ಹಾಸನ
ಕ್ಯಾನ್ಸರ್ ಸೇರಿದಂತೆ ದೀರ್ಘಾವಧಿ ರೋಗಿಗಳ ಹಾಗೂ ವಿಶೇಷ ಚೇತನರ ಮಕ್ಕಳಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ತಣ್ಣೀರುಹಳ್ಳ ಮಠದಲ್ಲಿರುವ ಹಾಸನದ ವೀರಶೈವ ಮಹಾಸಭಾ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಮಹಿಳಾ ಘಟಕ ಹಾಗೂ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಶಿರದನಹಳ್ಳಿ ಮಠದ ಪೂಜ್ಯ ಸದಾಶಿವ ಸ್ವಾಮಿಗಳು ವಹಿಸಿದ್ದರು.

ಈ ಸಂದರ್ಭದಲ್ಲಿ ವೀರಶೈವ ಮಹಾಸಭ ಜಿಲ್ಲಾದ್ಯಕ್ಷರಾದ ನವಿಲೆ ಪರಮೇಶ, ಪ್ರದಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಘಟಕದ ನಿರ್ದೇಶಕರಾದ ನಾಗರತ್ನ (ಜ್ಯೋತಿ ಗಣೇಶ್) ಹಾಗೂ ವೀರಶೈವ ಮಹಾಸಭಾ ಹಾಸನ ತಾಲ್ಲೂಕು ಘಟಕದ ಅದ್ಯಕ್ಷ ಮಮತಾ ಪಾಟೀಲ, ಪ್ರದಾನ ಕಾರ್ಯದರ್ಶಿ ಕೆ.ಎಸ್ ಧನಲಕ್ಷ್ಮೀ, ಖಜಾಂಚಿ ಶೈಲಾ ಮದನ್, ನಾಗರತ್ನ ಯೋಗೇಶ, ಗಿರಿಜಾಂಬಿಕ, ಇಂದಿರಾ ಸತೀಶ್, ಕಮಲ ಚಂದ್ರಶೇಖರ, ಅನುಸೂಯ, ಬಾಮಿನಿ ಹೇಮಂತ್, ವೀಣಾ ದೇವರಾಜ್ ಮತ್ತು ವಿವೇಕಾನಂದ ಯೂಥ್ ಮೂಮೆಂಟ್ ನ ಯೋಗಾನಂದ ಹಾಗೂ ಸಮಾಜದ ಮುಖಂಡರಾದ ಮಯೂರಿ ಲೋಕೇಶ್, ಅವಿನಾಶ್ ಜಿ.ಎಸ್, ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.