ಬ್ರಾಹ್ಮಣರು ಬೇಕಾದರೆ ಲಿಂಗಾಯತರನ್ನು ಮದುವೆಯಾಗಬಹುದು: ಮಂಗಳೂರು ಸಮ್ಮೇಳನದ ಮಾತು

ಬಸವ ಮೀಡಿಯಾ
ಬಸವ ಮೀಡಿಯಾ

ವರ್ಣಾಶ್ರಮ ತಪ್ಪು ಎಂದರೆ, ಇಡೀ ಧರ್ಮವೇ ಬಿದ್ದು ಹೋಗುತ್ತದೆ. ಇದು ಸುಳ್ಳು ಅಂತ ಹೇಳಿದರೆ ಕೃಷ್ಣ ದೇವರೇ ಅಲ್ಲ ಎಂದು ಹೇಳಿದ ಹಾಗೆ ಆಗುತ್ತದೆ, ಎಂದು ಆಸ್ರಣ್ಣ ಹೇಳಿದರು.

ಮಂಗಳೂರು

“ನಾನು ಎಷ್ಟೋ ಬ್ರಾಹ್ಮಣರಿಗೆ ಹೇಳಿದ್ದೇನೆ, ನೀವು ಬೇಕಾದರೆ ಲಿಂಗಾಯತರನ್ನು ಮದುವೆಯಾಗಿ ನಮಗೆ ಸರಿ ಹೊಂದತ್ತೆ ಅಂತ… ಬ್ರಾಹ್ಮಣರು ಮಾಂಸ ತಿನ್ನುವುದಿಲ್ಲ, ಅವರ ಆಹಾರ ಕ್ರಮ ಬೇರೆ. ಹಚ್ಚಿನ ಲಿಂಗಾಯತರೂ ಹಾಗೆಯೆ ಇದ್ದಾರೆ,” ಎಂದು ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.

ಬ್ರಾಹ್ಮಣರ, ಲಿಂಗಾಯತರ ನಡುವೆ, ವೈದಿಕ ಧರ್ಮೀಯರ ಮತ್ತು ಬಸವಣ್ಣನವರ ಅನುಯಾಯಿಗಳ ನಡುವೆ ಹೊಂದಾಣಿಕೆ ಇರಬೇಕು ಎಂದು ಸೂಚಿಸಲು ಈ ಮಾತನ್ನು ಶನಿವಾರ ವಚನ ಸಾಹಿತ್ಯ ಸಮ್ಮೇಳನದಲ್ಲಿ ಈ ಮಾತು ಹೇಳಿದರು.

ನಗರದಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನ ಸುತ್ತೂರು ಶ್ರೀಗಳ ಮತ್ತು ಪೇಜಾವರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಬಸವ ಸಮಿತಿಯ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು.

ನಾವೆಲ್ಲ ಒಂದಾಗಿರೋಣ

ನಮ್ಮ ಆಚಾರ ವಿಚಾರಗಳಲ್ಲಿ ಹೊಂದಾಣಿಕೆಯಾಗಬೇಕು. ಅದಕ್ಕಾಗಿಯೇ ಮೊದಲ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನಡೆಯುತ್ತಿದೆ. “ನಮ್ಮಲ್ಲಿಯೂ (ಕರಾವಳಿ ಪ್ರದೇಶದಲ್ಲಿ) ಶರಣ ಪದ ಬಳಕೆಯಲ್ಲಿದೆ. ದೇವರಲ್ಲಿ ಭಕ್ತಿ ಇರುವವರನ್ನು ಶರಣರು ಎಂದು ಕರೆಯುತ್ತೇವೆ.

ನಮ್ಮಲ್ಲಿನ ಜಗಳಕ್ಕೆ ಒಂದು ಪಂಥ ಹೊರ ಹೊರಡಬಾರದು, ನಮ್ಮಲ್ಲಿ ಒಮ್ಮತ ಇರಬೇಕು. ಇದೇ ಬಸವಣ್ಣನವರ ಪ್ರಧಾನ ಆಶಯವಾಗಿತ್ತು. ನಮ್ಮದು ದೊಡ್ಡದು, ನಮ್ಮದು ಸಣ್ಣದು ಎಂಬ ಜಗಳವನ್ನು ಬಿಟ್ಟು ನಾವೆಲ್ಲ ಒಂದಾಗಿರೋಣ, ಎಂಬ ಆಶಯ ವ್ಯಕ್ತಪಡಿಸಿದರು.

ಉಪನಿಷತ್ತು, ವಚನಗಳು ಒಂದೇ

ಸಂಸ್ಕೃತದಲ್ಲಿರುವುದನ್ನೇ ಸುಲುಭವಾಗಿ ವಚನಗಳು ಹೇಳಿದವು. ಒಂದೇ ತತ್ವವನ್ನು ಬೇರೆ ಬೇರೆ ಶಬ್ದಗಳಲ್ಲಿ ಹೇಳಲಾಗಿದೆ ಅಷ್ಟೇ. “ಉಪನಿಷತ್ತುಗಳಲ್ಲಿ ಇರುವುದನ್ನೇ ಸುಲುಭವಾಗಿ ವಚನಗಳು ಬಾಯಿಗೆ ಇರಿಸಿದವು. ಅದನ್ನು ನಾವು ಆಸ್ವಾದಿಸಬೇಕು,” ಎಂದು ಹೇಳಿದರು.

ಬಸವಣ್ಣನವರು ದೇಹವೇ ದೇಗುಲ ಎಂದರು. ‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ ಎಂಬ ಸಂಸ್ಕೃತದ ಶ್ಲೋಕ ಇದನ್ನೇ ಹೇಳುತ್ತದೆ.

ಎಷ್ಟೋ ವಿಷಯಗಳು ನಮ್ಮ ವೈದಿಕ, ಪೌರಾಣಿಕ, ಐತಿಹಾಸಿಕ ಸಂಸ್ಕೃತಿಗಳಲ್ಲಿ ಇವೆ. ಆದರೆ ಇವೆಲ್ಲ ಸಂಸ್ಕೃತದಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅದಕ್ಕೆ ನಮ್ಮ ತತ್ವಗಳು ಲೋಕಕ್ಕೆ ಕಾಣದ ರೀತಿಯಲ್ಲಿ ಇವೆ

ಈ ಸಮಸ್ಯೆಯಿಂದ ಮತ್ತು ನಮಗೆ “ಬೇಡದ ಸಂಸ್ಕೃತಿಗಳು” ಒಳ ಸೇರಿಕೊಂಡಿದ್ದರಿಂದ ನಮ್ಮೊಳಗೇ ವ್ಯತ್ಯಾಸಗಳು ಬಂದಿವೆ, ಎಂದರು.

(ಯಾವುದು “ಬೇಡದ ಸಂಸ್ಕೃತಿಗಳು” ಎಂದು ಆಸ್ರಣ್ಣ ಅವರು ಬಿಡಿಸಿ ಹೇಳಲಿಲ್ಲ. ಆದರೆ ವಚನ ಚಳುವಳಿಯನ್ನು ಸಮಾಜವಾದ. ಮಾರ್ಕ್ಸ್ ವಾದಗಳಂತಹ ಪಾಶ್ಚಾತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ಅರ್ಥೈಸಬಾರದೆಂದು ವಚನ ದರ್ಶನದ ಪುಸ್ತಕ ವಾದಿಸುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

ವರ್ಣಾಶ್ರಮ ಧರ್ಮದ ಆಧಾರ

ಬಸವಣ್ಣ ಜಾತಿ ಪದ್ದತಿಯ ವಿರುದ್ಧ ಸೆಟೆದು ನಿಂತರು. ಆದರೆ ವೈದಿಕ ಧರ್ಮದಲ್ಲಿ ಇದ್ದುದ್ದು ವರ್ಣಾಶ್ರಮ ಮಾತ್ರ, ಜಾತಿ ಪದ್ದತಿಯಲ್ಲ. ಭಗವದ್ಗೀತೆಯಲ್ಲಿ ಕೃಷ್ಣ ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗ ಎಂದು ಹೇಳುತ್ತಾನೆ.

ವರ್ಣಾಶ್ರಮ ತಪ್ಪು ಎಂದರೆ, ಇಡೀ ಧರ್ಮವೇ ಬಿದ್ದು ಹೋಗುತ್ತದೆ. ಇದು ಸುಳ್ಳು ಅಂತ ಹೇಳಿದರೆ ಕೃಷ್ಣ ದೇವರೇ ಅಲ್ಲ ಎಂದು ಹೇಳಿದ ಹಾಗೆ ಆಗುತ್ತದೆ, ಎಂದು ಆಸ್ರಣ್ಣ ಹೇಳಿದರು.

ಮಧ್ವಾಚಾರ್ಯರು ಹೇಳಿದಂತೆ ಒಳ್ಳೆಯ ಗುಣ ಶೂದ್ರನಲ್ಲಿ ಇದ್ದಾರೆ ಅವನನ್ನು ಬ್ರಾಹ್ಮಣ ಎಂದು ಪರಿಗಣಿಸಬೇಕು. ಬ್ರಾಹ್ಮಣನಲ್ಲಿ ಕೆಟ್ಟ ಗುಣವಿದ್ದರೆ ಅವನು ಶೂದ್ರನೆಂತಲೇ ಅರ್ಥ.

ಮೂಲ ಧರ್ಮವನ್ನು ಸರಿಯಾಗಿ ಪಾಲಿಸದೇ ಇರುವುದರಿಂದ ಈ ಸಮಸ್ಯೆ ಹುಟ್ಟಿದೆ. ಪೂರ್ವಾಗ್ರಹವಿಲ್ಲದೆ ಸಾಂದರ್ಭಿಕವಾಗಿ ಅರ್ಥಮಾಡಿಕೊಂಡು ಹೋದರೆ ವೈಮನಸ್ಸು ಬರುವುದಿಲ್ಲ, ಎಂದು ಹೇಳಿದರು.

Share This Article
4 Comments
  • ಎಷ್ಟೋ ವಿಷಯಗಳು ಸಂಸ್ಕೃತದಲ್ಲಿರುವದರಿಂದ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಅರ್ಥವಾಗುವಂತ ಕನ್ನಡದ ವಚನಗಳನ್ನು ಕೊಟ್ಟ ಲಿಂಗಾಯತ ಧರ್ಮ ಜನರಿಗೆ ಹತ್ತಿರವಾಗುತ್ತ ಬಹುಜನ ಮಾನಸದ ಧರ್ಮವಾಗಿದೆ

    • This fellow spoke about Shodras but not about Dalits
      Because utter that word for this Madhwa is pollution. Who ever participated in this Bhrshmanys programme are in a way Anti- Basava group. We should boycott them. Chaturvarna and Lingsystism are not same. They are poles apart. Lingayatism has rejected Chaturvarna lock stock and barell.

  • ಬಸವಣ್ಣನವರು ಕೃಷ್ಣನನ್ನು ವಸದೇವ ದೇವಕಿಗೆ ಹುಟ್ಟಿದಾತನೆಂದು ಹೇಳುತ್ತಾ, ಹುಟ್ಟಿ ಸತ್ತವರಾರು ದೇವರಲ್ಲವೆಂದು ಘೋಷಿಸುತ್ತಾರೆ. ಮಾಧ್ವರು ಇದನ್ನು ಒಪ್ಪಿಕೊಳ್ಳುವರೆ?

    ಬಸವಣ್ಣ
    ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
    ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ.
    ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
    ನಾಭಿರಾಜ ಮರುತಾದೇವಿಗೆ ಹುಟ್ಟಿದಾತನರುಹ
    ಇವರೆಲ್ಲರು ಯೋನಿಜರೆಂಬುದ ತ್ರೈಜಗ ಬಲ್ಲುದು.
    ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
    ಮಾತಾಪಿತರುಗಳುಳ್ಳಡೆ ಹೇಳಿರೊ !

    ಸಮಗ್ರ ವಚನ ಸಂಪುಟ: 1 ವಚನದ ಸಂಖ್ಯೆ: 545

Leave a Reply

Your email address will not be published. Required fields are marked *