ಗದಗ
ಆಸ್ಟ್ರೇಲಿಯಾ ದೇಶದ ಪ್ರವಾಸಕ್ಕೆ ತೆರಳಿದ ಶರಣತತ್ವ ಚಿಂತಕರಾದ ಅಶೋಕ ಬರಗುಂಡಿಯವರನ್ನು ಬಸವಪರ ಸಂಘಟನೆಗಳ ವತಿಯಿಂದ ಸನ್ಮಾನಿಸಿ, ಪುಷ್ಪಗುಚ್ಛ ನೀಡಿ ಶುಭ ಹಾರೈಸಿ, ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ, ಹಿರಿಯ ಶರಣರಾದ ಎನ್. ಎಚ್. ಹಿರೇಸಕ್ಕರಗೌಡ್ರ, ಶೇಖಣ್ಣಾ ಕಳಸಾಪೂರಶೆಟ್ರ, ಪ್ರಕಾಶ ಅಸುಂಡಿ, ಎಸ್. ಎ. ಮುಗದ, ಎಂ.ಬಿ. ಲಿಂಗದಾಳ, ಬಸವರಾಜ ಹಿರೇಹಡಗಲಿ, ಸೋಮು ಪುರಾಣಿಕ, ಸಿದ್ಧಣ್ಣ ಅಂಗಡಿ ಉಪಸ್ಥಿತರಿದ್ದರು.