‘ಮುಂದೆ ಈ ರೀತಿ ಮಾಡುವುದಿಲ್ಲವೆಂದು ಬನ್ನಂಜೆ ಭರವಸೆ ಕೊಟ್ಟಿದ್ದಾರೆ.’
ಜಮಖಂಡಿ
ಅನುಭವ ಮಂಟಪದ ಅಸ್ತಿತ್ವವನ್ನು ಪ್ರಶ್ನಿಸಿ ನಾಡಿನ ಲಿಂಗಾಯತ ಸಮಾಜವನ್ನು ಪ್ರಚೋದಿಸಿದ್ದ ವೈದಿಕ ಧರ್ಮ ಪ್ರಚಾರಕಿ ವೀಣಾ ಬನ್ನಂಜೆಗೆ ಪೊಲೀಸ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವೀಣಾ ಬನ್ನಂಜೆಯ ವಿರುದ್ಧ ದೂರು ನೀಡಿದ್ದ ಜಮಖಂಡಿಯ ನ್ಯಾಯವಾದಿ ರವಿ ಯಡಹಳ್ಳಿ ಅವರಿಗೆ ಪೊಲೀಸರು ಜೂನ್ 20ರಂದು ಲಿಖಿತ ಮಾಹಿತಿ ನೀಡಿದ್ದಾರೆ.
ಇನ್ನೊಮ್ಮೆ ಲಿಂಗಾಯತ ಧರ್ಮದ ಬಗ್ಗೆ, ಶರಣರ ಬಗ್ಗೆ ಅವಮಾನಕರವಾಗಿ ಮಾತಾಡಿದರೆ ನಿಮ್ಮ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೀಣಾ ಬನ್ನಂಜೆಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬನ್ನಂಜೆಯವರ ನಾಲ್ಕೈದು ಮಂದಿ ಸ್ಥಳೀಯ ಅನುಯಾಯಿಗಳಿಗೂ ಎಚ್ಚರಿಕೆ ನೀಡಲಾಗಿದೆ, ಎಂದು ಯಡಹಳ್ಳಿ ಹೇಳಿದರು.
ಜಮಖಂಡಿ ಬಳಿಯ ಕಲ್ಲಹಳ್ಳಿಯಲ್ಲಿರುವ ಸತ್ಯಕಾಮ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ವೀಣಾ ಬನ್ನಂಜೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬನ್ನಂಜೆಯವರ ಚಲನವಲನದ ಮೇಲೆ ಗಮನವಿಟ್ಟಿರುವುದಾಗಿ ಮತ್ತು ಅವರು ಶರಣರ ಬಗ್ಗೆ ಮತ್ತೆ ಹಗುರವಾಗಿ ಮಾತನಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಮಖಂಡಿ ಗ್ರಾಮೀಣ ಪೊಲೀಸರಿಂದ ಲಿಖಿತ ಹೇಳಿಕೆ ಬಂದಿದೆ. ಇದಕ್ಕೆ ಪ್ರತಿಯಾಗಿ ಮುಂದೆ ಈ ರೀತಿ ಮಾಡುವುದಿಲ್ಲವೆಂದು ಬನ್ನಂಜೆ ಭರವಸೆ ಕೊಟ್ಟಿದ್ದಾರೆ, ಎಂದು ಯಡಹಳ್ಳಿ ಹೇಳಿದರು.

ಹಲವಾರು ವರ್ಷಗಳಿಂದ ವೀಣಾ ಬನ್ನಂಜೆ ವಚನಗಳು ವೇದ, ಉಪನಿಷತ್ತುಗಳ ಸರಳ ಅನುವಾದ, ಲಿಂಗಾಯತರೆಲ್ಲ ಸನಾತನಿ ಹಿಂದೂಗಳ ಭಾಗವೆಂದು ಹೇಳಿಕೊಂಡು ಬಂದಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಯೂ ಟ್ಯೂಬಿನಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದು ಹೇಳಿ ಬನ್ನಂಜೆ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ಸೇರಿದಂತೆ ಹಲವಾರು ಚಿಂತಕರು ಶರಣ ಸಮಾಜದ ಪರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಬಸವ ಕೇಂದ್ರದ ಕಾರ್ಯದರ್ಶಿ ಅಣ್ಣಪ್ಪ ಜಗದೇವ ಅವರ ನೇತೃತ್ವದಲ್ಲಿ ಬನ್ನಂಜೆ ವಿರುದ್ಧ ಜಮಖಂಡಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಆದರೆ ಅವರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದಾಗ ಬಸವ ಕೇಂದ್ರದ ಸದಸ್ಯರು ಮುಖ್ಯಮಂತ್ರಿ, ಗೃಹ ಮಂತ್ರಿ, ಗೃಹ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಬಸವ ಧರ್ಮಕ್ಕೆ ಅಪಮಾನ ಮಾಡಿರುವ ಬನ್ನಂಜೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಪತ್ರ ನೀಡಿದ್ದರು. ಅವರ ಒತ್ತಡದಿಂದ ಪೊಲೀಸರು ಬನ್ನಂಜೆಯವರನ್ನು ಸಂಪರ್ಕಿಸಿದರೆಂದು ತಿಳಿದು ಬಂದಿದೆ.
“ಇಂತಹ ಪ್ರಚೋದನೆಗಳು ಬಂದಾಗ ಬಸವ ಸಂಘಟನೆಗಳು ಪೋಲೀಸರ ಮೂಲಕ ಕಾನೂನಾತ್ಮಕ ಕ್ರಮ ಜರುಗಿಸಲು ಮುಂದಾಗಬೇಕು,” ಎಂದು ಯಡಹಳ್ಳಿ ಹೇಳಿದರು.
“ಸತ್ಯಕಾಮ ಪ್ರತಿಷ್ಠಾನದ ಹೆಸರಿನಲ್ಲಿ ಪ್ರತಿ ವರ್ಷ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವೈದಿಕತೆ ಬಿತ್ತುವ ಕಾರ್ಯಕ್ರಮಗಳನ್ನು ಬನ್ನಂಜೆ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಸರಕಾರ ವೈಚಾರಿಕತೆ ಬಿತ್ತುವ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು, ಎಂದು ಅವರು ಹೇಳಿದರು.

ಶರಣುಶರಣಾರ್ಥಿಗಳು ರವಿ ಯಡಹಳ್ಳಿ ಶರಣರಿಗೆ ,ತಾವು ಅತ್ಯುತ್ತಮ ಕಾರ್ಯ ಮಾಡಿದ್ದೀರಿ ಅದಕ್ಕಾಗಿ ತಮಗೆ ಶರಣುಶರಣಾರ್ಥಿಗಳು.
ಲಿಂಗಾಯತ ಧರ್ಮದ ಅಸಹಿಷ್ಣುಗಳಿಗೆ ಸರಿಯಾದ ಪಾಠವನ್ನು ಕಲಿಸಿದ್ದೀರಿ ,ಇದೆ ತೆರನಾಗಿ ಎಲ್ಲಾ ಲಿಂಗಾಯತ ಧರ್ಮಿಯರು ತಯಾರಾಗಬೇಕು.
Best work…..
ಶರಣು ಶರಣಾರ್ಥಿ. ತಾವು ಲಿಂಗಾಯತ ಸಮಾಜದಲ್ಲಿ ನಿಜವಾದ ಗಣಾಚಾರರಾಗಿ ಜವಾಬ್ದಾರಿ ನಿಭಾಯಿಸಿದ್ದೀರಿ. ತಮಗೆ ಸಹಸ್ರಾರು ಧನ್ಯವಾದ ಗಳು. ತಮ್ಮ ಸಂಸತಿ ಹೆಚ್ಚಾಗಲಿ.
ಬಸವ ಗಂಗೋತ್ರಿ ಆಶ್ರಮ, ಕುಂಬಳಗೋಡು,ಮೈಸೂರು ರಸ್ತೆ
ಜಮಖಂಡಿ ಬಸವ ಕೇಂದ್ರದ ಅಧ್ಯಕ್ಷ ಶ್ರೀ ರವಿ ಯಡಹಳ್ಳಿ ಶರಣರಿಗೆ ಮತ್ತು ಖಜಾಂಚಿ ಶ್ರೀ ಅಣ್ಣಪ್ಪ ಜಗದೇವ ಶರಣರಿಗೆ ಅಭಿನಂದನೆಗಳು ಮತ್ತು ಅಭಿವಂದನೆಗಳು . ಎಲ್ಲಾ ಬಲ್ಲವಳಂತೆ ಪೋಜು ಕೊಡುತ್ತಾ ಮಾತನಾಡುವ ವೀಣಾ ಬನ್ನಂಜೆಗೆ ನಮ್ಮ ಲಿಂಗಾಯತ ಧರ್ಮದ ಬಗ್ಗೆ ಮತ್ತು ಬಸವಾದಿ ಶರಣರ ಮಹಾನ್ ತತ್ವ ಸಿದ್ಧಾಂತಗಳ ಬಗ್ಗೆ ಮತ್ಸರ. ವಿಶ್ವಧರ್ಮವಾಗಬಲ್ಲ ಅರ್ಹತೆ ಹೊಂದಿರುವ ಈ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬಾರದೆಂದು ಅಡ್ಡಗಾಲು ಹಾಕುವ ಉದ್ದೇಶವಿದೆ .
ನ್ಯಾಯವಾದಿಗಳು, ಬಸವವಾದಿಗಳಾದ ತಾವು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದು ಸ್ತುತ್ಯಾರ್ಹವಾಗಿದೆ . ನೀವು ಗಣಾಚಾರ ತತ್ವದ ಪ್ರತಿರೂಪವಾಗಿದ್ದೀರಿ, ತಮಗೆ ಮತ್ತೊಮ್ಮೆ ಶರಣು ಶರಣಾರ್ಥಿಗಳು 🌹🌹🙏🙏🇮🇳🙏🙏
ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ ಕೂಡಲ ಸಂಗಮ ದೇವನು ವಿಪ್ರ ಕರ್ಮವ ಬಿಡಿಸಿ ಅಶುದ್ಧನ ಶುದ್ಧನ ಮಾಡಿದನಾಗಿ, ಎಂದು ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ.
ಯಾರು ತಮ್ಮ ದುಡಿಮೆಯಿಂದ ಅನ್ನವನ್ನು ಸಂಪಾದಿಸಿ ತಿನ್ನುತ್ತಾರೋ ಅವರೇ ಶ್ರೇಷ್ಠರು. ಬೇರೆಯವರ ದುಡಿಮೆಯ ಮೇಲೆ ಬದುಕುವವನು ಕನಿಷ್ಠ ಎಂದು ದುಡಿಮೆಗೆ ಗೌರವ ತಂದುಕೊಟ್ಟವರು ಬಸವಣ್ಣನವರು. ಹೀಗಾಗಿಯೇ ಅವರು ನಿಜವಾದ ನಾಯಕರಾದರು. ಅಂದಿನ ಸಮಾಜ ಅವರನ್ನು ನಾಯಕನೆಂದು ಒಪ್ಪಿಕೊಂಡಿತು. ಅಂತಹ ಮಹಾನ್ ದಾರ್ಶನಿಕರ. ರ್ಜಯಂತಿಯನ್ನು ನಾವು “ಕಾಯಕ ಜಯಂತಿ” ಎಂದು ಆಚರಿಸುವುದು ಅತ್ಯಂತ ಅರ್ಥಪೂರ್ಣ. ಅದು ನಿಜಕ್ಕೂ ಬಸವ ಜಯಂತಿ ಆಚರಣೆ ಆಗುತ್ತದೆ. ಈ ವಿಷಯ ಬನ್ನಜೆ ತಾಯಿಯವರ ಗಮನಕ್ಕೆ ತರಬೇಕು.
Congratulations 👏👏
👁
ಸಾರ್ವಜನಿಕವಾಗಿ ಅವರಿಂದ ಬರಬೇಕು ಮತ್ತು ಸಾಮಾಜಿಕ ಸಾರ್ವಜನಿಕ ಮಾಧ್ಯಮ ಮುಖಾಂತರ ಪ್ರಚಾರದ ಹೊರತು ಹೆಚ್ಚು ಉಪಯೋಗವಾಗಲಿಕ್ಕಿಲ್ಲ.
ಈ ದೂರು ಭ್ರಮೆಯ ಸುಳ್ಳು ಸಂಶಯ ಹರಡುವ ಷಡ್ಯಂತ್ರಿಗಳಿಗೆ ಸರಿಯಾದ ಪ್ರತಿರೋಧ.
🥲💐
ಶರಣ ಯಡಹಳ್ಳಿಯವರಿಗೆ ಅಭಿನಂದನೆಗಳು 👍🙏
ಅಭಿನಂದನೆಗಳು
ಶರಣ ರವಿ ಯಡಹಳ್ಳಿ ಅವರಿಗೆ ಸಾವಿರ ಸಾವಿರ ಶರಣಾರ್ಥಿಗಳು.ಬಸವಾದಿ ಶರಣರು ಹೇಳಿದ ರೀತಿಯಲ್ಲಿ,ತಾವು ನಿಜವಾಗಿಯೂ ಗಣಾಚಾರ ಸಾಧಿಸಿದ್ದೀರಿ. ತಮ್ಮಂಥ ಶರಣರ ಸಂಖ್ಯೆಯು ಸಾವಿರ-ಲಕ್ಷ ಲಕ್ಷವಾಗಲಿ. ಆವಾಗ ಮಾತ್ರ ‘ಲಿಂಗಾಯತ’ ಉಳಿಯಲು ಸಾಧ್ಯ.ಲಿಂಗಾಯತದ ದಿಟ ವಾರಸುದಾರರು ತಾವು. ತಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ. ಶರಣಾರ್ಥಿಗಳು. “ಹೆಣ್ಣು ಮಕ್ಕಳನ್ನು ಇಂದಿಗೂ ಅವರು ಶೂದ್ರರಲ್ಲ” ಎಂದು ಹೇಳುತ್ತಿಲ್ಲ-ವೈದಿಕರು. ಅದನ್ನು ಆ ತಾಯಿ ಮೊದಲು ಕಳೆದುಕೊಳ್ಳಲಿ.ನಂತರ ಬೇರೆ ಧರ್ಮದ ಬಗ್ಗೆ ಮಾತಾಡಲಿ. ಬೇರೆ ಧರ್ಮದವರ ವಿಚಾರವಾದರೂ ಏಕೆ ಮಾತಾಡಬೇಕು ? ಸುಮ್ಮನೆ ಇರಲಾರದವರು ಇರುವೆ ಬಿಟ್ಟುಕೊಂಡಂತೆ-ಇಂಥವರ ಕಥೆ.
ಈಹಿಂದೆ ಅಕ್ಕಮಹಾದೇವಿಯರ ಬಗ್ಗೆನು ಮಾತಡಿದ್ದರು ಹಗುರವಾಗಿ ನಮ್ಮ ಶರಣರ ಬಗ್ಗೆ ಹಗುರವಾಗಿ ಮಾತನಾಡುವದನ್ನ ಬಿಡಬೇಕು ಇವಮ್ಮ
ಮಾನ್ಯ ವೀಣಾ ಬನ್ನಂಜೆರವರು ಶರಣರ ವಿಚಾರದಲ್ಲಿ ಒಳ್ಳೆಯ ಭಾವನೆ ಹೊಂದಿದವರು, ಇತ್ತೀಚೆಗೆ ಈ ಕೋಮುವಾದಿ R S S, ವಿ.ಹಿ. ಪ. ಗಳ ಗಾಳಕ್ಕೆ ಸಿಲುಕಿ ತಮ್ಮ ನೈಜ ದಾರಿಗೆ ತಾವೇ ತೊಡಕು ಮಾಡಿಕೊಂಡಿರುತ್ತಾರೆ. ಇವರ ಹಿಂದಿನ ಕೋಮುವಾದಿಗಳು ತಮ್ಮತೆಕ್ಕೆಗೆ ತೆಗೆದುಕೊಂಡು ಆಟ ಆಡಿಸುತ್ತಿದ್ದಾರೆ.
ನೀವು ಮಾಡಿದ ಕಾರ್ಯಕ್ಕೆ ಸಂಪೂರ್ಣ ನಮ್ಮ ಬೆಂಬಲವಿದೆ,ನಾವು ನಿಮ್ಮ ಜೊತೆಗಿದ್ದೇವೆ.
ಶರಣುಶರಣಾರ್ಥಿಗಳು.