ಕಲಬುರಗಿ
ಜ್ಞಾನಯೋಗಿ, ಪ್ರವಚನ ಕೇಸರಿ ವಿಜಯಪುರದ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಸದ್ಗುರು ಕಲಾ ಸಂಸ್ಥೆ ವತಿಯಿಂದ ಗಾಯನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಶಿವಲಿಂಗ ಕೆಂಗನಾಳ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಕೆಂಗನಾಳ ತಿಳಿಸಿದ್ದಾರೆ.
ಗಾಯನ ಸ್ಪರ್ಧೆ
ಸಿದ್ದೇಶ್ವರ ಶ್ರೀಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳ ಹಾಡುಗಳನ್ನು ಮಾತ್ರ ಹಾಡಬೇಕು.
ಈ ಸ್ಪರ್ಧೆಯಲ್ಲಿ 13ರಿಂದ 27 ವಯಸ್ಸಿನವರು ಭಾಗವಹಿಸಬಹುದು. ವಾದ್ಯ ಬಳಸಬಹುದು. ಗಾಯನದ ಅವಧಿ 8 ನಿಮಿಷವಿದ್ದು, ವಿಡಿಯೊ ಮೂಲಕ ಜನವರಿ 7, 2025ರೊಳಗೆ ಮೊಬೈಲ್ ಸಂಖ್ಯೆ 8310886409ಗೆ ವಾಟ್ಸಪ್ ವಿಡಿಯೋ ಕಳುಹಿಸಬೇಕು.
ಪ್ರಬಂಧ ಸ್ಪರ್ಧೆ
1000 ಪದಗಳ ಮಿತಿಯಲ್ಲಿ 15ರಿಂದ 27 ವಯಸ್ಸಿನವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಜನವರಿ 7, 2025ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.
ಅಂಚೆ ವಿಳಾಸ
ಶಿವಲಿಂಗ ಕೆಂಗನಾಳ, ಸಂಗೀತ ಕಲಾವಿದರು, ಮ.ನಂ. 8-1545/248, ಬಸವ ನಿಲಯ, ಭವಾನಿ ದೇವಸ್ಥಾನದ ಹತ್ತಿರ, ಶಿವಾಜಿ ನಗರ, ಅಂಚೆ: ಕಲಬುರಗಿ- 585104, ಮೊ. 8310886409