ದೇವದಾಸಿ ಕೃಷಿಕ ಮಹಿಳೆ ನಾಗಮ್ಮಜ್ಜಿಗೆ ಪ್ರಶಸ್ತಿಯ ಹಿರಿಮೆ

ಹೊಸಪೇಟೆ

ಹೊಸಪೇಟೆ ಬಳಿಯ ಕಾರಿಗನೂರಿನ ನಾಗಮ್ಮಜ್ಜಿಯ ಹೆಸರು ಈ ಬಾರಿಯ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿಯ ಪಟ್ಟಿಯಲ್ಲಿದೆ ಎಂದು ವಿಜಯನಗರದ ಜಂಟಿ ಕೃಷಿ ನಿರ್ದೇಶಕರಾದ ಡಾ. ಶರಣಪ್ಪ ಮುದಗಲ್‌ ತಿಳಿಸಿದಾಗ ಆದ ಸಂತೋಷ ಮತ್ತು ಅಚ್ಚರಿಗೆ ಮಾತುಗಳಿಲ್ಲ.

86ರ ವಯಸ್ಸಿನಲ್ಲೂ ತಮ್ಮ 2 ಎಕರೆ ಮಳೆ ಆಶ್ರಿತ ನೆಲದಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಾ, ತಾವೇ ಬಿತ್ತನೆ ಬೀಜಗಳನ್ನು ಮಾಡಿ ಇತರರಿಗೂ ಹಂಚುತ್ತಾ ಲವಲವಿಕೆಯಿಂದಿರುವ ಇವರ ಜೀವನೋತ್ಸಾಹ ಅಪರಿಮಿತ. ಈ ವಯಸ್ಸಿನಲ್ಲಿಯೂ ಬೀಜ ಬಿತ್ತುವುದು, ಕಳೆ ತೆಗೆಯುವುದು, ತೆನೆ ಕುಯ್ಯುವುದು, ಒಕ್ಕುವುದು ಮುಂತಾದ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ.

ತಲೆಮಾರುಗಳಿಂದ ದೇವದಾಸಿ ವ್ಯವಸ್ಥೆಯಲ್ಲಿ ನಲುಗುತ್ತಿರುವ ಕುಟುಂಬವಿದು. ಆದರೆ ತನ್ನ ಮೊಮ್ಮಗಳನ್ನು ಆ ಪದ್ಧತಿಯಿಂದ ಹೊರತಂದಿದ್ದಾರೆ. ಅದಕ್ಕೆ ನಾಗಮ್ಮ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಇವರನ್ನೇ ಅನುಸರಿಸಿ ಹಲವು ಕುಟುಂಬಗಳು ದೇವದಾಸಿಯನ್ನು ತೊರೆದು ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಆ ನೆನಪುಗಳನ್ನೆಲ್ಲಾ ಮರೆತು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅವರೆಲ್ಲರಿಗೆ ಪ್ರೇರಣೆ ನಾಗಮ್ಮಜ್ಜಿ. ಹೊಸಪೇಟೆಯ ಸಖಿ ಸಂಸ್ಥೆಯು ಇವರಿಗೆ ಬೆನ್ನೆಲುಬಾಗಿ ನಿಂತಿದೆ.

ಎಲ್ಲಾ ದೇವದಾಸಿ ತಾಯಂದಿರ ಪ್ರತಿನಿಧಿಯಾಗಿರುವ ನಾಗಮ್ಮಜ್ಜಿಗೆ ಸಂದಿರುವ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿ ಸಾರ್ಥಕ. ವೈಯಕ್ತಿಕವಾಗಿ ನನಗೂ ಹೆಮ್ಮೆಯ ಕ್ಷಣ.

Share This Article
Leave a comment

Leave a Reply

Your email address will not be published. Required fields are marked *