ಸಿಹಿಪದಾರ್ಥ)ಯನ್ನು ಸಹ ದಾಸೋಹ ಮಾಡುತ್ತಾ ಬಂದಿದ್ದೇವೆ ಎಂದು ಶಿವಬಸಯ್ಯ ಹೇಳಿದರು.

Share This Article
Twitter Email Copy Link Print
Previous Article ಶರಣರು ಮಠ ಕಟ್ಟಲಿಲ್ಲ, ಅನುಭವ ಮಂಟಪ ಕಟ್ಟಿದರು: ಚನ್ನಬಸವ ಶಿಕ್ಷಕರು
Next Article ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಒಕ್ಕೂಟದ ಕರೆ

By ಶ್ರೀಧರ ಗೌಡರ, ಕೂಡಲಸಂಗಮ November 11, 2025
ಕಾರ್ಯಕ್ರಮ

ನೆನಹು: ಮನೆ ಮನದಲ್ಲಿ ಬಸವತತ್ವ ಬಿತ್ತಿದ ವೀರಭದ್ರಪ್ಪ ಕುರಕುಂದ

By ಬಸವಲಿಂಗಪ್ಪ ಬಾದರ್ಲಿ, ಸಿಂಧನೂರು November 10, 2025
ಚರ್ಚೆ

ಚರ್ಚೆ: ಕನ್ನೇರಿ ಸ್ವಾಮಿ ಪರವಾಗಿ ನಿಂತಿರುವ ನಾಯಕರಿಗೆ ಪಾಠ ಕಲಿಸಬೇಕು

By ವಿಶ್ವೇಶ್ವರಯ್ಯ ಬಿ. ಎಂ. November 10, 2025
ಚರ್ಚೆ

ತಪ್ಪಿಲ್ಲದಿದ್ದರೆ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ: ಶಿವಾನಂದ ಶ್ರೀ

By ರವೀಂದ್ರ ಹೊನವಾಡ November 12, 2025
ಚಾವಡಿ

ಬಾಲಯೇಸು ಜಾತ್ರೆಯಲ್ಲಿ ಕೊರಣೇಶ್ವರ ಸ್ವಾಮೀಜಿಗೆ ಪ್ರಶಸ್ತಿ ಪ್ರದಾನ

By ಬಸವ ಮೀಡಿಯಾ November 13, 2025
Previous Next

You Might Also Like

ಗ್ಯಾ ಲರಿ

ರಾಷ್ಟ್ರೀಯ ಬಸವದಳದ ದಾವಣಗೆರೆ ಜಿಲ್ಲಾ ಸಮ್ಮೇಳನ

ದಾವಣಗೆರೆ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು…

0 Min Read
ಗ್ಯಾ ಲರಿ

ಲಿಂಗಸುಗೂರಿನಲ್ಲಿ ವಚನ ತಾಡೋಲೆಗಳ ಪಲ್ಲಕ್ಕಿ ಉತ್ಸವ

ಲಿಂಗಸುಗೂರು ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ…

0 Min Read
ಗ್ಯಾ ಲರಿ

ನಿಜಾಚರಣೆ: ಮೈಸೂರಿನಲ್ಲಿ ಸಂಭ್ರಮದ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಮೈಸೂರು: ಬಸವೇಶ್ವರ ರಸ್ತೆಯ ಬಸವ ಕೇಂದ್ರದಲ್ಲಿ ಶರಣ ಅರವಿಂದಮೂರ್ತಿ ಅವರ ಮಡದಿ ಶಿಕ್ಷಕಿ ಶರಣೆ ಸೌಮ್ಯ ಅವರ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಭಾನುವಾರ ನಡೆಯಿತು. ಗರ್ಭದೀಕ್ಷಾ ಮತ್ತು…

0 Min Read
ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital