ತನ್ನ ತಾನರಿದೊಡೆ ತಾನೇ ದೇವರು: ಅರವಿಂದ ಜತ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸವಾದಿ ಶರಣರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 870 ನೆಯ ದತ್ತಿ ಕಾರ್ಯಕ್ರಮದಲ್ಲಿ ‘ನಾನು ಯಾರು?’ ವಿಷಯದ ಕುರಿತು ಉಪನ್ಯಾಸ ನಡೆಯಿತು.

ಉಪನ್ಯಾಸ ನೀಡಿದ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ಮಾತನಾಡುತ್ತಾ, ನಿನ್ನನ್ನು ನೀ ಅರಿ ಎಂದು ಸಾಕ್ರೆಟಸ್ ಹೇಳಿದನು, ಬಸವಾದಿ ಶರಣರು ತನ್ನನ್ನು ತಾನು ಹೇಗೆ ಅರಿಯುವುದು ಎಂಬ ದಾರಿ ತೋರಿದರು.

ವಿವೇಕಾನಂದರು, ದ. ರಾ. ಬೇಂದ್ರೆಯವರು ಕೂಡ ತನ್ನನ್ನು ಅರಿಯಬೇಕೆಂದು ಹೇಳಿದರು. ಮನುಷ್ಯ ತನುಮನ ಧನಗಳ ಸಮ್ಮಿಲನವೇ ತಾನಾಗಿದ್ದಾನೆ. ಘನಸ್ವರೂಪ ಶಿವಸ್ವರೂಪನೆ ವ್ಯಕ್ತಿಯಾಗಿದ್ದಾನೆ.

ವಿಜ್ಞಾನಿ ಐನ್ಸ್ಟೈನ್ ಹೇಳುವಂತೆ ಮಾನವನಲ್ಲಿ ಒಂದು ಜೀವಂತ ಚೈತನ್ಯವಿದೆ. ತಾನು ಯಾರು ಎಂದು ಹುಡುಕುವುದು ದೇವರನ್ನು ಹುಡುಕುವುದೇ ಆಗಿದೆ. ಅಂಗವೇ ತಾನೆಂದು ತಿಳಿದುಕೊಂಡಿದ್ದೇವೆ, ಅಂಗವು ಲಿಂಗವಾಗಿಸಿಕೊಳ್ಳಬೇಕು.

ನಿಜವಾದ ನಾನು ಲಿಂಗವಾಗಿದ್ದೇನೆ ಎಂಬ ಅರಿವು ಮಾನವನಿಗೆ ಆಗಬೇಕು. ನಾನು ದೇವರ ಸ್ವರೂಪನಾಗಬೇಕೆಂಬುದು ಶರಣರ ಅಪೇಕ್ಷೆ. ದೇವರನ್ನು ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯ ಎಂದು ಬಸವಣ್ಣನವರು ಹೇಳಿದರೆ, ಅಕ್ಕಮಹಾದೇವಿ ಎನ್ನಲ್ಲಿ ಏನಿಹುದೆಂದು ಎನ್ನನ್ನು ಇಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನ ಎಂದು ಪ್ರಶ್ನಿಸುತ್ತಾಳೆ.

ನಾನು ಎಂಬುದು ಅಹಂಕಾರವಾಗಬಾರದು ನಾನು ಎಂಬುದು ದೇವ ಸ್ವರೂಪನೆಂಬ ಭಾವ ಬಲಿಯಬೇಕು. ಪ್ರಪಂಚದಲ್ಲಿ ನಾನು ಅತ್ಯಂತ ಚಿಕ್ಕ ಘಟಕವಾಗಿದ್ದೇನೆ. ಅಹಂಕಾರ ಮರೆತು ದೇವರ ಸಾಕ್ಷಾತ್ಕಾರ ಭಾವ ಮೂಡಬೇಕು. ಎತ್ತೆತ್ತ ನೋಡಿದರೂ ದೇವರೇ ಕಾಣಬೇಕೆಂದು ಬಸವಣ್ಣನವರು ಹೇಳಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಖುಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳ, ಬಂಡಪ್ಪ ಕೇಸುರ್, ಅಶೋಕ್ ಗುರೂಜಿ , ಉದ್ದಂಡಯ್ಯ ಭಾಗವಹಿಸಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *