ಈ ಮಾತನ್ನು ಹೇಳುವ ಮಾನ್ವಿಯ ಪ್ರಸಿದ್ಧ ಕಲಾವಿದ, ವಾಜಿದ್ ಖಾದ್ರಿ, 65, ಅಪ್ಪಟ್ಟ ಬಸವ ಭಕ್ತರು.
ತಮ್ಮ ದೀರ್ಘ ವೃತ್ತಿ ಜೀವನದುದ್ದಕ್ಕೂ ಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮೇದರ ಕೇತಯ್ಯ ಮುಂತಾದ ಹಲವಾರು ಶರಣರ ಚಿತ್ರಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಸವಣ್ಣನವರ ಐವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ಬಿಡಿಸಿದ್ದೇನೆ, ಎನ್ನುತ್ತಾರೆ.
ಬಸವಣ್ಣ ಎಲ್ಲರಿಗೂ ಮುಖ್ಯವಾಗಿ ಕೆಳ ವರ್ಗದವರಿಗೆ ಸರಳ ದಾರಿ ತೋಷಿಸಿದರು. ಲಿಂಗಾಯತ ಧರ್ಮದಲ್ಲಿ ವೇಷಗಳಿಗೆ, ತೀರ್ಥಯಾತ್ರೆಗಳಿಗೆ, ಖರ್ಚು ಮಾಡಿಸುವ ಆಚರಣೆಗಳಿಗೆ ಪ್ರಾಮುಖ್ಯತೆಯಿಲ್ಲ. ಒಂದು ಲಿಂಗ ಹಿಡಿದು ಯಾರು ಬೇಕಾದರೂ ಪೂಜೆ ಮಾಡಬಹುದು. ಲಿಂಗ ಪೂಜೆಗಿಂತ ಕಾಯಕ ಮುಖ್ಯ.