ಭೈರನಹಟ್ಟಿ ಮಠದಲ್ಲಿ ಹರ್ಡೇಕರ ಮಂಜಪ್ಪನವರ ಜಯಂತ್ಯೋತ್ಸವ

ನರಗುಂದ

ನಾಡಿನಲ್ಲಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆಚರಣೆಗೆ ತಂದು ಆ ಮೂಲಕ ಬಸವತತ್ವದ ನಿಜಾಚರಣೆಯನ್ನು ಸಮಾಜಕ್ಕೆ ತಿಳಿಸಿದವರು ಹರ್ಡೇಕರ ಮಂಜಪ್ಪನವರು. ಅಪ್ಪಟ ಗಾಂಧೀಜಿಯವರ ಅನುಯಾಯಿಗಳಾದ ಅವರು ಸಮಾಜ ಸುಧಾರಕರು ದೇಶ ಪ್ರೇಮಿಯೂ ಸಂಘಟನಾ ಚತುರರಾಗಿದ್ದ ಮಂಜಪ್ಪನವರು ೧೯೨೭ರಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯ ಶಿಕ್ಷಣವನ್ನು ಪ್ರಾರಂಭಿಸಿ ಕರ್ನಾಟಕ ಗಾಂಧಿ ಎಂದು ಪ್ರಸಿದ್ದರಾಗಿದ್ದಾರೆ ಎಂದು ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವಿ ಗುಂಜೇಕರ ಬಣ್ಣಿಸಿದರು.

ಅವರು ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಭೈರನಹಟ್ಟಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಗಾಂಧೀ ಹರ್ಡೇಕರ ಮಂಜಪ್ಪನವರ ೧೩೯ ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತ, ದೇಶದಲ್ಲಿಯೇ ಮೊಟ್ಟ ಮೊದಲು ಗುರುಕುಲ ಮಾದರಿ ಶಿಕ್ಷಣವನ್ನು ಪ್ರಾರಂಭಿಸಿ ಸರ್ವರಿಗೂ ಶಿಕ್ಷಣದ ಹಕ್ಕನ್ನು ನೀಡಿದ ಮಹಾನ್ ಶಿಕ್ಷಣ ಪ್ರೇಮಿಯಾಗಿದ್ದರು.

೧೯೧೭ರಲ್ಲಿ ಕನ್ನಡ ನಾಡಿನಲ್ಲಿ ಭಜನಾ ಸಂಘ ಸ್ಥಾಪಿಸಿ ಅದನ್ನು ಅನೇಕ ಗ್ರಾಮಗಳಿಗೆ ವಿಸ್ತರಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಅವರ ತ್ವಾದರ್ಶಗಳು ಸರ್ವಕಾಲಿಕ ಎಂದು ಹೇಳಿದರು.

ಸಾನಿದ್ಯವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ಮಾತನಾಡಿ ಗಾಂಧಿಯವರ ಬೋಧನೆಗಳಿಂದ ಪ್ರೇರಿತರಾದ ಹರ್ಡೇಕರ ಮಂಜಪ್ಪನವರು, ಸಮಾಜಕ್ಕೆ ಸೇವೆ ಸಲ್ಲಿಸಲು ಬ್ರಹ್ಮಚರ್ಯ ಜೀವನವೇ ಅತ್ಯುತ್ತಮ ಮಾರ್ಗ ಎಂದು ನಿರ್ಧರಿಸಿದರು. ಅಹಿಂಸಾತ್ಮಕ ಪ್ರತಿರೋಧ ಮಾರ್ಗದ ಮಹತ್ವದ ಕುರಿತು ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಯಶಸ್ಸಿಗೆ ತಮ್ಮ ಶಕ್ತಿಯನ್ನು ಕೊಡುಗೆಯಾಗಿ ನೀಡಿದ ಶ್ರೇಷ್ಠ ರಾಷ್ಟ್ರಪ್ರೇಮಿ ಎನಿಸಿಕೊಂಡರು ಎಂದು ಅವರು ಹೇಳಿದರು.

೨ ನೇ ಶತಮಾನದ ಪ್ರಸಿದ್ಧ ಸಂತ, ಸಮಾಜ ಸುಧಾರಕ ಮತ್ತು ವಚನಕಾರ ಬಸವಣ್ಣನ ಬೋಧನೆಗಳಿಗೆ ಸೆಳೆಯಲ್ಪಟ್ಟ ಹರ್ಡೇಕರ್ ಮಂಜಪ್ಪನವರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಬಸವತತ್ವವನ್ನು ತಮ್ಮ ಭಾಷಣಗಳು ಮತ್ತು ಅವರ ಬರವಣಿಗೆಯ ಮೂಲಕ ಪ್ರಚಾರ ಮಾಡಿದರು. ಸಮಾರು ೨೦ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದರು, ಅವುಗಳಲ್ಲಿ ಹಲವು ಬಸವನ ತತ್ವಶಾಸ್ತ್ರದ ವಿವರಣೆಗೆ ಮೀಸಲಾಗಿವೆ ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮಣ ಮನೇನಕೊಪ್ಪ, ಯಲ್ಲಪ್ಪ ತೆಗ್ಗಿನಮನಿ, ಈರಪ್ಪ ಐನಾಪೂರ, ಮಹಾಂತೇಶ ಹಿರೇಮಠ ಪ್ರಮುಖರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *