ಇಂದು ರಾತ್ರಿ ಬಸವ ರೇಡಿಯೋ ಚರ್ಚೆ: ಕನ್ನೇರಿ ಶ್ರೀಗಳ ದೇಶೀ ಹಸು ಪುರಾಣ

ಬಸವ ಮೀಡಿಯಾ
ಬಸವ ಮೀಡಿಯಾ

ದೇಶೀ ಹಸುಗಳ ಬಗ್ಗೆ ಕನ್ನೇರಿ ಶ್ರೀಗಳು ಹೇಳುವ ಹಸಿ ಸುಳ್ಳುಗಳಿಗೆ ಡಾ. ಏನ್. ಬಿ. ಶ್ರೀಧರ್ ಅವರ ಪ್ರತಿಕ್ರಿಯೆ

ಬೆಂಗಳೂರು

ದೇಶೀ ಹಸು ಬಾಲವನ್ನು 360 ಡಿಗ್ರಿ ಸುತ್ತಿಸುತ್ತದೆಯಂತೆ. ಅದರ ಸಗಣಿಯನ್ನು ಒಂದೇ ಕೈಯಲ್ಲಿ ಎತ್ತಬಹುದಂತೆ. ಅದರ ಸಗಣಿಯಲ್ಲಿ ಉಪಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆಯಂತೆ.

ಎಲ್ಲಕ್ಕಿಂತ ಮುಖ್ಯವಾಗಿ ಅದರಲ್ಲಿರುವ ಸೂರ್ಯಕೇತು ನಾಡಿ ಕಾಸ್ಮಿಕ್ ಶಕ್ತಿಯನ್ನು ಸುವರ್ಣಕ್ಷಾರವಾಗಿ ಪರಿವರ್ತಿಸಿ ಹಾಲನ್ನು, ಮೂತ್ರವನ್ನು ದಿವ್ಯೌಷಧಿಯಾಗಿಸುತ್ತದೆಯಂತೆ. ಇವಕೆಲ್ಲಾ ವಿರುಧ್ಧವಾದ ಅವಗುಣಗಳು ವಿದೇಶ ಹಸುವಿನಲ್ಲಿದೆಯಂತೆ.

ಈ ಹೇಳಿಕೆಗಳೆಲ್ಲ ಸತ್ಯವೇ? ಇವುಗಳಿಗೆ ವೈಜ್ಞಾನಿಕ ಆಧಾರಗಳಿವೆಯೇ. ಇದರ ಬಗ್ಗೆ ಇಂದು ರಾತ್ರಿ ಡಾ. ಏನ್. ಬಿ. ಶ್ರೀಧರ್ ಅವರು ಮಾತನಾಡಲಿದ್ದಾರೆ.

ಇಂದಿನ ಕಾರ್ಯಕ್ರಮದ ವಿವರ

ದಿನಾಂಕ: 05-03-2025
ಸಮಯ: ರಾತ್ರಿ 8:30-9:30

ಚರ್ಚೆಯಲ್ಲಿ ಪಾಲ್ಗೊಳ್ಳುವವರು

ಡಾ. ಏನ್. ಬಿ. ಶ್ರೀಧರ್
ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು,
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

ಪ್ರಾಸ್ತಾವಿಕ, ಸಮಾರೋಪ ನುಡಿ,
ಹೆಚ್ ಎಂ ಸೋಮಶೇಖರಪ್ಪ

ಕಾರ್ಯಕ್ರಮ ನಿರ್ವಹಣೆ:
ಕುಮಾರಣ್ಣ ಪಾಟೀಲ್

ದಯವಿಟ್ಟು ಗಮನಿಸಿ:

1) ಡಾ. ಏನ್. ಬಿ. ಶ್ರೀಧರ್ 40 ನಿಮಿಷ ಮಾತನಾಡಲಿದ್ದಾರೆ. ನಂತರ 15 ನಿಮಿಷ ಮುಕ್ತ ವೇದಿಕೆ.

2) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.

3) ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/yfv-wtrr-xvp

ಎಲ್ಲರಿಗೂ ಸ್ವಾಗತ, ಶರಣು

Share This Article
1 Comment
  • Please share the video or audios file of this programme.. so others could share with many others.

Leave a Reply

Your email address will not be published. Required fields are marked *