ಮಲೆಬೆನ್ನೂರ
12ನೇ ಶತಮಾನದ ಕ್ರಾಂತಿ ಪುರುಷ, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರರ 892ನೇ ಜಯಂತಿಯನ್ನು ಮಲೆಬೆನ್ನೂರಿನ ಬಸವ ಮಂಟಪದಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗಿನ ಜಾವ ಐದು ಗಂಟೆಗೆ ಅಕ್ಕನ ಬಳಗ, ಅಣ್ಣನ ಬಳಗದ ಶರಣರು ಮಂಟಪಕ್ಕೆ ಆಗಮಿಸಿ ಬಸವೇಶ್ವರರು ಮತ್ತು 50ಕ್ಕೂ ಹೆಚ್ಚು ಶರಣರ ಭಾವಚಿತ್ರಗಳಿಗೆ ಪೂಜೆ, ಮಂಗಳಾರತಿ, ಅಭಿಷೇಕ ನಡೆಸಿದರು. ಅಕ್ಕನ ಬಳಗದ ಶರಣೆಯರು ವಚನಗಳನ್ನು ಹಾಡಿದರು.
ನಂತರ ಮಲೇಬೆನ್ನೂರು ಪಟ್ಟಣದ ರಾಜಬೀದಿಗಳಲ್ಲಿ ಬಸವಧ್ವಜ ಹಿಡಿದು ಬೈಕ್ ರ್ಯಾಲಿ ನಡೆಸಿದರು.
ಬಳಗದ ಮುಖಂಡ ಶರಣ ನಾರೇಶಣ್ಣ ಮತ್ತು ಶರಣೆ ಸರೋಜಮ್ಮ ಅವರ ನೇತೃತ್ವದಲ್ಲಿ ಬಸವೇಶ್ವರ ಜಯಂತಿ ವಿಶೇಷವಾಗಿ ಜರಗಿತು. ಶರಣ-ಶರಣೆಯರು ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು.