ಸೊಲ್ಲಾಪುರ
ಜಾಗತಿಕ ಲಿಂಗಾಯತ ಮಹಾಸಭಾ ಸೊಲ್ಲಾಪುರ ಘಟಕದಿಂದ ಜಿಲ್ಲಾಮಟ್ಟದಲ್ಲಿ ೧೦ ನೇ ಮತ್ತು ೧೨ ನೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ಬಸವ ಪ್ರತಿಭಾ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗೋಗಾವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಜೂ.೧೪ ರಂದು ಬೆಳಿಗ್ಗೆ ೯.೩೦ಕ್ಕೆ ಇಲ್ಲಿಯ ಮಾತೊಶ್ರೀ ಸಿದ್ಧವ್ವಬಾಯಿ ಹತ್ತುರೆ ಸಾಂಸ್ಕೃತಿಕ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಜಿಲ್ಲೆಯಲ್ಲಿಯ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳ ೧೦ ನೇ ಇಯತ್ತೆಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಮತ್ತು ೧೨ ನೇ ಇಯತ್ತೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾಥಿಗಳಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವದು.
ಧುತ್ತರಗಾವ-ಉಸ್ತುರಿಯ ಪೂಜ್ಯರಾದ ಕೋರಣೇಶ್ವರ ಶ್ರೀಗಳು ಮತ್ತು ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಶ್ರೀಗಳ ಸಾನಿಧ್ಯದಲ್ಲಿ, ಸರಕಾರಿ ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ ಅಲಗೊಂಡ ಪಾಟೀಲರ ಅಧ್ಯಕ್ಷತೆಯಲ್ಲಿ ಸೊಲ್ಲಾಪುರ ಎಮ್.ಕೆ. ಫೌಂಡೇಶನ್ ಸಂಸ್ಥಾಪಕ ಮಹಾದೇವ ಕೋಗನೂರೆಯವರು ಕಾರ್ಯಕ್ರಮ ಉದ್ಘಾಟಿಸುವರು.
ದಕ್ಷಿಣ ಸೊಲ್ಲಾಪುರದ ಶಿವಸೇನೆಯ ಯುವನೇತಾರ ಅಮರ ಪಾಟೀಲ, ಜಾಲಿಂಮದ ಮಹಾರಾಷ್ಟ್ರದ ಅಧ್ಯಕ್ಷ ರಾಜಶೇಖರ ತಂಬಾಕೆ, ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ, ಕಲಬುರಗಿ ಅಧ್ಯಕ್ಷ ಪ್ರಭುಲಿಂಗ ಮಹಾಗಾವಕರ, ಕಾರ್ಯದರ್ಶಿ ಆರ್.ಜಿ. ಶೆಟಗಾರ, ಮುಂಬಯಿಯ ಮಾಜಿ ಉಪಮೇಯರ ಶಶಿಕಾಂತ ಬಿರಾಜದಾರ, ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ವೀರಭದ್ರ ಯಾದವಾಡ, ಲಾಯನ್ಸ್ ಕ್ಲಬ್ನ ಗವ್ಹರ್ನರ್ ರಾಜಶೇಖರ ಕಾಪಸೆ, ಸಮಾಜಸೇವಕ ವೀರೇಂದ್ರ ಹಿಂಗಮಿರೆ, ಸರಕಾರಿ ಗುತ್ತಿಗೆದಾರ ರೇವಣಸಿದ್ಧ ಬಿಜ್ಜರಗಿ ಮುಂತಾದವರು ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಣೆ ನಡೆಯುವದು.
ಡ್ರೀಮ್ ಫೌಂಡೇಶನ್ನ ಕಾಶಿನಾಥ ಭತಕುಣಕಿ, ನೆಟ್-ಸೆಟ್ ಪರೀಕ್ಷೆಯಲ್ಲಿ ವಿಶ್ವವಿಕ್ರಮ ಮಾಡಿದ ದಾನಯ್ಯ ಕವಟಗಿಮಠರಿಂದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ಇರುತ್ತದೆ.
ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಲಾಯನ್ಸ್ ಕ್ಲಬ್ನ ಗವ್ಹರನರ್ ರಾಜಶೇಖರ ಕಾಪಸೆ, ಸೊಲ್ಲಾಪುರದ ಕೃಷಿ ಉತ್ಪನ್ನ ಮಾರುಕಟ್ಟೆ ನೂತನ ಸಂಚಾಲಕಿ ಇಂದುಮತಿ ಅಲಗೊಂಡ, ನೂತನ ಪ್ರಾಂಶುಪಾಲ ಡಾ. ಗುರಲಿಂಗಪ್ಪ ಧಬಾಲೆ, ಯುವ ಎಂಜಿನಿಯರ್ ಪ್ರಜ್ವಲ ಚಲಗೇರಿ, ರಿತೇಶ ಪಾಟೀಲ, ಋಗ್ವೇದಿ ಪಾಟೀಲರನ್ನು ಗೌರವಿಸಲಾಗುವದು. ಸಮಾಜ ಬಾಂಧವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.
