ಡಾ ಶಿವಾನಂದ ಜಾಮದಾರ್ ಧರ್ಮಪತ್ನಿ ಶರಣೆ ನಿರ್ಮಲಾ ಲಿಂಗೈಕ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ್ ಅವರ ಧರ್ಮಪತ್ನಿ ನಿರ್ಮಲಾ ಶಿವಾನಂದ ಜಾಮದಾರ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಲಾ ಅವರ ಅರೋಗ್ಯ ಇಂದು ಬೆಳಗ್ಗೆ ಬಿಗಡಾಯಿಸಿದಾಗ ಅವರ ಎಚ್.ಎಸ್.ಆರ್ ನಿವಾಸದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಕುಟುಂಬದ ಸ್ನೇಹಿತರೊಬ್ಬರು ಹೇಳಿದರು.

ನಿರ್ಮಲಾ ಅವರು ಮೂರು ಹೆಣ್ಣು ಮಕ್ಕಳು, ಒಬ್ಬ ಮಗ ಹಾಗೂ ಆರು ಮೊಮ್ಮಕ್ಕಳು ಇರುವ ತುಂಬಿದ ಕುಟುಂಬವನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆ ಏಪ್ರಿಲ್ 28 ಮದ್ಯಾಹ್ನ ಬೆಳಗಾವಿಯ ಸದಾಶಿವನಗರದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ತಿಳಿದು ಬಂದಿದೆ.

Share This Article
12 Comments
  • ಹಿರಿಯರಿಗೆ ಅಂತಿಮ ನಮನಗಳು, ಎಮ್ಮವರಿಗೆ ಸಾವಿಲ್ಲ ಎಂಬ ವಚನದ ನುಡಿಯಂತೆ , ಡಾ. ಎಸ್.ಎಂ. ಜಾಮದಾರ್ ಕುಟುಂಬ ಈ‌ ಅಗಲಿಕೆಯ ನೋವಿನಿಂದ ಶೀಘ್ರ ಚೇತರಿಸಿಕೊಳ್ಳುವ ಶಕ್ತಿ ಬರಲಿ ಎಂದು ಪ್ರಾರ್ಥಿಸುತ್ತೇವೆ.

  • ಬಸವಾ ಬಸವಾ ಶರಣು ಶರಣಾರ್ಥಿಗಳು.ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಬಸವಾದಿಗಳು ನೀಡಲಿ.

    • ಬಸವ ಬಸವ ಶರಣಾರ್ಥಿಗಳು… ಶ್ರೀಯುತರಾದ ಜಾಮದಾರ್ ಸಾರ್ ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶರಣರು ನೀಡಲಿ ಎಂದು ಪ್ರಾರ್ಥಿಸುವೆ….💐🙏

  • I am sorry to learn the Sad de mise of Nirmala Jamdat. May god give enough Strength to besr the irrepairable loss.May the soul of departed rest in Pesse.

  • ಭಾವಪೂರ್ಣ ಸಂತಾಪಗಳು ಶ್ರೀ ಶಿವಾನಂದ ಜಾಮದರರವರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ದಯಪಾಲಿಸಲಿ

      • ಲಿಂಗೈಕ್ಯರಾದ ಶರಣೆ ನಿರ್ಮಲಾ ಶಿವಾನಂದ ಜಾಮದಾರ ಅವರ ಆತ್ಮಕ್ಕೆ ಶಾಂತಿ
        ಅನುಗ್ರಹಿಸಲು ಹಾಗೂ ಕುಟುಂಬದವರಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲು ಸೃಷ್ಟಿ ಕರ್ತ ಲಿಂಗದೇವ, ವಿಶ್ವಗುರು ಬಸವಣ್ಣನವರಲ್ಲಿ ಪ್ರಾರ್ಥಿಸುತ್ತೇನೆ.
        🙏🙏🙏🙏 ಶರಣು ಶರಣಾರ್ಥಿಗಳು 🙏🙏🙏

  • ಶಿವಾನಂದ ಜಾಮದಾರ ಅಪ್ಪವರೇ. ತಾಯಿಯವರ ನೋವು ಸಹಸಿಕೊಂಡು ಗುರುಬಸವಾದಿ ಪ್ರಮಥರ ಮಣಿಹ ಪೂರೈಸುವ ಮಹಾಕಾರ್ಯಕ್ಕೆ ಸಜ್ಜಾಗುವಂತಹ ಆತ್ಮಬಲ ನೂರ್ಮಡಿಗೊಳ್ಳಲೆಂದು ಪ್ರಾರ್ಥಿಸುವೆ.

    • ನಿರ್ಮಲಾ ತಾಯಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತ ಡಾ!! ಜಾಮದಾರರವರಿಗೆ ಆ ಬಸವಣ್ಣನವರು ದು:ಖವನ್ನು ತಡೆದುಕೊಳ್ಳುವ ಸ್ಥೈರ್ಯವನ್ನು ಕೊಡಲಿ.
      ಶರಣುಶರಣಾರ್ಥಿಗಳು.

  • ಅವರ ಆತ್ಮಕ್ಕೆ ಶಾಂತಿ ಸಿಗಲಿ, ಶರಣಾರ್ಥಿಗಳು ಶ್ರೀ ಶಿವಾನಂದ ಜಾಮದರರವರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ನೀಡಲಿ

    • ಪ್ರಶಾಂತ ಅಶೋಕ ಬುರ್ಗೆ ಮಹಾಂತೇಶ ನಗರ ಬೆಳಗಾವಿ says:

      ತಾಯಿಯವರ ಪವಿತ್ರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ. ಶರಣ ಜಾಮದಾರ ಸರ್ ಅವರಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ವಿಶ್ವಗುರು ಬಸವಣ್ಣನವರು ದಯಪಾಲಿಸಲಿ.

Leave a Reply

Your email address will not be published. Required fields are marked *