ಬೆಂಗಳೂರು
ಬಸವಾದಿ ಶರಣರ ವಚನ ಮತ್ತು ಸಂದೇಶಗಳ ಪ್ರಚಾರದ ಸಲುವಾಗಿ ರಾಜಾಜಿನಗರದ ಬಸವೇಶ್ವರರ ಪುತ್ಥಳಿಯ ಬಳಿ ಶ್ರೀ ಗುರುಬಸವ ನಮನ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿದೆ.
ಸಂಜೆ ಆರು ಗಂಟೆಗೆ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಶುರುವಾಗಲಿದೆ. ಶರಣರ ವಚನ ಹಾಡುವವರಿಗೆ ಮತ್ತು ವಚನ ಸಂದೇಶಗಳನ್ನು ತಿಳಿಸುವವರಿಗೆ ಮುಕ್ತ ಅವಕಾಶವಿರುತ್ತದೆ ಹಾಗೂ
ಸಾರ್ವಜನಿಕರಿಗೆ ಪ್ರಸಾದ ನೀಡಲಾಗುತ್ತದೆ.
ಎಲ್ಲಾ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು, ಎಂದು
ಸಿದ್ದಗಂಗಾ ಚಾರಿಟಬಲ್ ಟ್ರಸ್ಟಿನ ಚಂದ್ರಶೇಖರ್ ಟಿ ಎಂ ತಿಳಿಸಿದ್ದಾರೆ.
