ಬೆಳಗಾವಿ
ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರವಿವಾರ ಸತ್ಸಂಗ ಕಾರ್ಯಕ್ರಮ ನಡೆಯಿತು.
ಪರಶಿವ ಲಿಂಗವೇ ತಾನಾದ ಶರಣರ ಮಾತು ಮಾತಲ್ಲ ಅದು ದಿವ್ಯ ಪ್ರಭೆಯನ್ನು ಬೀರುವ ಜ್ಯೋತಿರ್ಲಿಂಗ ಎಂದು ಸುನಿತಾ ಹೇಳಿದರು.
ಉಮಾ ಘೀವಾರಿಯವರು ದಾನ ಎಂಬುದು ಅತ್ಯಂತ ಶ್ರೇಷ್ಠವಾದುದಾಗಿದ್ದು, ನಾವು ಬಳಸಿಬಿಟ್ಟ ವಸ್ತುಗಳನ್ನು ಕೊಡುವುದು ದಾನವಾಗುವುದಿಲ್ಲ, ಬಡವರಿಗೆ ಏನು ಅತ್ಯಂತ ಅವಶ್ಯಕವಾಗಿದೆ ಅದನ್ನು ಅರಿತು ನೀಡಬೇಕು, ಕುಟುಂಬವನ್ನು ಹೇಗೆ ಅನನ್ಯವಾಗಿ ಪ್ರೀತಿಸುತ್ತೆವೆಯೋ ಹಾಗೆ ದೇವರನ್ನು ಕೂಡಾ ಅನನ್ಯವಾಗಿ ಪ್ರೀತಿಸಬೇಕು. ಅನನ್ಯ ಪ್ರೀತಿಯೇ ಭಕ್ತಿಯ ಸ್ವರೂಪವಾಗಿದೆ ಎಂದು ಹೇಳಿದರು.
ಲಲಿತಾ ರುದ್ರಗೌಡರ ಅವರು ತಮ್ಮ ವಚನ ವಿಶ್ಲೇಷಣೆಯಲ್ಲಿ ನುಡಿದರೆ ಮುತ್ತಿನ ಹಾರದಂತೆ ಇರಬೇಕು, ಮುಗ್ದ ಮಗುವಿನ ಮಾತುಗಳು ಮುತ್ತು ಸುರಿದಂತೆ ಹಾಗೆ ನಾವು ಕೂಡಾ ನಿರ್ಮಲ ಮನಸ್ಸಿನಿಂದ ಪ್ರೀತಿಯಿಂದ, ಸದುವಿನಯದಿಂದ ಮಾತನಾಡಬೇಕು, ಇನ್ನೊಬ್ಬರಿಗೆ ನೊವಾಗದಂತೆ ಮಾತನಾಡಬೇಕು, ದೇವರೇ ಮೆಚ್ಚುವಂತೆ ಮಾತನಾಡಬೆಕೆಂದು ಹೇಳಿದರು.
ವಸಂತಕ್ಕಾ ಗಡ್ಕರಿ, ನಾಗರತ್ನಾ ಪಾಟಿಲ ಮಹಾದೇವ ಕೋರಿ ಅವರು ವಚನ ಗಾಯನ ಮಾಡಿದರು. ಪ್ರೇಮಾ ಪುರಾಣಿಕಮಠ, ಮೋಹನ ಮುನವಳ್ಳಿ, ಅಧ್ಯಕ್ಷರಾದ ಎಸ್. ಜಿ. ಸಿದ್ನಾಳರು ವಚನ ವಾಚನ ಮಾಡಿದರು. ಶರಣರಾದ ಕಟ್ಟಿಮನಿಯವರು ನಿರೂಪಣೆ ಮಾಡಿದರು. ಶೈಲಜಾ ಮುನವಳ್ಳಿ, ಲಲಿತಾ ರುದ್ರಗೌಡರ, ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯದರ್ಶಿ ಶಂಕರ ಶೆಟ್ಟಿ, ಶರಣರಾದ ಏಣಿಗಿಮಠ, ರುದ್ರಗೌಡರ, ಪಾಟಿಲ, ಶರಣೆ ಜಯಶ್ರೀ ಮುಗಳಿ ಅವರು ಉಪಸ್ಥಿತರಿದ್ದರು.