ಬೆಳಗಾವಿ
ವಿಶ್ವಗುರು ಬಸವ ಜಯಂತ್ಯೋತ್ಸವ ಹಾಗೂ ಮುಕ್ತಿವಾಹನ ಲೋಕಾರ್ಪಣೆ ಕಾರ್ಯಕ್ರಮ ಜೂನ್ 17, 2025 ಮಂಗಳವಾರ ಸಂಜೆ 5 ಗಂಟೆಗೆ, ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆಯಲಿದೆ.
ದಿವ್ಯಸಾನಿಧ್ಯವನ್ನು ಗದಗ ತೋಂಟದಾರ್ಯ ಮಠದ ಪೂಜ್ಯ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಶ್ರೀಗುರು ಶಾಂತೇಶ್ವರ ಸಂಸ್ಥಾನದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಮಕನಮರಡಿ ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದ ಪೂಜ್ಯ ಸಿದ್ಧಬಸವ ಸ್ವಾಮೀಜಿ, ಬೆಳಗಾವಿ ಕಲ್ಮಠದ ಪೂಜ್ಯ ಶಶಿಧರಯ್ಯ ಸ್ವಾಮೀಜಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ ಶರಣ ಸೂರ್ಯಕಾಂತ ಭಾಂವಿ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಶರಣ ಅಶೋಕ ಬೆಂಡಿಗೇರಿ ಅವರುಗಳು ವಹಿಸಲಿದ್ದಾರೆ.