‘ಕಾಯಕದಲ್ಲೆ ಕೈಲಾಸ ಕಾಣುವ ಸಮಾಜ ಬಣಜಿಗ ಸಮಾಜ’

ಜಮಖಂಡಿ

‘ಅಕ್ಕ ಮಹಾದೇವಿ, ಹುಬ್ಬಳ್ಳಿ ಸಿದ್ಧಾರೂಢರು, ಡಾ. ಚನ್ನಬಸವ ಪಟ್ಟದೇವರು ಬಣಜಿಗ ಸಮಾಜದವರು ಆಗಿದ್ದರೂ ಅವರು ಒಂದೇ ಜಾತಿಗೆ ಸೀಮಿತರಾಗಿರಲಿಲ್ಲ. ಎಲ್ಲರನ್ನು ಒಂದೇ ತೆರನಾಗಿ ಕಂಡವರು. ಕಾಯಕದಲ್ಲೆ ಕೈಲಾಸ ಕಾಣುವ ಸಮಾಜ ಬಣಜಿಗ ಸಮಾಜವಾಗಿದೆ’ ಎಂದು ಓಲೇಮಠದ ಆನಂದ ದೇವರು ಹೇಳಿದರು.

ನಗರದ ದಾನಮ್ಮದೇವಿ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ನಗರ ಘಟಕ, ಬಣಜಿಗ ದೈವ ಮಂಡಳಿ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಮಕ್ಕಳು ಉನ್ನತ ಸ್ಥಾನ ಅಲಂಕರಿಸಬೇಕು. ಮಹತ್ತರ ಗುರಿಗಳನ್ನು ಇಟ್ಟುಕೊಂಡು, ಅವುಗಳನ್ನು ತಲುಪಲು ಪ್ರಯತ್ನಿಸಬೇಕು ಎಂದು ಹೇಳಿದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳಿಂದ ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರುವುದರೊಂದಿಗೆ ಸಾಧನೆಯ ಶಕ್ತಿ ಇಮ್ಮಡಿಗೊಳ್ಳುತ್ತದೆ. ಮಕ್ಕಳಿಗೆ ಪ್ರೋತ್ಸಾಹ ಕಾರ್ಯ ಸದಾ ನಡೆಯಬೇಕು ಎಂದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್. ಬಾಂಗಿ, ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ ಬಾಂಗಿ ಮಾತನಾಡಿದರು.

ವೇದಿಕೆಯಲ್ಲಿ ಮುಖಂಡ ಬಸವರಾಜ ನ್ಯಾಮಗೌಡ, ಧರ್ಮಲಿಂಗಯ್ಯ ಗುಡಗುಂಟಿ, ಶ್ರೀಶೈಲ ಮೊಟಗಿ, ಜಿ.ಆರ್. ಅನಂತಪೂರ, ಶಿವಾನಂದ ಜಿರಲಿ, ಸಿದ್ರಾಮಪ್ಪ ಶಿರೋಳ, ಮೇಘಾ ಮಹಾಬಳಶೆಟ್ಟಿ, ನಿಖಿತಾ ಅನಂತಪೂರ, ಜಿ.ಆರ್. ಅನಂತಪೂರ, ಮಲ್ಲಪ್ಪ ಮುದಕಣ್ಣವರ, ಸಂಗಮೇಶ ಹಲವಾಯಿ, ಮಲ್ಲಪ್ಪ ಜೈನಾಪೂರ, ನಾಗೇಂದ್ರ ಶಿರಗಣ್ಣವರ, ಬಸವರಾಜ ಕೋತಿನ, ಷಣ್ಮುಖಪ್ಪ ಮಹಾಬಳಶೆಟ್ಟಿ, ಬಸವರಾಜ ಹರಕಂಗಿ, ಗಿರೀಶ ಬಾಂಗಿ, ಶಂಕರ ಜಿರಲಿ, ಪ್ರಭು ಕಲ್ಯಾಣಶೆಟ್ಟಿ, ರಮೇಶ ಉಪ್ಪಿನ, ಸದಾಶಿವ ಬಾಗೇವಾಡಿ, ಶಿವಾನಂದ ಗೊಂದಿ, ಮಲ್ಲಿಕಾರ್ಜುನ ಇಂಗಳಗಾಂವಿ, ಮುರಗೆಪ್ಪ ಕುರಿ, ಉಮೇಶ ಮುರಗೋಡ, ರಾಜು ಕರಣಿ, ಇದ್ದರು.

ದಂಡಮ್ಮಾ ಕಲ್ಯಾಣಶೆಟ್ಟಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಜೀರಲಿ ಸ್ವಾಗತಿಸಿದರು, ಸದಾಶಿವ ಬಾಗೇವಾಡಿ, ಚಂದ್ರಶೇಖರ ಜತ್ತಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *