ಲೈವ್: ಕೊಪ್ಪಳದಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
18Posts
Auto Updates

8ನೇ ದಿನದ ಲೈವ್ ಬ್ಲಾಗ್

1 year agoSeptember 8, 2025 9:01 pm

ಸಾರ್ವಜನಿಕ ಸಮಾರಂಭ ಮಂಗಳ

ಸಾಣೇಹಳ್ಳಿ ಕಲಾತಂಡದ ಜಯ ಕಲ್ಯಾಣಕೆ ಗೀತೆಯೊಂದಿಗೆ ಸಾರ್ವಜನಿಕ ಸಮಾರಂಭ ಮಂಗಳಗೊಂಡಿತು.

1 year agoSeptember 8, 2025 7:55 pm

‘ಬಸವ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ’

ಮನಗುಂಡಿಯ ಬಸವಾನಂದ ಶ್ರೀಗಳಿಂದ ಅನುಭಾವ.

1 year agoSeptember 8, 2025 7:32 pm

ಡಾ. ಸಂಗಮೇಶ ಕಲಹಾಳ ಅವರ ಪುಸ್ತಕ ಬಿಡುಗಡೆ

ಡಾ. ಸಂಗಮೇಶ ಕಲಹಾಳ ಅವರ ‘ಲಿಂಗಾಯತ ಧರ್ಮದ ಮಹತ್ವ’ ಪುಸ್ತಕವನ್ನು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹಾಗೂ ಇತರ ಪೂಜ್ಯರು ಬಿಡುಗಡೆ ಮಾಡಿದರು.

1 year agoSeptember 8, 2025 7:21 pm

ವಚನ ಚಳುವಳಿ ಇಂದಿನ ಅಗತ್ಯ

ಮಧುಶ್ರೀ ಗಾರ್ಡನ್ ನಲ್ಲಿ ನಡೆದಿರುವ ಸಾರ್ವಜನಿಕ ಸಮಾರಂಭದಲ್ಲಿ
‘ವಚನ ಚಳುವಳಿ ಇಂದಿನ ಅಗತ್ಯ’ ವಿಷಯವಾಗಿ ಕಲಬುರ್ಗಿಯ ಡಾ.ಕಾವ್ಯಶ್ರೀ ಮಹಾಗಾಂವಕರ ಅವರಿಂದ ಅನುಭಾವದ ನುಡಿಗಳು.

1 year agoSeptember 8, 2025 7:08 pm

ವೇದಿಕೆ ಕಾರ್ಯಕ್ರಮ ಲೈವ್ ವಿಡಿಯೋ

1 year agoSeptember 8, 2025 7:01 pm

ಭವ್ಯ ಮೆರವಣಿಗೆ – ಫೋಟೋಗಳಲ್ಲಿ

1 year agoSeptember 8, 2025 7:01 pm

ಸಾವಿರಾರು ಜನರ ಸೆಳೆದ ಮೆರವಣಿಗೆ

ಬಸವೇಶ್ವರ ವೃತ್ತದಿಂದ ಮಧುಶ್ರೀ ಗಾರ್ಡನ್ ತನಕ ಮೆರವಣಿಗೆ ನಡೆಯಿತು.

1 year agoSeptember 8, 2025 6:09 pm

ಬಸವೇಶ್ವರ ವೃತ್ತದಿಂದ ಮೆರವಣಿಗೆ

ಬಸವೇಶ್ವರ ವೃತ್ತದಿಂದ ಆರಂಭವಾದ ಸಾವಿರಾರು ಜನರ ಮೆರವಣಿಗೆ. ಮಧುಶ್ರೀ ಗಾರ್ಡನ್ ವರೆಗೆ ನಡೆಯಲಿದೆ.

1 year agoSeptember 8, 2025 3:26 pm
1 year agoSeptember 8, 2025 2:02 pm

ಶೇಖರ ಇಂಗಳದಾಳ, ಡಾ. ಸಂಗಮೇಶ ಕಲಹಾಳ

ಮಾಹಿತಿ, ಚಿತ್ರ, ವಿಡಿಯೋ ಕಳಿಸುತ್ತಿರುವ ಶೇಖರ ಇಂಗಳದಾಳ, ಡಾ. ಸಂಗಮೇಶ ಕಲಹಾಳ ಅವರಿಗೆ ಧನ್ಯವಾದ.

1 year agoSeptember 8, 2025 1:54 pm

ವಚನ ಸಂವಾದದ ಮಂಗಲ

ವಚನ ಸಂವಾದ ಕಾರ್ಯಕ್ರಮ ಕಲ್ಯಾಣ ಗೀತೆಯೊಂದಿಗೆ ಮಂಗಲವಾಯಿತು.

1 year agoSeptember 8, 2025 12:42 pm

ಸಂವಾದದ ದೃಶ್ಯಗಳು

1 year agoSeptember 8, 2025 11:49 am

ತುಂಬಿದ ಸಭಾಂಗಣ

ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲಿನ ಸಭಾಂಗಣದಲ್ಲಿ ನಡೆಯುತ್ತಿರುವ ಸಂವಾದ ಕಾರ್ಯಕ್ರಮ.

1 year agoSeptember 8, 2025 11:33 am

ಸಂವಾದ ಶುರುವಾಗಿದೆ: ಲೈವ್ ವಿಡಿಯೋ

1 year agoSeptember 8, 2025 1:52 pm

ಮಕ್ಕಳಿಂದ ವಚನ ನೃತ್ಯ

ರೀತಿಕಾ ಶೇಖರ್ ಇಂಗಳದಾಳ ಮತ್ತು ಅರ್ಪಿತಾ ಹೂವಿನಾಳ ಅವರು ಈಶ್ವರ ಮಂಟೂರ ಶರಣರ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು. ಮಕ್ಕಳು ವಚನ ನೃತ್ಯ ಮಾಡಿ ಗುರುಗಳಿಂದ ವಚನ ಪುಸ್ತಕದ ಆಶೀರ್ವಾದ ಪಡೆದುಕೊಂಡರು.

1 year agoSeptember 8, 2025 11:28 am

ಇಂದಿನ ಕಾರ್ಯಕ್ರಮಗಳು

ವಚನ ಸಂವಾದ
11 ಗಂಟೆಗೆ ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲು ಮತ್ತು ಶ್ರೀ ಶಾರದಾ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮ.

ಪಾದಯಾತ್ರೆ, ಮೆರವಣಿಗೆ
ಸಂಜೆ 5 ರಿಂದ 6 ಗಂಟೆ: ಶ್ರೀ ಬಸವೇಶ್ವರ ವೃತ್ತದಿಂದ ಮಧುಶ್ರೀ ಗಾರ್ಡನ್ ವರೆಗೆ ಪಾದಯಾತ್ರೆ, ಮೆರವಣಿಗೆ.

ಸಾರ್ವಜನಿಕ ಸಮಾರಂಭ
ಸಾಯಂಕಾಲ 6 ಗಂಟೆಗೆ ಸಾರ್ವಜನಿಕ ಸಮಾರಂಭ, ಮಧುಶ್ರೀ ಗಾರ್ಡನ್, ಹೊಸಪೇಟೆ ರಸ್ತೆ, ಕೊಪ್ಪಳ.

ಉಪನ್ಯಾಸಗಳು
‘ಬಸವ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ’ ಈ ವಿಷಯವಾಗಿ, ಬಸವಾನಂದ ಸ್ವಾಮಿಗಳು, ಮನಗುಂಡಿ ಇವರಿಂದ.

‘ವಚನ ಚಳುವಳಿ ಇಂದಿನ ಅಗತ್ಯ’ ವಿಷಯವಾಗಿ ಕಾವ್ಯಶ್ರೀ ಮಹಾಗಾಂವ್ಕರ್, ಸಾಹಿತಿಗಳು ಕಲಬುರ್ಗಿ ಇವರಿಂದ.

1 year agoSeptember 8, 2025 11:28 am

ಕೈಜೋಡಿಸಿರುವ ಸಂಘಟನೆಗಳು

ಕೊಪ್ಪಳ ಜಿಲ್ಲಾ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಲ ಹಾಗೂ ಜಿಲ್ಲೆಯ ಸರ್ವ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದೆ.

1 year agoSeptember 8, 2025 11:24 am

ಅಭಿಯಾನಕ್ಕೆ ಕೊಪ್ಪಳ ಸಿದ್ಧ

ಗದುಗಿನ ತೋಂಟದ ಸಿದ್ಧರಾಮ ಶ್ರೀಗಳು ಸಿದ್ಧತೆಗಳನ್ನು ವೀಕ್ಷಿಸಿದರು.

Share This Article
2 Comments
  • “The Koppal report is uniquely designed. Basava Media is really working very hard, reporting instantly. I congratulate you on your magnificent efforts.”

  • ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮ ಬಹಳ ಸುಂದರವಾಗಿತ್ತು. ಕಾರ್ಯಕ್ರಮ ಸುಗಮವಾಗಿ ನಡೆಯಲು ಶ್ರಮಪಟ್ಟ ಎಲ್ಲರಿಗೂ ಧನ್ಯವಾದಗಳು

    https://www.youtube.com/@ChandruGaraga

    ಚಂದ್ರು ವಿ ಎಂ

Leave a Reply

Your email address will not be published. Required fields are marked *