ಲಿಂಗಾಯತ ಸಮಾಜಕ್ಕೆ ಸಿದ್ದರಾಮಯ್ಯ ನೀಡಿದ 15 ಕೊಡುಗೆಗಳು

ದಾವಣಗೆರೆ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಸಂಧರ್ಭದಲ್ಲಿ ಸಿದ್ದರಾಮಯ್ಯ ಅವರು ಲಿಂಗಾಯತ ಸಮಾಜಕ್ಕೆ ಕೊಟ್ಟಿರುವ 15 ಕೊಡುಗೆಗಳ ಸಂಕ್ಷಿಪ್ತ ನೋಟ.

1) ಸಿದ್ದರಾಮಯ್ಯ ಬಸವಜಯಂತಿ ದಿವಸ ಪ್ರಮಾಣ ವಚನ ಸ್ವೀಕರಿಸಿದರು

2) ಸಿದ್ದರಾಮಯ್ಯ ಸರ್ಕಾರಿ ಕಛೇರಿಯಲ್ಲಿ ಬಸವಣ್ಣನವರ ಭಾವ ಚಿತ್ರ ಕಡ್ಡಾಯ ಮಾಡಿದರು

3) ಸಿದ್ದರಾಮಯ್ಯ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿದವರು

4) ಸಿದ್ದರಾಮಯ್ಯ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದು

5) ಸಿದ್ದರಾಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಮಾಡಿದವರು

6) ಸಿದ್ದರಾಮಯ್ಯ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಅವರ ಹೆಸರನ್ನು ನಾಮಕರಣ ಮಾಡಿದವರು

7) ಸಿದ್ದರಾಮಯ್ಯ ಶಿವಮೊಗ್ಗದ ಉದ್ಯಾನವನಕ್ಕೆ ಅಲ್ಲಮಪ್ರಭು ಹೆಸರನ್ನು ನಾಮಕರಣ ಮಾಡಿದವರು

8) ಸಿದ್ದರಾಮಯ್ಯ ಬಸವಣ್ಣನವರ ಅರಿವು ಕೇಂದ್ರ ತೆರಿತಾ ಇರುವರು

9) ಸಿದ್ದರಾಮಯ್ಯ ಬಸವಣ್ಣನವರನ್ನು ನನ್ನ ರಾಜಕೀಯ ಗುರು ಅಂತ ಸ್ವೀಕರಿಸಿದವರು

10) ಸಿದ್ದರಾಮಯ್ಯ ಕೂಡಲಸಂಗಮ ಅಭಿವೃದ್ಧಿಗೆ 139 ಕೋಟಿ ನೀಡಿದರು.

11) ಸಿದ್ದರಾಮಯ್ಯ ಕಿತ್ತೂರ್ ರಾಣಿ ಚೆನ್ನಮ್ಮ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲು ಘೋಷಿಸಿದರು.

12) ಸಿದ್ದರಾಮಯ್ಯ ಕಿತ್ತೂರು ತಾಲೂಕನ್ನು ರಾಣಿ ಕಿತ್ತೂರು ತಾಲೂಕೆಂದು ನಾಮಕರಣ ಮಾಡಿದರು.

13) ಸಿದ್ದರಾಮಯ್ಯ ಬಸವಣ್ಣ ಸಾಂಸ್ಕೃತಿಕ ನಾಯಕ ಪಠ್ಯ ಮಾಡಿದರು.

14) ಸಿದ್ದರಾಮಯ್ಯ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

15) ಸಿದ್ದರಾಮಯ್ಯ ಸಾಹಿತಿ ಡಾ.ಎಂ.ಎಂ. ಕಲಬುರ್ಗಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಯ ಘೋಷಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
11 Comments
  • Lingayatharu Siddaramai avarege yalla swamiji galu bembala needabeku
    Siddaramaiah avaru basavanna avara siddantha galege sadya vadastu paleseddare.
    Moudyada veerudda vage dwane madeddare.

  • ಈ ವಿಶಾಲಮನೋಭಾವನೆಗಳನ್ನು ಅರಗಿಸಿಕೊಳ್ಳಲಾಗದ ಮನು ಸಂಸ್ಕೃತಿ ಬಿಜೆಪಿ ಮತ್ತು ಆರ್ ಎಸ್ ಎಸ್ ಈಗ ಸಮಾಜಘಾತುಕ ಶಕ್ತಿ ಗಳಾಗಿ ರಾಜ್ಯಪಾಲರ ಮುಖಾಂತರ ಮಾನ್ಯ ಸಿಧ್ದರಾಮಯ್ಯನವರಮೇಲೆ ಗೂಬೆ ಕೂಡಿಸುವ ಹುನ್ನಾರ ಮಾಡುತ್ತಿವೆ. ಇದು ಅಕ್ಷಮ್ಯ! ಬಸವಪರ ಸಂಘಟನೆಗಳು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಶರಣು ಶರಣಾರ್ಥಿಗಳು.

    • ಲಿಂಗಾಯತ ಧರ್ಮದ ಮುಖ್ಯಮಂತ್ರಿಗಳು ಲಿಂಗಾಯತರಿಗೆ ಕೊಟ್ಟ ಕಾಣಿಕೆಗಳು.❓❓❓❓

      *ತಮ್ಮ ತಮ್ಮ ಪಂಗಡಗಳಿಗೆ 2B ಅಂತ ಮೀಸಲಾತಿ ಕೊಟ್ಟು ಲಿಂಗಾಯತ ಧರ್ಮ ಒಡೆದದ್ದು*

      ಲಿಂಗಾಯತ ಧರ್ಮದವಾರಿಗೆ ಹುಟ್ಟಿ, ತಮ ಸ್ವಾರ್ಥ ರಾಜಕಾರಣಕ್ಕೆ ಮತ್ತೊಂದು ಧರ್ಮದ ಹೆಸರು ಹೇಳಿದ್ದು.

      *ಲಿಂಗಾಯತ ಧರ್ಮ ವಿರೋಧಿ ಮಠಾಧೀಶರಿಗೆ ಅಭಿವೃಧ್ದಿ ಹೆಸರಲ್ಲಿ ಕೋಟ್ಯಂತರ ದುಡ್ಡು ಕೊಟ್ಟು back kick ಪಡೆದದ್ದು*

      ಕೆಲವು ಲಿಂಗಾಯತ ಮಠಾಧೀಶರಿಗೆ ಏನೋ ಕೊಟ್ಟು, ಲಿಂಗಾಯತ ಧರ್ಮದ ವಿರುದ್ಧ ಪ್ರಚಾರ ಮಾಡಿದ್ದು.

    • ಇದೆಲ್ಲಾ ರಾಜಕೀಯ ಮನೋಭಾವನೆ ಇಟ್ಟುಕೊಂಡು ಮಾಡುವದು ಇದನ್ನ ಬಿಟ್ಟರೆ ಬೇರೇನೂ ಇಲ್ಲಾ. ಯಾವ ಸರಕಾರ ಆಡಳಿತದಲ್ಲಿರತ್ತೋ ಅವರನ್ನು ಹೋಗಲುವದು ನಮ್ಮ ಮನಸ್ಥಿತಿ ಬಿಂಬಿಸುತ್ತೆ. ಯಾರು ಕೆಟ್ಟವರು ಯಾರು ಒಳ್ಳೆಯವರು ಅಂತ ಹೇಳಕ್ಕೆ ನಾವೇನು ಅಲ್ಲ ಅದಕ್ಕೆ ಇಡೀ ರಾಜ್ಯ ಇದೆ.

  • Idu basava media lingayat dharma bagge vichara madudakke hortu rajakiya vichara madodakke upayoga madkolodu sariyalla

  • ಲಿಂಗಾಯತ ಜನರಿಗೆ ಸರ್ಕಾರ ನೀಡಿದ ಮಹತ್ವದ ಸಹಕಾರ.ಅದು ಮುಂದೆಯೂ ನಡೆದುಕೊಂಡು ಹೋಗಬೇಕು.ದಾರಿ ತಪ್ಪಿಸುವ ಜನ ಮತ್ತೆ ಬಂದು ನಮ್ಮ ಜನರೇ ನಮಗೆ ಮುಳುವಾಗಿ ಕಾಡುವರು ಇದು ತಿಳಿದು ಲಿಂಗಾಯತ ಜನರು ಜಾಗ್ರತಾರಾಗಿ ಧರ್ಮದ ದಾರಿ ಹಿಡಿದು ಮುಂದೆ ಸಾಗಿದರೆ ವಿಶ್ವ ವೇ ನಮ್ಮೆಡೆ ನೋಡುವಂತೆ ಮಾಡ್ಬೇಕು. ಸಹ್ಯ ಕೆಲಸ ಬಸವ ಹೆಸರಲ್ಲಿ ಪ್ರಮಾಣ ಮಾಡಿ ಬಸವ ಪಥದಲ್ಲಿ ನಡೆದ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು 💐💐👏🏻

    • great 👍 sidhramaya ಅಣ್ಣಾಜಿ ಕೋಟಿ ಕೋಟಿ ಶರಣು ಶರಣಾರ್ತಿಗಳು, ಮುಂದೆ ನೀವು ಬಸವಣ್ಣನವರ ಆಶೀರ್ವಾದದಿಂದ, ಭಾರತ ದೇಶದ ಅತ್ಯುನ್ನತ ಅಧಿಕಾರ ಪಡೆಯುತ್ತೀರಿ.

  • ಮಾನ್ಯ ಸಿದ್ದರಾಮಯ್ಯನವರು ಲಿಂಗಾಯತ ಸಮಾಜಕ್ಕೆ ಕೊಟ್ಟ ಕೊಡುಗೆ ನಮ್ಮ ಲಿಂಗಾಯತ ಮುಖ್ಯಮಂತ್ರಿ ಕೂಡ ಕೊಡಲಿಲ್ಲ ಹೆಳಲಿಕ್ಕೆ ಲಿಂಗಾಯತ ನಾಯಕರು. ಸಿದ್ದರಾಮಯ್ಯ ಮಾಡಿರುವ ಕೆಲಸ ಲಿಂಗಾಯತ ಸಮಾಜ ಮರೆಯಲೆಬಾರದು.

  • ಸಿದ್ದರಾಮಯ್ಯನ ತರಹ ಇತರೆ ಮುಖ್ಯಮಂತ್ರಿಗಳ ಕೊಡುಗೆಗಳನ್ನು ಪಟ್ಟಿ ಮಾಡಿ. ಅದರಲ್ಲಿ ಬಿಜೆಪಿಯವರ ಕೊಡುಗೆ ಕೂಡ ಎಷ್ಟಿದೆ ಎನ್ನುವುದು ಗುರುತಾಗಲಿ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು