ಬೆಂಗಳೂರು:
ಕಲ್ಯಾಣ ಬಡಾವಣೆ ಬಸವ ಬೆಳಕು ಸ್ಥಳದಲ್ಲಿ ”ವಚನ ನವರಾತ್ರಿಯ” ಎರಡನೇ ದಿನದ ಕಾರ್ಯಕ್ರಮ ಜರುಗಿತು.
12ನೇ ಶತಮಾನದ ಶರಣೆ ಬೋಂತಾದೇವಿ ಅವರ ಸಮಗ್ರ ಪರಿಚಯವನ್ನು ಶರಣೆ ರೂಪ ಪ್ರಸಾದ ಅವರು ಮಾಡಿಕೊಟ್ಟರು.
ಕನ್ನಡ ಪ್ರಾಧ್ಯಾಪಕರಾದ ಡಾ. ಅಮರೇಶ ಹೊಲ್ಲಂಬಳ್ಳಿ ಅವರು ಶರಣೆ ಬೋಂತದೇವಿ ಅವರ ವಚನಗಳನ್ನು ನಿರ್ವಚನ ಮಾಡುವ ಮೂಲಕ ಸಭಿಕರೆಲ್ಲರ ಗಮನ ಸೆಳೆದರು.
ಶರಣೆ ಸ್ವರ್ಣಲತಾ ಮತ್ತು ತಂಡದವರು ಹಾಗೂ ಮುಕ್ತಾಯಕ್ಕ ಬಳಗದವರು ವಚನ ಗಾಯನ ನಡೆಸಿಕೊಟ್ಟರು.
ಶರಣರಾದ ರು.ಫ. ದೇಸಾಯಿ ಗ್ರಂಥಾಲಯ ಇಲಾಖೆಯ ನಿ. ಉಪನಿರ್ದೇಶಕರು ಮತ್ತು ಹಿರಿಯ ಪತ್ರಕರ್ತೆ ಶರಣೆ ಕುಶಲ ಮರಿಸ್ವಾಮಿ ಅತಿಥಿಗಳಾಗಿ ಆಗಮಿಸಿದ್ದರು.
ವಚನ ಜ್ಯೋತಿ ಬಳಗದ ಅಧ್ಯಕ್ಷರಾದ ಪಿನಕಪಾಣಿ ಅವರು, ಬಸವ ಬಂಧುಗಳಾದ ದಿವಾಕರ, ಪ್ರಸನ್ನ, ಮಧು ಶಿವಕುಮಾರ, ಕಾತ್ಯಾಯಣಿ ಸುಭಾಷ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಬಡಾವಣೆಯ ಶರಣ, ಶರಣೆಯರು ಉಪಸ್ಥಿತರಿದ್ದರು.




