ಬೆಂಗಳೂರು
ಅನುಭವ ಮಂಟಪದ ಅಸ್ತಿತ್ವವನ್ನು ನಿರಾಕರಿಸಿ ನಾಡಿನ ಬಸವಾನುಯಾಯಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ವೀಣಾ ಬನ್ನಂಜೆ ವಿವಾದಿತ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಈ ಮಾರ್ಚ್ ತಿಂಗಳಲ್ಲಿ ತಮ್ಮ ಯೂ ಟ್ಯೂಬ್ ಖಾತೆಯಲ್ಲಿ ಹಾಕಿದ್ದ ಹೊಸ ವಿಡಿಯೋನಲ್ಲಿ ಬನ್ನಂಜೆ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದಿದ್ದರು.
ಅವರ ಪ್ರಕಾರ 12ನೇ ಶತಮಾನದ ಆಕರಗಳಾದ ಹರಿಹರನ ರಗಳೆ, ವಚನಗಳಲ್ಲಿ ಅನುಭವ ಮಂಟಪದ ಹೆಸರು, ಕಲ್ಪನೆ ಕಾಣಿಸುವುದಿಲ್ಲ. ನಂತರದ ಶತಮಾನಗಳಲ್ಲಿ ಬಂದ ಶೂನ್ಯ ಸಂಪಾದನೆಗಳಿಂದ ಈ ಕಲ್ಪನೆ ಶುರುವಾಯಿತು ಎಂದಿದ್ದರು.
ವೈದಿಕ ಧರ್ಮ ಪ್ರಚಾರಕಿ ಮತ್ತು ಸಂಘ ಪರಿವಾರದ ಚಿಂತಕಿಯಾಗಿರುವ ಬನ್ನಂಜೆ ಬಹಳ ವರ್ಷಗಳಿಂದ ವಚನಗಳು ವೇದ, ಉಪನಿಷತ್ತುಗಳ ಸರಳ ಅನುವಾದ, ಲಿಂಗಾಯತರೆಲ್ಲ ಸನಾತನಿ ಹಿಂದೂಗಳ ಭಾಗವೆಂದು ವಾದಿಸಿಕೊಂಡು ಬಂದಿದ್ದಾರೆ. ವಚನ ದರ್ಶನ ಲೇಖಕರಲ್ಲಿ ಒಬ್ಬರಾದ ಇವರು ಇತ್ತೀಚೆಗೆ ಸೇಡಂನಲ್ಲಿ ನಡೆದ ಆರೆಸ್ಸೆಸ್ ಸಂಸ್ಕೃತಿ ಉತ್ಸವದಲ್ಲಿಯೂ ಕಾಣಿಸಿಕೊಂಡಿದ್ದರು.

ಬನ್ನಂಜೆಯವರನ್ನು ಇಲ್ಲಿಯವರೆಗೆ ಶರಣ ಸಮುದಾಯ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಲಿಂಗಾಯತ ಅಸ್ಮಿತೆಯ ಆಧಾರ ಸ್ತಂಭವಾದ ಅನುಭವ ಮಂಟಪವನ್ನೇ ಅಲುಗಾಡಿಸುವ ಅವರ ಪ್ರಯತ್ನಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ಬಸವಾನುಯಾಯಿಗಳಿಂದ ಬಂದಿತು.
ಅನುಭವ ಮಂಟಪ ಐತಿಹಾಸಿಕ ಸತ್ಯ. ಬ್ರಾಹ್ಮಣ್ಯದಲ್ಲಿ ಮುಳುಗಿ ಹೋಗಿರುವ ಬನ್ನಂಜೆಯವರಂತಹ ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ಮಾತ್ರ ಇದನ್ನು ಅಲ್ಲಗೆಳೆಯಲು ಸಾಧ್ಯ, ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್ ಪ್ರತಿಕ್ರಿಯೆ ನೀಡಿದ್ದರು.
ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆಯಾಗಿದ್ದರಿಂದ ಸಂಘ ಪರಿವಾರದವರ ಹೊಟ್ಟೆ ಉರಿಯುತ್ತಿದೆ. ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರಲ್ಲಿ ಯಾರನ್ನಾದರೂ ಒಬ್ಬರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದ್ದರೆ ಇವರಿಗೆ ಸಮಾಧಾನವಾಗುತ್ತಿತ್ತೇನೋ ಎಂಬ ಪ್ರಶ್ನೆಯನ್ನೂ ಜಾಮದಾರ್ ಕೇಳಿದ್ದರು.
ಬರಹಗಾರ ಅಗ್ನಿ ಶ್ರೀಧರ್ ಕೂಡ ಒಂದು ವಿಡಿಯೋ ಮಾಡಿ ಬಸವಣ್ಣನವರ ಗೌರವಕ್ಕೆ ಚ್ಯುತಿಬಾರದಂತೆ ನಡೆದುಕೊಳ್ಳಲು ಬನ್ನಂಜೆಯವರಿಗೆ ತಿಳಿ ಹೇಳಿದ್ದರು.
ಜಮಖಂಡಿ ಬಸವ ಕೇಂದ್ರದ ಕಾರ್ಯಕರ್ತರು ದೂರು ನೀಡಿದ ಮೇಲೆ ಪೊಲೀಸರು ಲಿಂಗಾಯತ ಧರ್ಮದ ಹಾಗೂ ಬಸವಾದಿ ಶರಣರ ಮೇಲೆ ಅವಮಾನಕಾರಿಯಾಗಿ ಮಾತನಾಡದಂತೆ ಎಚ್ಚರಿಕೆಯನ್ನೂ ಬನ್ನಂಜೆ ಅವರಿಗೆ ನೀಡಿದ್ದರು.
ಈ ವಿವಾದಗಳ ಹಿನ್ನಲೆಯಲ್ಲಿ ಬನ್ನಂಜೆ ತಮ್ಮ ಯೂ ಟ್ಯೂಬ್ ಖಾತೆಯಿಂದ ಅನುಭವ ಮಂಟಪದ ವಿಡಿಯೋ ತೆಗೆದು ಹಾಕಿ ಅಲ್ಲಿ ಒಂದು ಹೇಳಿಕೆಯನ್ನು ದೊಡ್ಡದಾಗಿ ಹಾಕಿಕೊಂಡಿದ್ದಾರೆ:
ಅರಿವಿಗೆ ಬಾರದ್ದೇ ನುಡಿಯಬಾರದು
ಅರಿವಿಗೆ ಬಂದದನ್ನು ನುಡಿಯಲಾಗದು
ವೀಣಾ ಬನ್ನಂಜೆ
ಕೃಷ್ಣ Vs ಬಸವ : ಎತ್ತಣಿಂದೆತ್ತ ಹೋಲಿಕೆಯಯ್ಯಾ…

ನುಡಿಯಬಾರದ್ದನ್ನು ನುಡಿಯಬಾರದು.
ವೈದಿಕಕ್ಕೆ ನಿಲುಕಿದ್ದು ಮತ್ತು ಅದರ ಚೌಕಟ್ಟಿನಲ್ಲಿ ನೋಡಿದ್ದು ಮಾತ್ರ ಸತ್ಯವಲ್ಲ. ಹಲವು ಸತ್ಯಗಳಿವೆ. ಬಸವ/ಶರಣ ತತ್ವ ವೈದಿಕ ತತ್ವವನ್ನು ಮೀರಿ ಅದರಾಚೆಗಿನ ಸತ್ಯವನ್ನು ಕಂಡುಕೊಂಡು ಮುಂದೇಹೋಗಿರುವ ತತ್ವ. ಅದನ್ನು ವೈದಿಕ ಅಥವಾ ಸನಾತನ ಚೌಕಟ್ಟಿನೊಳಗೆ ನೋಡಲು ಅಥವಾ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇನ್ನಾದರೂ ಬಸವಾದಿ ಶರಣರ ವಿಚಾರಗಳು ವೈದಿಕ ವಿಚಾರಗಳ ಮುಂದುವರಿದ ಭಾಗ ಎನ್ನುವ ಸುಳ್ಳು
ಮಾತುಗಳನ್ನು ಆಡುವುದನ್ನು ನಿಲ್ಲಿಸಿ. ಶ್ರೇಷ್ಟತೆಯ
ವ್ಯಸನದಿಂದ ಹೊರಗೆ ಬಂದು ಮನುಷ್ಯ ಪ್ರೀತಿ
ಹಂಚಿಕೊಳ್ಳಿ ವೀಣಾ ಬನ್ನಂಜೆ ಅಕ್ಕಾ
ಅರಿವಿಗೆ ಬಂದ ಸುಳ್ಳು ನುಡಿಯಲಾಗದು ಅಕ್ಕ
ಬನ್ನಂಜೆ ಅವರನ್ನು ಅವರ ಮುಲಾಧರ್ಮದವರು ಎತ್ತಲುಹೋಗಲು ಬಿಡರು, ವೈದಿಕತೆಯ ರಾಡಿಯಲ್ಲಿ ಅವರನ್ನು ತಂದು ಮುಳುಗಿಸಿದ್ದಾರೆ.