ಕಲಬುರಗಿ
‘ಮಹಾನ್ ದಾರ್ಶನಿಕ ಬಸವಣ್ಣ’ವಚನ ಆಷಾಢ ಪ್ರವಚನ-2025, ಬಸವ ಸಮಿತಿಯಿಂದ ಜೂನ್ 22ರಿಂದ ಜುಲೈ 20 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ, ಕಲ್ಬುರ್ಗಿ, ಜಯನಗರದ ಅನುಭವ ಮಂಟಪದಲ್ಲಿ ನಡೆಯಲಿದೆ.
ನಾಡಿನ ಹೆಸರಾಂತ ಅನುಭಾವಿಗಳಾದ ಹುಕ್ಕೇರಿ ತಾಲೂಕು, ಬಸವಬೆಳವಿ ಚರಂತೇಶ್ವರ ವಿರಕ್ತಮಠದ ಪೂಜ್ಯ ಶರಣಬಸವ ಸ್ವಾಮಿಗಳು ಪ್ರವಚನ ಮಾಡಲಿದ್ದಾರೆ.
ಉದ್ಘಾಟಕರಾಗಿ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಡಾ. ಅರವಿಂದ ಜತ್ತಿ ಆಗಮಿಸುತ್ತಿದ್ದು, ಅಧ್ಯಕ್ಷತೆಯನ್ನು ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ವಹಿಸಲಿದ್ದಾರೆ.