ಒಂದು ಸಾರಿಯಲ್ಲ, ನೂರು ಸಾರಿ ಬಸವ ತಾಲಿಬಾನ್ ಅನ್ನುತ್ತೇನೆ: ಕನ್ನೇರಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಭಕ್ತರು ಸಂಯಮ ಕಾಯ್ದುಕೊಂಡರೂ ಕನ್ನೇರಿ ಶ್ರೀ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿ ಏಕವಚನವನ್ನೂ ಬಳಸಿದರು.

ಮಸ್ಕಿ

ಬಸವ ತಾಲಿಬಾನ್, ಹುಚ್ಚು ನಾಯಿಗಳು ಎಂದೆಲ್ಲಾ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿ ವಿವಾದ ಹುಟ್ಟಿಸಿರುವ ಕನ್ನೇರಿ ಶ್ರೀಗಳಿಂದ ಸ್ಪಷ್ಟನೆ ಪಡೆಯಲು ಸುಮಾರು 50 ಬಸವ ಅನುಯಾಯಿಗಳು ಅವರನ್ನು ಶುಕ್ರವಾರ ಭೇಟಿ ಮಾಡಿದರು.

ಮಾತುಕತೆಯಲ್ಲಿ ತಾವು ಸುವರ್ಣ ಟಿವಿಯಲ್ಲಿ ನೀಡಿದ ಹೇಳಿಕೆಗಳನ್ನು ಶ್ರೀಗಳು ಸಮರ್ಥಿಸಿಕೊಂಡಿದ್ದಲ್ಲದೆ ಒಂದು ಸಾರಿಯಲ್ಲ, ನೂರು ಸಾರಿ ಬಸವ ತಾಲಿಬಾನ್ ಎಂದು ಹೇಳುತ್ತೇನೆ ಎಂದು ಹೇಳಿದರು.

ಬಸವ ಭಕ್ತರು ಸಂಯಮ ಕಾಯ್ದುಕೊಂಡರೂ ಕನ್ನೇರಿ ಶ್ರೀ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿ ಏಕವಚನವನ್ನೂ ಬಳಸಿದರು. ಅದಕ್ಕೆ ಸ್ವಲ್ಪ ತೀಕ್ಷ್ಣ ಪ್ರತಿಕ್ರಿಯೆ ಬರುವ ಸೂಚನೆ ಕಾಣುತ್ತಿದ್ದಂತೆಯೇ ಚರ್ಚೆ ಮೊಟಕುಗಳಿಸಿ ಹೊರ ನಡೆದರು ಎಂದು ಸಭೆಯಲ್ಲಿ ಭಾಗವಹಿಸಿದ ಕೆಲವರು ಬಸವ ಮೀಡಿಯಾಗೆ ಹೇಳಿದ್ದಾರೆ.

ಇರಕಲ್ ಕಾರ್ಯಕ್ರಮ

ಮಸ್ಕಿ ತಾಲೂಕಿನ ಇರಕಲ್ಲಿನ ಕಾರ್ಯಕ್ರಮವೊಂದಕ್ಕೆ ಕನ್ನೇರಿ ಶ್ರೀ ಶುಕ್ರವಾರ ಬರುತ್ತಿದ್ದಾರೆಂದು ತಿಳಿದು ಅವರನ್ನು ಸಂಪರ್ಕಿಸಲು ಸಿಂಧನೂರಿನ ಬಸವಪರ ಸಂಘಟನೆಗಳ ಪ್ರಮುಖರು ಪ್ರಯತ್ನಿಸಿದರು.

ಎರಡು ಮೂರು ದಿನ ಕಾದರೂ ಕನ್ನೇರಿ ಶ್ರೀ ಭೇಟಿಯಾಗಲು ಒಪ್ಪಲಿಲ್ಲ. ಆಗ ಅವರಿಗೆ ಆಪ್ತರಾಗಿರುವ ಮತ್ತೊಬ್ಬ ಸ್ವಾಮೀಜಿಯವರ ಮೂಲಕ ಸಂಪರ್ಕಿಸಲಾಯಿತು. ಬಸವ ಸಂಘಟನೆಗಳು ಧಿಕ್ಕಾರ ಕೂಗುವುದಿಲ್ಲ, ಸಂಘರ್ಷ ಮಾಡಿಕೊಳ್ಳುವುದಿಲ್ಲ, ಸೌಮ್ಯ, ಗೌರವದಿಂದಲೇ ವರ್ತಿಸುತ್ತೇವೆ ಎಂದು ಮಾತು ಕೊಟ್ಟಾಗ ಕನ್ನೇರಿ ಶ್ರೀ ಭೇಟಿಯಾಗಲು ಒಪ್ಪಿದರು.

ಶುಕ್ರವಾರ ಮಧ್ಯಾಹ್ನ ಸಿರವಾರ ತಾಲೂಕಿನ ಪಾಮನಕೆಲ್ಲೂರಿನ ಖಾಸಗಿ ತೋಟವೊಂದರಲ್ಲಿ ರಾಯಚೂರು, ಸಿಂಧನೂರು, ಮಾನ್ವಿಗಳಿಂದ ಹೋಗಿದ್ದ ಸುಮಾರು 50 ಬಸವ ಭಕ್ತರು ಶ್ರೀಗಳನ್ನು ಭೇಟಿ ಮಾಡಿದರು.

ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದ ಬಸವಣ್ಣನವರ ಅನುಯಾಯಿಗಳನ್ನು ಬಸವ ತಾಲಿಬಾನ್ ಎಂದು ಕರೆದಿದ್ದು ಸರಿಯಲ್ಲ ಎಂದು ಪಿ. ರುದ್ರಪ್ಪ ಶ್ರೀಗಳಿಗೆ ಹೇಳಿದರು.

ಒರಟು ಮಾತು

ಅದಕ್ಕೆ ಶ್ರೀಗಳು ಯಾವುದೇ ಸ್ಪಷ್ಟನೆ ಕೊಡದೆ ತಾವು ಟಿವಿಯಲ್ಲಿ ಹೇಳಿದ್ದನ್ನೇ ಮುಂದುವರೆಸಿದರು.

  • > ತಾವು ಹೇಳಿದ್ದು ಕೆಲವರಿಗೆ ಅನ್ವಯಿಸುತ್ತೆ, ಅವರೇ ಸುಮ್ಮನಿರುವಾಗ ನೀವೇಕೆ ಬಂದಿದ್ದೀರಿ.
  • > ನಮ್ಮದು ಬಸವ ತತ್ವದ ಮಠ, ಆದರೆ ಬಸವಣ್ಣ ಸನಾತನ ಧರ್ಮವನ್ನು ತಿರಸ್ಕರಿಸಲಿಲ್ಲ. ಅಲ್ಲೊಂದು ಇಲ್ಲೊಂದು ವಚನಗಳು ಮಾತ್ರ ಸಾಂದರ್ಭಿಕವಾಗಿ ವೈದಿಕ ಧರ್ಮವನ್ನು, ವೇದಗಳನ್ನು ಖಂಡಿಸುತ್ತವೆ.
  • > ಕುಂಕುಮ ಹಾಕಬಾರದೆಂದು ಯಾವ ವಚನವೂ ಹೇಳಿಲ್ಲ
  • > ಚರ್ಚೆ ಇಲ್ಲಿ ಬೇಡ ನಮ್ಮ ಮಠಕ್ಕೆ ಬನ್ನಿ, ಬೇಕಾದರೆ ಅಜಿತ್ ಹನುಮಕ್ಕನವರಿಗೆ ಹೇಳಿ ಮತ್ತೆ ಟಿವಿಯಲ್ಲಿ ಚರ್ಚೆ ಏರ್ಪಡಿಸುತ್ತೇನೆ.

ಶ್ರೀಗಳು ಯಾರ ಪ್ರಶ್ನೆಯನ್ನು ಕೇಳುವ ತಾಳ್ಮೆ, ಉತ್ತರಿಸುವ ಸೌಜನ್ಯ ತೋರಿಸಲಿಲ್ಲ. ಬಹಳ ಸಿಟ್ಟಿನಲ್ಲಿದ್ದರು, ಯಾವುದೋ ಒತ್ತಡದಲ್ಲಿ ಇದ್ದಂತೆ ವರ್ತಿಸುತ್ತಿದ್ದರು, ಎಂದು ವೀರಭದ್ರಗೌಡ ಅಮರಾಪುರ ಹೇಳಿದರು.

ಮಧ್ಯವರ್ತಿಯಾಗಿ ಬಂದಿದ್ದ ಸ್ವಾಮೀಜಿಗೆ ಕೊಟ್ಟಿದ್ದ ಮಾತಿನಂತೆ ಬಸವ ಅನುಯಾಯಿಗಳು ಉದ್ವೇಗಕ್ಕೆ ಒಳಗಾಗದೆ ಸೌಜನ್ಯದಿಂದಲೇ ವರ್ತಿಸಿದರು. ಆದರೂ ಚರ್ಚೆ ಕಾವೇರಿತು.

ಅಹಂ, ಆಕ್ರೋಶ, ಅಹಂಕಾರ

ಶ್ರೀಗಳು ಕುಂಕುಮ ನಿರಾಕರಿಸುವ ಯಾವುದೇ ವಚನವಿಲ್ಲಾ ಎಂದರು. ಅದಕ್ಕೆ ಎಪ್ಪತೈದು ವರ್ಷದ ಹಿರಿಯರಾದ ವೀರಭದ್ರಗೌಡ ಅಮರಾಪುರ ಕುಂಕುಮ ಖಂಡಿಸುವ ಮಡಿವಾಳ ಮಾಚಿದೇವರ ವಚನವನ್ನು ಹೇಳಲು ಪ್ರಯತ್ನಿಸಿದರೂ ಶ್ರೀಗಳು ಅವಕಾಶ ಕೊಡಲಿಲ್ಲ. ಬದಲಾಗಿ ಅವರನ್ನು ಏಕವಚನದಲ್ಲಿ ಮಾತನಾಡಿಸಿದಾಗ ಎಲ್ಲಾ ಬಸವ ಭಕ್ತರು ಶ್ರೀಗಳ ಮೇಲೆ ಹರಿಹಾಯ್ದರು.

ಬಸವಭಕ್ತರು ತಾಲಿಬಾನಿಗಳು, ಹುಚ್ಚುನಾಯಿಗಳು ಹೇಳಿಕೆಯನ್ನು ಬಸವಲಿಂಗಪ್ಪ ಬಾದರ್ಲಿ ಉಗ್ರವಾಗಿ ಖಂಡಿಸಿದರು. ನೀವು ಬಳಸಿದ ಶಬ್ದ ನಿಮಗೆ ಶೋಭೆ ತರುವಂತಹದ್ದಲ್ಲ ಎಂದಾಗ ಶ್ರೀಗಳು ಅದೇ ಪದವನ್ನು ನೂರು ಬಾರಿ ಬಳಸುತ್ತೇನೆ ಎಂದಾಗ ನೆರೆದ ಬಸವ ಭಕ್ತರು ರೊಚ್ಚಿಗೆದ್ದರು.

ನೀವು ಬಳಸಿದಂತೆ ನಾವು ಪದ ಪ್ರಯೋಗ ಮಾಡಲು ಬರುತ್ತದೆ ಸ್ವಾಮಿಗಳು ಕಾಲಿಗೆ ಬುದ್ದಿ ಹೇಳಿದರು.

ಶ್ರೀಗಳಲ್ಲಿ ನಾವು ನೋಡಿದ್ದು ಸಿಟ್ಟು. ಇವರು ಬಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರಲ್ಲ ಎನ್ನುವ ಆಕ್ರೋಶ. ಅವರಲ್ಲಿ ಅಹಂ, ಅಹಂಕಾರ ತುಂಬಿಕೊಂಡಿದೆ. ಅವರು ಅಜ್ಞಾನದಿಂದ ಯಾವುದೊ ಬೇರೆ ಉದ್ದೇಶದಿಂದಲೇ ಮಾತನಾಡುತ್ತಿದ್ದುದು ಕಂಡು ಬಂತು, ಎಂದು ಸಭೆಯಲ್ಲಿ ಇದ್ದ ಒಬ್ಬರು ಹೇಳಿದರು.

ಶ್ರೀಗಳ ವರ್ತನೆಯಿಂದ ವಾತಾವರಣ ವಿಷಮಗೊಂಡಿತ್ತು. ಅವರು ಹೋದ ಮೇಲೆ ಪ್ರಾರ್ಥನೆ ಮಾಡಿದೆವು. ತೋಟದವರು ಕೊಟ್ಟ ಹಣ್ಣು ತಿಂದು ಬಂದೆವು, ಎಂದು ರುದ್ರಪ್ಪ ಹೇಳಿದರು.

ಶ್ರೀಗಳ ಕಡೆಯವರು ಮಾತುಕತೆಯ ಫೋಟೋ, ವಿಡಿಯೋಗಳನ್ನು ತೆಗೆಯಲೂ ಆಕ್ಷೇಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
15 Comments
  • ಶ್ರೀಗಳು ಶ್ರೀಗಳಂತೆ ವರ್ತಿಸಬೇಕು. ಕಾವಿ ತೊಟ್ಟು ಸ್ವಾಮಿತ್ವ ಪಡೆದೆನೆಂಬ ಅಹಂಕಾರ ಬೇಡ. ಜಂಗಮ ತಂಗಾಳಿಯಂತೆ ಸೂಸಬೇಕು. ಭಕ್ತರು ಬಸವಣ್ಣನ ಭಕ್ತರೆ ಹೊರತು ನಿಮ್ಮ ಭಕ್ತರಲ್ಲ…. ಅಜಿತ ಹನ್ಮಕ್ಕ ಬೇಡ ಗುರುಗಳೆ ಬಸವ ಬಸವ ಭಕ್ತರೆ ವೇದಿಕೆ ರಡಿ ಮಾಡತ್ತೇವೆ….. ದಿನ, ಸ್ಥಳ ನಿಗದಿಪಡಿಸಿ

  • ಕನ್ನೇರಿ ಶ್ರೀ ಗಳನ್ನು ನಾವೇ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ. ಎಲ್ಲಾ ಭಕ್ತರು ನಿರ್ಲಕ್ಷಿಸಿದ್ದರೆ ತಾವೆ
    ದಾರಿಗೆ ಬರುವರು

    • ಕನೇರಿ‌ಮಠದ ಸ್ವಾಮೀಜಿ ಅವರೊಂದಿಗೆ ಬಸವಣ್ಣನ ಅನುಯಾಯಿಗಳು ನಡೆಸಿದ ಚರ್ಚೆಯ ಕುರಿತ ವಾಸ್ತವ ಚಿತ್ರಣ.
      _——_-

      ಕನೇರಿಮಠದ ಸ್ವಾಮೀಜಿಯವರ ಜತೆ ಚರ್ಚೆಗೆ ಸಂಪರ್ಕಕ್ಕೆ ಯತ್ನಿಸಿದರು ಸಿಗಲಿಲ್ಲ ಎಂಬುದೇ ಸತ್ಯಕ್ಕೆ ದೂರವಾಗಿದೆ.
      ಬಸವ ಅನುಯಾಯಿಗಳು ಮಠಾಧೀಶರೊಬ್ಬರ ಮೂಲಕ ಕನೇರಿ ಸ್ವಾಮೀಜಿಯವರಿಗೆ ವಿಷಯ ತಿಳಿಸಿದ್ದು, ಚರ್ಚೆ ವೇಳೆ ಧಿಕ್ಕಾರ ಕೂಗುವಂತಿಲ್ಲ, ಘೇರಾವ್ ಹಾಕುವಂತಿಲ್ಲ, ಸ್ವಾಮೀಜಿಯವರ ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸುವಂತಿಲ್ಲ ಎಂದು ಹೇಳಿದ್ದು, ಬಸವ ಅನುಯಾಯಿಗಳ‌ ಜತೆ ಚರ್ಚಿಸಿದ ಮಠಾಧೀಶರೇ ವಿನಃ ಕನೇರಿಮಠದ ಸ್ವಾಮೀಜಿಯವರಲ್ಲ.
      ತೋಟದಲ್ಲಿ ನಡೆದ ಚರ್ಚೆ ಆರಂಭಕ್ಕೆ ಬಸವ ಅನುಯಾಯಿಗಳೆಂದರೆ ಹಲವು‌ ಬಣಗಳಿವೆ ನೀವು ಯಾವ ಬಣದವರು, ನನ್ನ ಹೇಳಿಕೆಗೆ ನಿಮಗೆ ಯಾಕೆ ನೋವಾಗಿದೆ ಸ್ವಾಮೀಜಿ‌ ಪ್ರಶ್ನಿಸಿದರು.
      ನಾವು ಯಾವ ಬಣಕ್ಕೂ‌ ಸೇರಿದವರಲ್ಲ. ಬಸವಣ್ಣನ ಅನುಯಾಯಿಗಳು ಮಾತ್ರ ಎಂದರು. ವಾಸ್ತವಿಕವಾಗಿ ಬಂದವರಲ್ಲಿ‌ ಬಹುತೇಕರು ಬಸವ ಕೇಂದ್ರ, ಬಸವ ಸಮಿತಿ, ಬಸವ ಚಾರಿಟೇಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿದ್ದರೂ ನಾವು ಯಾವ ಬಣಕ್ಕೂ ಸೇರಿದವರಲ್ಲ ಎಂದೇ ಹುಸಿ‌ ನುಡಿದಿದ್ದಾರೆ.
      ಬಸವ ತತ್ವಗಳನ್ನು ನೀವು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೀರಿ, ಕಾಯಕ, ನಿತ್ಯ ದಾಸೋಹ ಮಾಡುತ್ತಿದ್ದಿರಾ ಎಂಬ ಸ್ವಾಮೀಜಿ ಪ್ರಶ್ನೆಗೆ ಕೆಲವು ನಮ್ಮ ಶಕ್ಯಾನುಸಾರ ಮಾಡುತ್ತೇವೆ ಎಂದರು. ನಿತ್ಯವೂ ಬೇರೆಯವರಿಗೆ ಪ್ರಸಾದ ಮಾಡಿಸುತ್ತೀರ ಎಂಬ ಪ್ರಶ್ನೆ ಬಹುತೇಕರು ಮೌನಕ್ಕೆ ಜಾರಿದರು.
      ಕುಂಕುಮ ಹಚ್ಚಬಾರದೆಂದು‌ ವಚನಗಳಲ್ಲಿ‌ ಇಲ್ಲ ಎಂದಿದ್ದೀರಿ ಒಂದು ವಚನದಲ್ಲಿ‌ಇದೆ ಎಂದಾಗ, ವಚನದ ಕಾಲ, ಸಂದರ್ಭ, ಸನ್ನಿವೇಶ ಏನೆಂದು‌ ಗಮನಿಸದೆ ಒಂದು‌ ವಚನ ವ್ಯಾಖ್ಯಾನಿಸುವುದು ಎಷ್ಟು ಸರಿ. ಬಸವಣ್ಣನವರ ವಚನಗಳಲ್ಲಿಯೇ ಕೆಲ ವೈರುದ್ಯ ಕಾಣುತ್ತವೆ ಹಾಗಂತ ಅದನ್ನು‌ಅದೇ ರೀತಿ ವ್ಯಾಖ್ಯಾನಿಸಲು‌ ಸಾಧ್ಯವೇ. ಒಂದು ವಚನದ ಸನ್ನಿವೇಶ ಇನ್ನೊಂದು ವಚನ ವೇಳೆಗೆ ಇರುವುದಿಲ್ಲ ಎಂದು ಸ್ವಾಮೀಜಿ‌ ಹೇಳಿದರು.
      ವೇದಗಳ ವಿಚಾರ ಪ್ರಸ್ತಾಪವಾದಾಗ ವೇದಗಳು ಸುಳ್ಳು ಎನ್ನುವ ನೀವು ವೇದಗಳ ಅಧ್ಯಯನ ಮಾಡಿದ್ದೀರಾ ಎಂದು ಸ್ವಾಮೀಜಿ ಪ್ರಶ್ನಿಸಿದರ.
      ನಾವು ವೇದಗಳನ್ನು ಅಧ್ಯಯನ ಮಾಡಿಲ್ಲ.ಬಸವಣ್ಣನವರು ಅವುಗಳ ಅಧ್ಯಯನ ಬೇಡ ಎಂದಿದ್ದಾರೆ‌ ಎಂದಾಗ ವೇದಗಳಲ್ಲಿ‌ಏನಿದೆ ಎಂದು‌ತಿಳಿಯದ ನೀವು ಹೇಗೆ ವೇದಗಳು‌ ಸುಳ್ಳು ಎಂದು‌ ಹೇಳುತ್ತೀರಿ. ಬಸವಣ್ಣನವರ ವಚನಗಳಲ್ಲೇ ವೇದಗಳ‌ ಉಲ್ಲೇಖ‌ ವಚನಗಳು ನನ್ನ ಬಳಿ ಇವೆ ಎಂದು ಸ್ವಾಮೀಜಿ ನುಡಿದರು.
      ಕನೇರಿಯ ಶ್ರೀಮಠಕ್ಕೆ ಬನ್ನಿ‌ ನಿಮ್ಮ ಕಡೆಯಿಂದ ಇನ್ನಷ್ಟು ಜಾಣರು, ತಿಳಿದವರಿದ್ದರೂ ಕರೆದುಕೊಂಡು‌ ಬನ್ನಿ‌ ಒಂದೆರಡು‌ ದಿನ‌ ಚರ್ಚೆ ಮಾಡೋಣ. ಮಾ.28ಕ್ಕೆ ಬನ್ನಿ ನಿಮಗೆ ವಾಸ್ತವ್ಯಕ್ಕೆ, ಪ್ರಸಾದಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದರು.
      ವಾಹನ ವ್ಯವಸ್ಥೆಯನ್ನೂ ಮಾಡುತ್ತೇವೆಂದು ಮತ್ತೊಬ್ಬ ಸ್ವಾಮೀಜಿ ಹೇಳಿದರು.
      ಬಂದವರಲ್ಲಿ ಒಬ್ಬರು, ಟಿವಿ ಯಲ್ಲಿ ನೀವು ಬಸವ ತಾಲಿಬಾನ್ ಗಳು, ಹುಚ್ಚ ನಾಯಿಗಳು‌ ಅಂದಿದ್ದೀರಿ, ತಾಲಿಬಾನ್ ಎಂದರೆ ಶಿರಚ್ಛೇದ ಮಾಡುವವರು, ಬಸವಾದಿ ಯಾವ ಶರಣರು ಯಾರ ಶಿರಚ್ಛೇದ ಮಾಡಿದ್ದಾರೆ ತೋರಿಸಿ ಎಂದಾಗ ಕನೇರಿ ಸ್ವಾಮೀಜಿ ಗಣಾಚಾರ ಎಂದರೆ ಏನರ್ಥ ಹೇಳಿ ಎಂದಾಗ ಎಲ್ಲರೂ ಮೌನವಾದರು.
      ಮತ್ತೊಬ್ಬರು ಬಸವ ತಾಲಿಬಾನ್ ಎಂದು ಮುಂದೆ ಹೇಳುವುದು ಬೇಡ ಎಂದು ಮನವಿ‌ ಎಂಬುದನ್ನೇ ಒಂದು ರೀತಿ ತಾಕೀತು ಧ್ವನಿಯಲ್ಲಿ ಹೇಳಿದಾಗ ಸ್ವಾಮೀಜಿ ಒಂದು ಸಲವಲ್ಲ, ನೂರು ಬಾರಿ ಹೇಳುತ್ತೇನೆ. ಚರ್ಚೆ ಮಾಡೋಣ‌ ಬನ್ನಿ‌ ಎಂದು ಹೊರನಡೆದರೆ ವಿನಃ ಬಸವ ಅನುಯಾಯಿಗಳು ಹೇಳಿಕೊಂಡಂತೆ ಚರ್ಚೆಗೆ ಹೆದರಿ ಕಾಲ್ಕಿತ್ತಲಿಲ್ಲ.
      ತೋಟದ ಮಾಲಿಕ‌ರ ಎರಡು ಮನೆಗಳಿದ್ದು ಬಂದ ಕೂಡಲೇ ಒಬ್ಬರ ಮನೆಗೆ ಹೋಗಿದ್ದರು, ಇನ್ನೊಬ್ಬ ಭಕ್ತ‌ ತಮ್ಮ ಮನೆಗೆ ಪಾದವಿಡುವಂತೆ ಕೇಳಿದ್ದಕ್ಕೆ ಸಭೆಯಿಂದ ಅವರ ನಿವಾಸಕ್ಕೆ ಹೋದರು. ಸಭೆ ಆರಂಭಕ್ಕೆ ಸ್ವಾಮೀಜಿ ಮಠಕ್ಕೆ ಬನ್ನಿ ಚರ್ಚಿಸೋಣ ನಾನು ಹೊರಡುವುದಿದೆ. ಕೆಲ ನಿಮಿಷ ಮಾತ್ರ ಇರುವೆ ಎಂದಿದ್ದರು.
      ತೋಟದ ಮಾಲಿಕನ ಮನೆಯಿಂದ ಬಂದು ವಾಹನದಲ್ಲಿ‌ ಕುಳಿತು‌ ಹೋಗುವಾಗಲೂ‌ ಸಭೆ ಸ್ಥಳದಲ್ಲಿ ಬಂದಾಗ ಬಂದವರ ಕಡೆ ಕೈ‌ಮುಗಿದು ಬರುತ್ತೇನೆ ಎಂದು ಸ್ವಾಮೀಜಿಯವರು ಹೇಳಿದಾಗ ಬಸವ ಅನುಯಾಯಿಯೊಬ್ಬರು ನಿಮ್ಮದು‌‌ ಆರ್‌ಎಸ್ ಎಸ್ ಮಠ ಗೊತ್ತಿದೆ ಹೋಗಿ ಎಂದರು. ಮಠಾಧೀಶರು ಎಂದು‌ ನೋಡದೆ, ಕೈ ಮುಗಿದ ಸೌಜನ್ಯವನ್ನು‌‌ ಪರಿಗಣಿಸದೆ ತಿರಸ್ಕಾರ ಭಾವ ತೋರಿದ್ದು ಯಾವ ಬಸವ ಸಂಸ್ಕೃತಿ ಎಂಬ ಪ್ರಶ್ನೆ ಮೂಡುವಂತಿತ್ತು.
      ಕನೇರಿ ಸ್ವಾಮೀಜಿಯವರ ಜತೆ ಚರ್ಚೆಗೆ ಬಂದಿದ್ದು 15-18 ಜನ‌ ಮಾತ್ರ 50 ಜನ ಹೋಗಿದ್ದೇವು ಎಂದು‌ ಹೇಳಿಕೊಂಡಿದ್ದಾರೆ.
      ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ … ಎಂಬ ಬಸವಣ್ಣನವರ ವಚನ ಪಾಲನೆ ಇವರಿಂದ ಆಗುತ್ತಿದೆಯೇ? ಬಸವಣ್ಣನ ಅನುಯಾಯಿಗಳೆಂದು‌ ಹೇಳಿಕೊಳ್ಳುವುದಕ್ಕೆ ಇವರು ಅರ್ಹರೇ? ಅಥವಾ ಬಸವಣ್ಣನ ಅನುಯಾಯಿಗಳೆಂದು‌ ಹೇಳಿಕೊಳ್ಳುವವರಿಗೆ ಇಂತಹ ಕಾರ್ಯಗಳಿಗೆ ಬಸವಣ್ಣನವರು‌ ಅನುಮತಿ‌ ಕರುಣಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡದಿರದು.
      ——
      ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ಸಾಮಾಜಿಕ‌ ಕಳಕಳಿ, ಸೇವಾಕಾರ್ಯಗಳ‌ ಬಗ್ಗೆ.
      ಕನೇರಿಯ ಶ್ರೀ ಕಾಡಸಿದ್ಧೇಶ್ವರ ಮಠವನ್ನು‌ಕೇವಲ‌25-30 ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
      ಶ್ರೀಮಠ ಧಾರ್ಮಿಕ, ಶೈಕ್ಷಣಿಕ, ಕೃಷಿ, ಆರೋಗ್ಯ, ಸ್ವಯಂ ಉದ್ಯೋಗ, ಸಂಸ್ಕಾರ, ದುಶ್ಚಟಮುಕ್ತ ಸಮಾಜ, ದೇಶಿ ಗೋವುಗಳ‌ ಸಾಕಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರ ಸೇವೆ ಅನನ್ಯ.
      ಸುಮಾರು 1,500ಕ್ಕೂ ಹೆಚ್ಚು ದೇಶಿ ಗೋವುಗಳನ್ನು ಸಾಕುತ್ತಿದ್ದಾರೆ, ದೇಶಿ ಗೋವುಗಳ ಸಂವರ್ಧನೆಯ ಸ್ವಾಮೀಜಿ‌ಯವರ ಪ್ರೇರಣೆಯಿಂದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ‌ ರೈತರ ಮನೆಗಳಲ್ಲಿ ದೇಶಿ ಹಸು ಸಂತತಿ ವೃದ್ಧಿಸಿದೆ.
      ರೈತ ಎಂದಿಗೂ ಸೋಲಬಾರದು, ಅನ್ನದಾತನಲ್ಲಿ ಕೀಳರಿಮೆ ಮೂಡಬಾರದು ಬದಲಾಗಿ ಗೌರವ ನೀಡುವಂತಾಗಬೇಕೆಂಬ ಆಶಯದೊಂದಿಗೆ ಸ್ವಾಮೀಜಿ ಯವರ ಚಿಂತನೆ, ಪ್ರಯತ್ನ, ಪ್ರಯೋಗ ಮಾದರಿ.
      ಒಂದು ಎಕರೆನಲ್ಲಿ ಒಂದು ಕುಟುಂಬ ಜೀವನ ನಡೆಸಬಹುದು ಎಂಬುದರ ಮನನಕ್ಕೆ 2015 ರಿಂದ ಸ್ವಾಮೀಜಿಯವರು ಲಕ್ಷಾಧೀಶ ರೈತ ಹೆಸರಲ್ಲಿ ಒಂದು ಎಕರೆಯಲ್ಲಿ 100 ತರಹದ ಬೆಳೆ ಬೆಳೆದು ರೈತರಿಗೆ ಮಾದರಿ‌ ಮುಂದಿಟ್ಟಿದ್ದಾರೆ.
      ಮಕ್ಕಳಿಗೆ ಅತ್ಯತ್ತಮ ಶಿಕ್ಷಣ ಸಂಸ್ಕೃತಿ ಸಿಗಬೇಕೆಂಬ ಉದ್ದೇಶದೊಂದಿಗೆ ಜೀವನ ದರ್ಶನ ಶಿಕ್ಷಣದ ಗುರುಕುಲ ಆರಂಭಿಸಿದ್ದು, ಸುಮಾರು 300ಕ್ಕೂ‌ಹೆಚ್ಚು ವಿದ್ಯಾರ್ಥಿಗಳಿಗೆ ನಿಶುಲ್ಕ ಶಿಕ್ಷಣ ನೀಡುತ್ತಿದ್ದಾರೆ.
      ಜನರ ಅದರಲ್ಲೂ ಬಡವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾರ್ಪೊರೇಟ್ ಆಸ್ಪತ್ರೆ ಮಟ್ಟದ ವೈದ್ಯಕೀಯ ಸೇವೆ ಆಶಯದೊಂದಿಗೆ ಆಯುರ್ವೇದ, ಅಲೋಪಥಿ ಆಸ್ಪತ್ರೆ ಆರಂಭಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಇನ್ನಿತರ ಕಡೆಯ ಅದೆಷ್ಟೋ ಜನರು ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ.
      ಕೇವಲ ಗೋವುಗಳಲ್ಲದೆ, ಬೀದಿನಾಯಿಗಳಿಗೂ ಆಶ್ರಯ‌ ಕಲ್ಪಿಸಿದ್ದಾರೆ.
      ಯುವಕರಿಗೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಹಲವು ಶಿಬಿರ ನಡೆಸುತ್ತಿದ್ದಾರೆ. ದುಶ್ಚಟಗಳಿಂದ ದೂರವಾಗಿಸುವ ಕಾರ್ಯ ಕೈಗೊಂಡಿದ್ದಾರೆ.
      ಸದಾ ಸಮಾಜ, ದೇಶ ಸಮೃದ್ಧ, ಸದೃಢವಾಗಿರಬೇಕೆಂದು ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
      ಸ್ವಾಮೀಜಿಯವರ ಸಮಾಜಮುಖಿ, ರಾಷ್ಟ್ರಪ್ರೇಮ‌ ನೆಲೆಗಟ್ಟಿನ ಕಾರ್ಯಗಳು ಪ್ರತಿಯೊಬ್ಬರಿಗೂ ಮಾದರಿ.
      ಇಂತಹ ಪೂಜ್ಯರ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುವವರು‌ ಯೋಚಿಸಬೇಕಾಗಿದೆ.
      ಸ್ವಾಮೀಜಿ‌ ಹೇಳಿಕೆ ನಮಗೆ ಅವಮಾನವಾಗಿದೆ ಎನ್ನುವವರು ಸ್ವಾಮೀಜಿಯವರ ಬಗ್ಗೆ ಅವಮಾನಕರ ಹಾಗೂ ಏಕವಚನ ಬಳಕೆ ಮಾಡುತ್ತಿರುವುದು ಸರಿಯೇ? ಇದೇನಾ ಬಸವಾದಿ‌ ಶರಣರ‌‌ ಅನುಯಾಯಿಗಳ ಸಂಸ್ಕೃತಿ? .

      • ಸುಳ್ಳಿನ ಕಂತೆ ಕಟ್ಟಬೇಡಿ. ಖಾವಿಧಾರಿಗಳಾದವರು ಸೌಜನ್ಯದಿಂದ ವರ್ತಿಸಬೇಕು.

        ನಿಮಗೆ ಸೈದ್ಧಾಂತಿಕ ಸ್ಪಷ್ಟತೆಯಿದ್ದರೇ ಸಾರ್ವಜನಿಕ ತಟಸ್ಥ ವೇದಿಕೆಯಲ್ಲಿ ನಿಮ್ಮ ಸ್ವಾಮೀಜಿ ಚರ್ಚೆಗೆ ಬರಲಿ. ಎರಡೂ ಕಡೆಯವರಿಗೆ ಸಂವಾದಕ್ಕೆ ಅವಕಾಶವಿರುವ ಹಾಗೆ ನಿಯಮಗಳನ್ನು ರೂಪಿಸಿಕೊಂಡು ಚರ್ಚೆ ಮಾಡೋಣ.
        ನಿಮ್ಮ ಸ್ವಾಮೀಜಿಯ, ಬಸವ ಅನುಯಾಯಿಗಳ ಸಂಸ್ಕೃತಿ, ಸಿದ್ದಾಂತ ಎಲ್ಲರೂ ನೋಡಲಿ

  • ನಾವು ತಾಲಿಬಾನಿ ಆಗಿದ್ದರೆ ಸ್ವಾಮಿಗಳು ಇವತ್ತು ಕನ್ನೇರಿ ಮಠದಲ್ಲೆ ಇರಲು ಅವಕಾಶವಿರುತ್ತಿರಲಿಲ್ಲ

  • ಬಸವ ತಾಲಿಬಾನ್ ಎಂದಿರುವ ಇವರ ಮೇಲೆ ರಾಜ್ಯದ ಎಲ್ಲಾ ತಾಲೋಕು ಕೇಂದ್ರಗಳಲ್ಲಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸುವುದಲ್ವದೆ ತಾಲೋಕು ತಹಸೀಲ್ದಾರರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಬೇಕು

  • ಈ ಸ್ವಾಮಿಗಳ ಹೇಳಿಕೆ ನಂತರ ಬಸವ ಭಕ್ತರು ಸೊಸಿಯಲ್ ಮಿಡಿಯಾದಲ್ಲಿ ಕಾಮೆಂಟಗಳು ನೋಡಿದ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಅಷ್ಟೇ

  • ಇಂತವರಿಗೆಲ್ಲ ಶ್ರೀಗಳು ಎಂಬ ಒಕ್ಕಣೆ ಏಕೆ? ಇವರು ಅದಕ್ಕೆ ಅರ್ಹರೇ?

  • ವರ್ಣಶ್ರಮಿಗಳಿಗೆ ಬಕೆಟ್ ಹಿಡಿಯುತ್ತಿರುವ ಸ್ವಾಮಿ 🤔, ಇವರನ್ನು ಕರ್ನಾಟಕದ ಎಲ್ಲರೂ ಬಹಿಷ್ಕರಿಸಬೇಕು

  • ಆ ಸ್ವಾಮಿ ಸಾವಯವ ಹೆಸರಿನಲ್ಲಿ ದೊಡ್ಡ ಉದ್ದಿಮೆ ಮಾಡಿ ಅದೆ ಘಮಿಂಡಿಯಲ್ಲಿ ಮಾತನಾಡುತ್ತಿದ್ದಾರೆ. ಬಸವ ಭಕ್ತರು ಅವರ ಎಲ್ಲಾ ಕಾರ್ಯಕ್ರಮಕ್ಕೆ ಘೆರಾವ ಹಾಕಬೇಕು.

  • ಸನಾತನಿಯ ಜೊತೆ ಯಾವದೇ ಚರ್ಚೆ ಮಾಡಿದರೂ ಕೂಡಾ ವ್ಯರ್ಥ ಪ್ರಯತ್ನ, ಆದ್ರೆ ಈ ಸ್ವಾಮಿ ಯಾವದೇ ಕಾರ್ಯಕ್ರಮಕ್ಕೆ ಬರದೇ ಹಾಗೆ ವಿರೋಧ ಮಾಡಬೇಕು

  • ಬಸವ ಭಕ್ತರು ಸಂಯಮದಿಂದ ಪ್ರಶ್ರೀಸುವಾಗ ಆ ಸ್ವಾಮಿ ಸಂಯಮ ಕಳೆದುಕೊಂಡು ಮಾತನಾಡಿದ್ದಾರೆಂದರೆ, ಅವರಿಗೆ ಸೈದ್ಧಾಂತಿಕವಾಗಿ ಚಚಿ೯ಸಲು ,ವಿಷಯಗಳಿಲ್ಲವೆಂದೇ ಅಥ೯.

  • ಸ್ವಾಮಿಗಳಿಗೆ ರೇಣುಕಾ ಚೌುರಿ ಯ ಭೂತಬಡಿದು ಕೊಂಡಂತೆ ಕಾಣುತ್ತದೆ. ಆ ದ್ದೇವ್ವ ಬಿಡಿಸಬೇಕು , ಆಗ ಬಸವಣ್ಣ ನೆನಪಾಗುತ್ತಾನೆ ಅಷ್ಟೇ?.ನಿಜವಾದ ಲಿಂಗಾಯತ ಧರ್ಮದ ಆದ್ಯಾತ್ಮ ಕಲಿತಾಗ ಲಿಂಗಾಯತ ಧರ್ಮದ ಅರಿವು ಮೂಡುತ್ತದೆ.ವಿಭೂತಿಯ ಬಗ್ಗೆ ಅರಿತಾಗ, ಮಾತ್ರ ನಿಮಗೆ ಕುಂಕುಮದ ಬಗ್ಗೆ ವಚನ ಅರ್ಥ ಮಾಡಿಕೊಳ್ಳಲು ಹೊಸದಾಗಿ ಅಧ್ಯಯನ ಶುರೂ ಮಾಡು,

  • ಕನ್ನೆರಿ ಸ್ವಾಮಿ ಕಾವಿಯನ್ನು ಕಳಚಿ ಆರ್ ಎಸ್ ಎಸ್ ನ ಏಜೆಂಟಾಗಿ ಕೆಲಸ ಮಾಡಲು ಯೋಗ್ಯನಾಗಿದ್ದಾರೆ

  • *ವೈದಿಕರೇ ನಡೆಸುತ್ತಿರುವ ಕೆಲ ಮೀಡಿಯಾಗಳು*

    ಬಸವಣ್ಣನ ಹೆಸರು ಹೇಳಿ ಮಠ ಕಟ್ಟಿಕೊಂಡು ವೈದಿಕ ಆಚರಣೆಯನ್ನು ಮಾಡುತ್ತ ಬದುಕುತ್ತಿದ್ದ ಕೆಲ ಕವಿಧಾರಿಗಳನ್ನು ಕರೆಸಿ ಈ ತರಹದ ಹೇಳಿಕೆ ಕೊಡಿಸುತ್ತಿದ್ದಾರೆ ಎಚ್ಚರ!

Leave a Reply

Your email address will not be published. Required fields are marked *