ವಚನ ಚಾರಿಟೇಬಲ್ ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ :

ವೈಚಾರಿಕತೆಯ ನಿಲುವು, ಸಮಭಾವ ಸಮನ್ವಯತೆ ಒಗಟ್ಟಿನಿಂದ ಘನವಾದ ಉದ್ದೇಶ ಇಟ್ಟುಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಕ್ರಾಂತಿ ಮಾಡುತ್ತಿರುವ ವಚನ ಚಾರಿಟೇಬಲ್ ಸೊಸೈಟಿ ಕಾರ್ಯ ಶ್ವಾಘನೀಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ಬೀದರನ ವಚನ ಚಾರಿಟೇಬಲ್ ಸೊಸೈಟಿ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಶಿವಶರಣ ಹರಳಯ್ಯ ನಾಟಕೋತ್ಸವವನ್ನು ಸಸಿಗೆ ನೀರೆರೆದು ಬಸವರಾಜ ದೇಶಮುಖ ಮಾತನಾಡಿ, ನಾಟಕದಿಂದ ಕಲೆ, ಸಾಹಿತ್ಯ ಸಂಸ್ಕೃತಿ, ಆಳವಾಗಿ ಅರಿಯಲು ಇದೊಂದು ಸುಲಭವಾದ ಮಾರ್ಗ ಎಂದರು. ಶರಣರ ತತ್ವ ಸಿದ್ಧಾಂತ ನಮ್ಮ ನಿಜಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸಮೃದ್ಧಿ ಸಾಧಿಸಬಹುದೆಂದು ಹೇಳಿದರು.

ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆಯಲ್ಲಿ ಕನ್ನಡ ಒಂದಾಗಿದೆ. ಕನ್ನಡ ಎಂದರೇ ಕುಣಿದಾಡುವುದು ಎನ್ನ ಮನ ಎಂಬ ಕವಿವಾಣಿ ಮಾತು ಮೊಳಗಬೇಕು. ಕನ್ನಡ ಇದು ತಾಯಿ ಭಾಷೆ ಜೊತೆಗೆ ಅನ್ನ ಕೊಡುವ ಭಾಷೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ವಚನಗಳು ಮೆದುಳುಗಳಾಗಿವೆ. ಧಾವಂತದ ಬದುಕಿನಲ್ಲಿ ಸತ್ಯಶುದ್ಧ ಕಾಯಕ ಪ್ರಗತಿಪರ ಚಿಂತನೆಯಿಂದ ವಚನ ಸಮೂಹ ಸಂಸ್ಥೆ 15 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ ಎಂದು ಪ್ರೊ. ಸಿದ್ದು ಯಾಪಲಪರವಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ನಾಟಕ ಮನಸ್ಸು ಕಟ್ಟುವ ಸಾಂಸ್ಕೃತಿಕ ಉತ್ಸವ ಇದಾಗಿದೆ. ಬಸವಾದಿ ಶರಣರು ಕನ್ನಡ ಭಾಷೆ ಜೊತೆಗೆ ಬಾಂಧವ್ಯ ಇತಿಹಾಸ, ಪರಂಪರೆಗೆ ಒತ್ತು ಕೊಟ್ಟು ಕ್ರಾಂತಿ ಮಾಡಿರುವುದು ಸತ್ಯ ಇದನ್ನು ನಾವೆಲ್ಲರು ಮನಗಾಣಬೇಕೆಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ವಹಿಸಿ, ಧನಾತ್ಮಕ ವಿಚಾರ ದೂರದೃಷ್ಟಿಯ ಕಲ್ಪನೆಯಿಂದ ಬಸವಕಲ್ಯಾಣದ ಹತ್ತಿರ ಅನುಭವ ಮೆಗಾಸಿಟಿಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ.

ಡಿ.25, 2027 ರಂದು ಲೋಕಾರ್ಪಣೆ ಮಾಡುವ ಸಂಧರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ 1 ಲಕ್ಷ 96 ಸಾವಿರ ಜನರನ್ನು ಸೇರಿಸುವ ಉದ್ಧೇಶ ಹೊಂದಿದ್ದು ನಮ್ಮ ಸಂಸ್ಥೆಯ ಮೇಲೆ ತಮ್ಮ ಸಹಕಾರ ಇರಲಿ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಆಳಂದದದ ಕೋರಣೇಶ್ವರ ಸ್ವಾಮಿಗಳು ವಹಿಸಿದ್ದರು.

ವೇದಿಕೆ ಮೇಲೆ ಆರ್.ಜಿ ಶೆಟಕಾರ, ಭೀಮಣ್ಣಾ ಬೋನಾಳ, ಕಾಶಿನಾಥ ದಿವಾಂಟಗಿ, ಡಾ. ಚಿತ್ರಶೇಖರ ವಾಗರಗಿ, ಶಿವಶಂಕರ ಟೋಕರೆ, ಶಿವಕುಮಾರ ಸಾಲಿ, ಬಾಬುರಾವ ಪಾಟೀಲ, ಶಿವಲಿಂಗಪ್ಪ ಗಣಪತಿ, ಅಶೋಕ ಧೂಳೆ, ರಾಜಶೇಖರ ಪಾಟೀಲ, ರವೀಂದ್ರ ಶಾಬಾದಿ ಉಪಸ್ಥಿತರಿದ್ದರು. ಮೊದಲಿಗೆ ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾ ಸಂಘ, ಬಸವಕಲ್ಯಾಣ ಇವರು ಸಂಗೀತ ಕಾರ್ಯಕ್ರಮ ಜೊತೆಗೆ ನಾಡಗೀತೆ ಪ್ರಸ್ತುತ ಪಡಿಸಿದರು.

ಬಸವರಾಜ ಮೊರಬದ ಸ್ವಾಗತಿಸಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರೆ, ಅಂಬಾರಾಯ ಬಿರಾದಾರ ವಂದಿಸಿದರು. ಕೊನೆಯಲ್ಲಿ ಶತಾಯುಷಿ ಲಿಂಗೈಕ್ಯ ವಿ. ಸಿದ್ಧರಾಮಣ್ಣನವರು ರಚಿಸಿದ ‘ಶಿವಶರಣ ಸಮಗಾರ ಹರಳಯ್ಯ’ ನಾಟಕವನ್ನು ಸಿರಗುಪ್ಪದ ಧಾತ್ರಿ ರಂಗಸಂಸ್ಥೆಯವರು ಪ್ರಸ್ತುತಪಡಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *