ದಾವಣಗೆರೆಯಲ್ಲಿ ಅನುಭವ ಮಂಟಪ ರಥಯಾತ್ರೆಗೆ ಸ್ವಾಗತ

ದಾವಣಗೆರೆ

ದಾವಣಗೆರೆಯಲ್ಲಿ ಅನುಭವ ಮಂಟಪ ಬಸವಾದಿ ಶರಣರ ವೈಭವ ರಥಯಾತ್ರೆಗೆ ಸ್ವಾಗತ ದೊರೆಯಿತು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸ್ವಾಗತಿಸಿ ಮಾತನಾಡಿ, ಬಸವತತ್ವ ಸೂರ್ಯ ಚಂದ್ರ ಇರುವವರಿಗೆ ಇರುವುದು. ಸದಾಕಾಲ ಹಸಿರಾಗಿರುವ ವಚನ ಸಾಹಿತ್ಯವನ್ನು ಬಸವ ಭಕ್ತರು ಪಾಲನೆ ಮಾಡಬೇಕು. ನಾಡಿನಾದ್ಯಂತ ಸಂಚರಿಸುವ ಯಾತ್ರೆಗೆ ಅದ್ದೂರಿ ಸ್ವಾಗತ ಮಾಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಾಮದೇವಪ್ಪ, ಬಸಿರ ಅಹಮ್ಮದ್, ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ‌ ಮುಂತಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *