ಬಬಲೇಶ್ವರ
ಬೆಂಗಳೂರಿನ ಕುಂಬಳಗೋಡಿನ ಬಳಿ ನಿರ್ಮಾಣವಾಗುತ್ತಿರುವ ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಸಚಿವ ಎಂ.ಬಿ. ಪಾಟೀಲ ಒಂದು ಕೋಟಿ ನೆರವು ನೀಡಿದ್ದಾರೆಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಧನ್ಯಾಳದಲ್ಲಿ ವಿಶ್ವಗುರು ಶ್ರೀ ಬಸವೇಶ್ವರ ಮೂರ್ತಿಯನ್ನು ಸಚಿವ ಉದ್ಘಾಟಿಸಿದರು.

ತಾಲ್ಲೂಕಿನ ಧನ್ಯಾಳ ಗ್ರಾಮದಲ್ಲಿ ಎಂ. ಬಿ. ಪಾಟೀಲರು ಬಸವೇಶ್ವರರ ಮೂರ್ತಿ ಅನಾವರಣ ಮಾಡಿದ ನಂತರ ಶ್ರೀಗಳು ಮಾತನಾಡಿದರು.
ಕುಂಬಳಗೋಡಿನ ಬಳಿ ವಿಶ್ವಗುರು ಬಸವಣ್ಣನವರ ಪ್ರತಿಮೆಯ ನಿರ್ಮಾಣದ ಕೆಲಸ ಅರ್ಧಕ್ಕೆ ನಿಂತಿತ್ತು. ಮೈಸೂರು ಹೆದ್ದಾರಿಯ ಮೇಲೆ ಮಹಾಸ್ವಾಮಿಗಳಾದಿಯಾಗಿ ಎಲ್ಲರೂ ಸಂಚರಿಸಿದರೂ ಯಾರೂ ಅತ್ತ ಗಮನ ಹರಿಸಿರಲಿಲ್ಲ. ಆದರೆ, ಸಚಿವ ಎಂ. ಬಿ. ಪಾಟೀಲ ಅವರು ಅರ್ಧಕ್ಕೆ ನಿಂತಿರುವ ಬಸವಣ್ಣನವರ ಮೂರ್ತಿ ಪೂರ್ಣಗೊಳಿಸಲು ರೂ. 1 ಕೋಟಿ ನೆರವು ನೀಡಿದ್ದಾರೆ. ಇದು ಅವರ ಬಸವ ಭಕ್ತಿಗೆ ಸಾಕ್ಷಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಾಟೀಲರು ದಯವೇ ಧರ್ಮದ ಮೂಲವಯ್ಯ ಎನ್ನುವ ಬಸವ ಧರ್ಮ ಪಾಲನೆಯಾದರೆ ವಿಶ್ವದಲ್ಲಿ ಯುದ್ಧದ ವಾತಾವರಣವೇ ಇರಲ್ಲ. ಮುಂದಿನ ದಿನಗಳಲ್ಲಿ ಬಸವ ಭಾರತವಾಗಲಿದೆ. ಆಗ ದೇಶದಲ್ಲಿ ಕಾಯಕ, ದಾಸೋಹ, ಸಮಾನತೆ, ಸಾಮರಸ್ಯ ನೆಲೆಸಲಿದೆ ̤
ಹಿಂದೆ ನಾವು ಲಿಂಗಾಯತ ಧರ್ಮ ಮಾನ್ಯತೆಗೆ ಪ್ರಯತ್ನಿಸಿದ್ದೆವು. ಆದರೆ, ಕೆಲವರು ಧರ್ಮ ಒಡೆಯಲು ಪ್ರಯತ್ನಿಸಿದೆ ಎಂದು ಆರೋಪಿಸಿದರು. ಅಂದು ಸ್ವತಂತ್ರ ಧರ್ಮದ ಮಾನ್ಯತೆ ದೊರಕಿದ್ದರೆ ಇಂದು ಲಿಂಗಾಯಿತ ಎಲ್ಲ ಉಪಪಂಗಡಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿದ್ದವು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರದ ಶ್ರೀ ಬಸವಲಿಂಗ ಸ್ವಾಮೀಜಿ, ಮುದಗಲ ತಿಮ್ಮಾಪೂರದ ಡಾ. ಮಹಾಂತ ಸ್ವಾಮಿಗಳು, ನಿಡೋಣಿತ ಶ್ರೀ ಚನ್ನವೀರೇಶ್ವರ ವಿರಕ್ತಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳಹಟ್ಟಿಯ ಶ್ರೀ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ ಸ್ವಾಮೀಜಿ, ಗ್ರಾಮದ ನಾನಾ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ಶರಣ ಎಂ ಬಿ ಪಾಟೀಲರ ಬಸವ ಭಕ್ತಿ ಮೆಚ್ಚುವಂಥದು ಡಾ: ಮಾತೆ ಮಹಾದೇವಿ ತಾಯಿಯವರು ಕನಸು ನನಸು ಮಾಡಲು ಭಕ್ತಿ ದಾಸೋಹ ಮಾಡಿದ್ದಾರೆ 2018 ರಲ್ಲಿ ಶರಣ ಮೇಳದಲ್ಲಿ ಲಕ್ಷಾಂತರ ಶರಣರ ಮುಂದೆ ಡಾ: ಮಾತಾಜಿ ಅವರು ನಮ್ಮ ರಾಜಕೀಯದಲ್ಲಿ ನಮ್ಮ ಲಿಂಗಾಯತ ನಾಯಕ ಶರಣ ಎಂ ಬಿ ಪಾಟೀಲ ಎಂದು ಘೋಷಣೆ ಮಾಡಿದರು ಅದಕ್ಕಾಗಿ ನಾವು ರಾಜಕೀಯದಲ್ಲಿ ಲಿಂಗಾಯತ ನಾಯಕ ಶರಣ ಎಂ ಬಿ ಪಾಟೀಲ ಅಂತ ಒಪ್ಪಿಕೊಂಡಿದ್ದೆವೆ. ಅವರೆ ಸೂಕ್ತವಾದ ವ್ಯಕ್ತಿ