“ಯಾರೋ ಅಟ್ಟಿಸಿಕೊಂಡು ಬಂದಾಗ ಬಸವಣ್ಣನವರು ಹೇಡಿಯಂತೆ ಹೊಳೆಗೆ ಹಾರಿಕೊಂಡರು ಎನ್ನುವ ಅರ್ಥ ಈ ಹೇಳಿಕೆಯಲ್ಲಿದೆ. ಇದು ಎಲ್ಲಾ ಪ್ರಜ್ಞಾವಂತರು, ಬಸವ ಅನುಯಾಯಿಗಳು ಖಂಡಿಸಲೇಬೇಕಾದ ವಿಷಯ.”
ಬೀದರ
‘ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ’ ಎಂದು ಭಾಷಣ ಮಾಡಿರುವ ಬಸವನಗೌಡ ಪಾಟೀಲ ಯತ್ನಾಳ್ ಅವರ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸೋಮವಾರ ಬೀದರಿನಲ್ಲಿ ವಕ್ಫ್ ಹೋರಾಟಕ್ಕೆ ಚಾಲನೆ ನೀಡುವಾಗ ಈ ವಿವಾದಾಸ್ಪದ ಭಾಷಣ ಮಾಡಿದರು. ವಕ್ಫ್ ನಿಂದ ನಿಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕಾದರೆ, ನೀವು ಮನೆಯಿಂದ ಹೊರ ಬಂದು ಹೋರಾಟ ಮಾಡಬೇಕಾಗುತ್ತದೆ. “ಜಮೀನು ಹೋದ್ರೂ ನೀವು ಹೊರಗ ಬರಲ್ಲ ಅಂದ್ರ ಬಸವಣ್ಣನವರ ಹಾಗೆ ತುಂಬಿದ ಹೊಳ್ಯಾಗ ಜಿಗಿಯಬೇಕು,” ಎಂದರು.
ಇಲ್ಲವಾದರೆ ಗಡ್ಡ ಬಿಟ್ಟು ಮುಸ್ಲಿಂ ಆಗ್ರಿ ಅಂತ ಕೈಯಿಂದ ಸನ್ಹೆ ಮಾಡಿದರು.
ಮಂಗಳವಾರ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ವೈರಲ್ ಆಗಿ ಬಸವ ಅನುಯಾಯಿಗಳ ವ್ಯಾಪಕ ಟೀಕೆಗೆ ಗುರಿಯಾಯಿತು.
ಯತ್ನಾಳರ ಭಾಷಣದ ವಿಡಿಯೋ ನೋಡಿ ಬಸವ ಮೀಡಿಯಾದ ಜೊತೆ ಮಾತನಾಡಿದ ಡಾ. ಪಂಚಾಕ್ಷರಿ ಹಳೇಬೀಡು ಅವರು ಇದನ್ನು ಎಲ್ಲಾ ಪ್ರಜ್ಞಾವಂತರು, ಬಸವ ಅನುಯಾಯಿಗಳು ಖಂಡಿಸಲೇಬೇಕಾದ ವಿಷಯ ಎಂದು ಹೇಳಿದರು.
ಯಾರೋ ಅಟ್ಟಿಸಿಕೊಂಡು ಬಂದಾಗ ಬಸವಣ್ಣನವರು ಹೇಡಿಯಂತೆ ಹೊಳೆಗೆ ಹಾರಿ ಸತ್ತರು ಎನ್ನುವ ಅರ್ಥ ಈ ಹೇಳಿಕೆಯಲ್ಲಿದೆ. ಯತ್ನಾಳರು ಈ ರೀತಿ ಹೇಳಲು ವಚನಗಳಲ್ಲಿ ಯಾವುದೇ ಸಾಕ್ಷ್ಯಾಧಾರ ಇಲ್ಲ. ವಚನಗಳನ್ನು ಸರಿಯಾಗಿ ಅಧ್ಯಯನ ಮಾಡಿರುವವರಿಗೆ ಬಸವಣ್ಣನವರ ಅಂತ್ಯ ಹೇಗಾಯಿತು, ಅವರ ಕೊನೆ ಘಳಿಗೆ ಹೇಗಿತ್ತು ಅನ್ನುವುದರಲ್ಲಿ ಸ್ಪಷ್ಟತೆ ಇದೆ. ಆದರೆ ಯತ್ನಾಳ್ ಈ ಅರಿವಿಲ್ಲದೆ ಅಪಚಾರ ಮಾಡಿದ್ದಾರೆ.
ಕೆಲವರು ಅಜ್ಞಾನದಿಂದ ಈ ರೀತಿ ಮಾತಾಡುತ್ತಾರೆ. ಕೆಲವು ವೈದಿಕಶಾಹಿ ಮನಸ್ಥಿತಿಯವರು ಸತ್ಯ ಗೊತ್ತಿದ್ದೂ ಬೇಕಂತಲೇ ಈ ರೀತಿ ಮಾತನಾಡುತ್ತಾರೆ. ಅವರ ಉದ್ಧೇಶ ಬಸವಣ್ಣನವರನ್ನು ತುಳಿಯುವುದು, ಲಿಂಗಾಯತ ಧರ್ಮ ಮತ್ತು ಬಸವತತ್ವ ಮೇಲೇಳದಂತೆ ನೋಡಿಕೊಳ್ಳುವುದು, ಎಂದು ಹೇಳಿದರು.
ಇಂತವರು ಲಿಂಗಾಯತ ಸಂಪ್ರದಾಯದಲ್ಲಿ ಹುಟ್ಟಿರುವ ಯತ್ನಾಳರನ್ನು ಛೂ ಬಿಟ್ಟು ನಮ್ಮ ಕೈಯಲ್ಲೇ ನಮ್ಮ ಗುರುವನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬೇರೆಯವರು ಹೊರಗಡೆ ನಿಂತು ಮಗನ ಕೈಯಲ್ಲೇ ಅಪ್ಪನನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ.
ಇಂತಹ ಮಾತುಗಳಿಂದ ಬಸವಣ್ಣನವರ ಅವಹೇಳನ ಆಗುವುದಿಲ್ಲ. ಅವರ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಇಲ್ಲಿ ನಡೆದಿರುವುದು ಯತ್ನಾಳರ ಮೂರ್ಖತನದ ಪ್ರದರ್ಶನ.
ಯತ್ನಾಳ ಪ್ರಬುದ್ಧತೆ ಏನು ಎಂದು ಎಲ್ಲರಿಗೂ ಗೊತ್ತಿಯುವ ವಿಷಯ. ತನ್ನ ಮುಖಕ್ಕೆ ತಾನೇ ಮಸಿ ಬಳೆದುಕೊಂಡಿದ್ದಾರೆ. ಇದರಿಂದ ಬಸವಣ್ಣನವರಿಗೆ ಏನೂ ಆಗದಿದ್ದರೂ ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬರೂ ಇದು ಖಂಡಿಸಬೇಕಾಗಿರುವ ವಿಷಯ, ಎಂದು ಡಾ. ಪಂಚಾಕ್ಷರಿ ಹಳೇಬೀಡು ಹೇಳಿದರು.
ಅವಿವೇಕದ ಪರಮಾವಧಿ,, ಲಂಗೋಟಿ ಸಹವಾಸ ಮಾಡಿದವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕ ಕಡಿದುಹೋಗುವುದು ಇವನೊಬ್ಬ ಉತ್ತಮ ಉದಾಹರಣೆ
ಬಸವಣ್ಣ ನವರ ಅಂತ್ಯದ ಬಗ್ಗೆ ಖಚಿತ ವಿಲ್ಲದ ಮೇಲೆ ಸುಮ್ಮನಿರಬೇಕು. ಊಹಪೋಹ ಸಲ್ಲದು.
ಬಸವನಗೌಡ ಪಾಟೀಲ್ ಯತ್ನಾಳ ಲಿಂಗಾಯತ ಧರ್ಮದಲ್ಲಿ ಹುಟ್ಟಿ ಲಿಂಗಾಯತ ಧರ್ಮ ಜನಕನ ಬಗ್ಗೆ ಹಗುರವಾಗಿ ಮಾತನಾಡುವ ಯತ್ನಾಳ ನಂತ ಮೂರ್ಖ ಮತ್ತೊಬ್ಬರಿಲ್ಲ.ಬಸವಾದಿ ಶರಣರ ಇತಿಹಾಸ ಇವನು ಓದಿಲ್ಲ ಬಸವಾದಿ ಶರಣರ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಅಘೋರ ನರಕಯಾತನೆ ಅನುಭವಿಸಿ ಇವರ ಜೀವನ ನಾಯಿಪಾಡಾಗುತ್ತದೆ.ಇದು ಸತ್ಯ ಸತ್ಯ ಸತ್ಯ.
ದೊಡ್ಡ ದೊಡ್ಡ ಮಠಾಧೀಶರು ಏನ್ ನಿದ್ದೆ ಮಾಡ್ತಾ ಇದ್ದೀರಿ ಒಬ್ಬರು ಇವನ ವಿರುದ್ಧ ಮಾತಾಡಲ ಬಸವ ಧರ್ಮ ಪ್ರತೀ ಒಬ್ಬರು ಇಂತಹ ಘಟನೆ ಸಹಿಸುವುದಿಲ್ಲ ಧರ್ಮ ಗುರು ಬಸವಣ್ಣ ಅವರ ಅವಮಾನ ಇಡೀ ಜಗತ್ತಿಗೆ ಅದ ಅವಮಾನ ಅತ್ ಕ್ಷಮೆ ಕೇಳಬೇಕು
ಅತಿಯಾಯಿತು
ನಾಚಿಕಿಯಾಗಬೇಕು ಇಂಥ ನಾಲಯಕ ರಾಜಕಾರಿಗಳು ತಮ್ಮ ಮಾತಿನ ಮೆಚ್ಚುಗೆ ಭರದಲ್ಲಿ ಯಾರಬಗ್ಗೆ ಏನ ಮಾತಾಡತಾಯಿದಿನಿ ಎಂಬ ಅರವಿಲ್ಲ ಧರ್ಮಗುರುವಿನ ಬಗ್ಗೆ ಇಂಥ ಮಾತು ಸಹಿಸಲ್ಲ ಲಿಂಗಾಯತ ನಾಗಿದ್ದಕ್ಕೆ ದಿಕ್ಕಾರವಿರಲಿ
ಲಿಂಗಾಯತರೆ ಎಳಿ ಎದ್ದೇಳಿ, ಗುರು ಬಸವಣ್ಣನವರ ಇತಿಹಾಸ ತಿರುಚುವವರ ಮತ್ತು ಅವಮಾನಿಸುವ ನರಿಗಳಿಗೆ ತಕ್ಕ ಪಾಠ ಕಲಿಸಿ
ಮಾನ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ತಾವು ತಮ್ಮ ರಾಜಕಾರಣವನ್ನು ಮಾಡಿ ಅದು ಯಾವ ಮಟ್ಟಕ್ಕಾದರೂ ತಾವು ತಿಳಿದುರಿ ಆ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ ಇದ್ದೇ ಇರುತ್ತದೆ ಆದರೆ ಇಂದು ವಿಶ್ವ ಗುರು ಬಸವಣ್ಣನವರ ಬಗ್ಗೆ ತಾವು ಆಡಿದ ಮಾತುಗಳು ಅಕ್ಷಯ ಅಪರಾಧದ ಆಗಿವೆ ಆದ್ದರಿಂದ ಸಾರ್ವಜನಿಕವಾಗಿ ತಾವು ಆ ಮಾತುಗಳಿಗೆ ಕ್ಷಮೆ ಕೇಳಬೇಕು ಇಲ್ಲವಾದರೆ ತಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ನಾವು ಬಂದು ತಮಗೆ ವಿರೋಧ ಮಾಡಲು ಸಿದ್ಧ ಆ ಸಂದರ್ಭವನ್ನು ತಾವು ಈಗ ತಂದು ಕೊಂಡಿದ್ದೀರಿ ತಮ್ಮ ಇತಿಹಾಸವನ್ನು ತಾವು ಮೊದಲು ತಿಳಿದುಕೊಳ್ಳಿ ತದನಂತರ ದೇಶದ ಇತಿಹಾಸದ ಬಗ್ಗೆ ಬಸವಣ್ಣನ ಇತಿಹಾಸದ ಬಗ್ಗೆ ತಾವು ತಿಳಿದುಕೊಳ್ಳಿ ಅಂತ ಬಸವಣ್ಣನವರ ಬಗ್ಗೆ ತಾವು ಹಾಡಿದ ಮಾತುಗಳಿಗೆ ನನ್ನದೊಂದು ನನ್ನ ಒಂದು ಪ್ರಶ್ನೆ ಕೂಡ ಇದೆ ಅಂದು ಶರಣರನ್ನು ಶಿಕ್ಷೆ ಕೊಟ್ಟವರು ಯಾರು ತಾವು ಹೇಳಿ ಮತ್ತು ಬಸವಣ್ಣನವರನ್ನು ಗಡಿ ಪಾರು ಮಾಡಿದವರು ಯಾರು? ತಾವು ಹೇಳಿ ಇಂದು ತಾವು ಯಾರ ಜೊತೆ ಸೇರಿ ಕೀಳು ಮಟ್ಟದ ರಾಜಕಾರಣ ಮಾಡಲು ಬೀದಿಗೆ ಹಿಡಿದಿದ್ದೀರಿ ಎಂಬುದನ್ನು ತಾವು ವಿವರಿಸಿ ನಿಮ್ಮ ಹೆಸರೇನು ನಿಮ್ಮ ಪೂರ್ವಜರ ಹೆಸರೇನು ಈಗ ತಾವು ಯಾರಿಗೋಸ್ಕರ ಈ ರೀತಿ ಹೋರಾಟ ಮಾಡುತ್ತಿದ್ದೀರಿ ಎಂಬುದನ್ನು ಹೇಳಿ ಇಲ್ಲವಾದರೆ ಜನಕ್ಕೆ ಈ ಪ್ರಶ್ನೆಗಳನ್ನು ನೀವು ಯಾವುದೇ ಕಾರ್ಯಕ್ರಮದಲ್ಲಿದ್ದರೂ ಪ್ರಶ್ನೆಗಳಿಗೆ ಉತ್ತರಿಸಿ. ಮುಂದೆ ಹೋಗಬೇಕಾದಂತ ಸಮಸ್ಯೆಯನ್ನ ತಾವು ತಂದು ಕೊಂಡಿದ್ದೀರಿ ಅದನ್ನು ಎದುರಿಸಲು ಸಿದ್ದರಾಗಿ ನಮ್ಮ ಹೋರಾಟ ನಿಮ್ಮ ಸೈಕ್ಯಾಂತಿಕ ನಿಲುವುಗಳ ಬಗ್ಗೆ ಇಂದಿನಿಂದ ಪ್ರಾರಂಭ
ತಲೆ ಸರಿಯಿಲ್ಲದ ಹಿಂದೂ ಧರ್ಮಾಂಧನೀತ. ಈತನ ಮಾತುಗಳು ಮಲಮೂತ್ರ ಸದೃಶ. ಬಸವ ತತ್ವ ಹಾಗೂ ಬಸವಣ್ಣನವರನ್ನು ಜಗತ್ತೇ ಆನೆಯ ಮೇಲಿಟ್ಟು ಮೆರವಣಿಗೆ ಮಾಡುವಾಗ ಈ ಬೀದಿ ನಾಯಿ ಬೊಗಳುವುದು ಸಹಜ ಏಕೆಂದರೆ ಬೊಗಳುವುದು ಅದರ ಜನ್ಮತಃ ಸ್ವಭಾವ ಅಷ್ಟೆ.
ಇವ ಲಿಂಗಾಯತ ಅಲ್ಲ ಅನ್ನುವುದು ಪ್ರೂವ್ ಆಯಿತು. ಇವ ನಾಮಧಾರಿ.
ಈತನಿಗೆ ಅದ್ಯಾರು ಗುರು ಬಸವಣ್ಣನವರ ಹೆಸರಿಟ್ಟಿದ್ದು??!!. ಇಂಥವರ ಬಾಯಲ್ಲಿ ಇಂಥ ಅಸಂಬದ್ಧ ಮಾತು ಬಂದಿದೆ ಅಂದರೆ ಅವರಿಗೆ ಕೇಡುಗಾಲ ಸಮೀಪಿಸಿದೆ ಎಂದೇ ಅರ್ಥ
ಇವರು ಬಸವ ಪ್ರಣೀತ ಲಿಂಗಾಯತ ಧರ್ಮ ನಿಂದನೆ ಮಾಡಿದ್ದಾರೆ. ಇವರಿಗೆ ರಾಜಕೀಯ ಬಹಿಷ್ಕಾರ ಹಾಕಲು ಎಲ್ಲಾ ಸ್ವಾಭಿಮಾನಿ ಲಿಂಗಾಯತರು ಒಟ್ಟಾಗಿ ಕರೆಕೊಡಬೇಕು.