ಕಲಬುರಗಿ
ಆಳಂದ ತಾಲ್ಲೂಕಿನ ಜಾಗತಿಕ ಲಿಂಗಾಯತ ಮಹಾಸಭಾದ ಕಿಣ್ಣಿ ಸುಲ್ತಾನ ಘಟಕದ ವತಿಯಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯುತ್ಸವದ ಅಂಗವಾಗಿ ಏ. 24ರಿಂದ 28ರವರಗೆ ಬಸವಧರ್ಮ ಲಿಂಗಾಯತ ಧರ್ಮ ಪ್ರವಚನ ಕಾರ್ಯಕ್ರಮ ಜರುಗಿತು.
ಪ್ರವಚನಕಾರರಾಗಿ ಆಗಮಿಸಿದ್ದ ತಿಮ್ಮನಗೌಡ ಚಿಲ್ಕಾರಾಗಿ ಅವರು ಪ್ರತಿದಿನ ಸಾಯಂಕಾಲ 7ರಿಂದ 8.30 ರವರೆಗೆ ಬಸವ ಧರ್ಮದ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.
ಏ. 28ರಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದೊಂದಿಗೆ ವಚನಗಳ ಉಗ್ಘಡಣೆಯೊಂದಿಗೆ ವಚನ ಕಟ್ಟುಗಳ ಮೆರವಣಿಗೆ ಮಾಡಲಾಯಿತು.

ಪ್ರತಿ ದಿನ ಮಕ್ಕಳಿಂದ ವಚನ ನೃತ್ಯ, ಶಾಲಾ ಮಕ್ಕಳಿಂದ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಂದ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ವಿತರಿಸಲಾಯಿತು.
ಇಲ್ಲಿಯವರೆಗೆ ಮಹಾಮನೆಯನ್ನು ನಡೆಸಿಕೊಡಲು ಅವಕಾಶ ಮಾಡಿಕೊಟ್ಟ ದಂಪತಿಗೆ ಗೌರವದ ವಚನ ಗ್ರಂಥ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು. ಕೊನೆಯಲ್ಲಿ ಎಲ್ಲಾ ಬಸವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ಕಾರ್ಯಕ್ರಮದ ನೇತೃತ್ವವನ್ನು ಜಾಗತಿಕ ಲಿಂಗಾಯತ ಮಹಾಸಭಾ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಶೃಂಗೇರಿ, ಅಧ್ಯಕ್ಷ ಮಲ್ಲಿನಾಥ ಎಸ್ ಹತ್ತೆ, ಉಪಾಧ್ಯಕ್ಷ ಸಂಗಣ್ಣ ಜಾನೆ, ಪ್ರಧಾನ ಕಾರ್ಯದರ್ಶಿ ನಾಗಣ್ಣ ಎ. ಬಿರಾದಾರ, ಶಿವಾನಂದ್ ಕೆ ಮಲ್ಲಿಗೆ ಸಂತೋಷ ಎಂ. ಹುಲಸೂರೆ ಶೀಲಾ ಎಸ್. ಹಾವಶೆಟ್ಟಿ, ಸರಸ್ವತಿ ಎಂ. ಡಂಕೆ, ಶಾಂತಪ್ಪ ಭಾವಿ, ಕಲ್ಯಾಣ ತುಕಾನೆ, ಧರ್ಮಣ್ಣ ಪೂಜಾರಿ, ದಾನಮ್ಮ ಜಿ. ಶಾಪೂರೆ, ವಿಜಯಮ್ಮ ಬಿ. ಕೋರೆ, ಸಕ್ರಿಬಾಯಿ ದೇಸಾಯಿ, ಆರತಿ ಶಾಪುರೆ, ರಾಜಶೇಖರ ಧಮ್ಮೊರೆ, ಗುರಪ್ಪ ಶಾಪುರೆ ಹಾಗೂ ಗ್ರಾಮದ ಎಲ್ಲ ಶರಣ ಶರಣೆಯರು, ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.