ಬೆಂಗಳೂರು
ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ, ಬುಡ್ಗ ಜಂಗಮ, ಬೇಡ ಜಂಗಮ ಮತ್ತು ಬೇಡುವ ಜಂಗಮ ದುಂಡು ಮೇಜಿನ ಸಭೆ ನಡೆಯಲಿದೆ.
ಜೂನ್ 14ರ ಶನಿವಾರ ಬೆಳಿಗ್ಗೆ 10:30ಕ್ಕೆ ಶಾಸಕರ ಭವನ ಸಭಾಂಗಣ ಹಳೆ ಕಟ್ಟಡ, ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರಲ್ಲಿ ಈ ಸಭೆ ನಡೆಯಲಿದೆ.
ಉದ್ಘಾಟನೆಯನ್ನು ಜಸ್ಟಿಸ್ ಗೋಪಾಲಗೌಡರು, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಮಾಡುವರು. ಎಸ್.ಎಂ. ಜಾಮಾದಾರ ನಿವೃತ್ತ ಐ.ಎ.ಎಸ್. ಅಧಿಕಾರಿಗಳು ವಿಷಯ ಮಂಡನೆ ಮಾಡಲಿದ್ದಾರೆ. ಶರಣತತ್ವ ಚಿಂತಕರಾದ ಶಿವಶರಣಪ್ಪ ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರು, ಅಲೆಮಾರಿ ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷರಾದ ಡಾ. ಸಿ. ಎಸ್. ದ್ವಾರಕನಾಥ ಅವರು ವಹಿಸಲಿದ್ದಾರೆ.
ಸಭೆಯಲ್ಲಿ ಸರ್ವರು ಭಾಗವಹಿಸಬೇಕೆಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷರಾದ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ ಅವರು ಕೋರಿದ್ದಾರೆ.
ಇತ್ತೀಚೆಗೆ ಒಳ ಮೀಸಲಾತಿ ಸಮೀಕ್ಷೆಯಲ್ಲಿ ‘ಬೇಡ ಜಂಗಮ’ ಅಂತ ಬರೆಸಿ ಎಂದು ‘ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ’ ಮಾಡಿಕೊಂಡಿದ್ದ ಮನವಿ ದೊಡ್ಡ ವಿವಾದ ಸೃಷ್ಟಿಸಿತ್ತು.
ಇದು ಸುಳ್ಳು ಜಾತಿ ಕಲ್ಪಿಸಿಕೊಂಡು ಮೀಸಲಾತಿ ಪಡೆಯುವ ಸಂಚೆಂದು ಪರಿಶಿಷ್ಟ ವರ್ಗಗಳ ಮುಖಂಡರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ದೂರನ್ನೂ ನೀಡಿದ್ದರು.
ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರೂ ವಿವಾದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಈ ಸಭೆ ಜನತೆಗೆ ನಿಜ ಬೇಡ ಜಂಗಮರು ಯಾರು ಎನ್ನುವ ಸತ್ಯ ತಿಳಿಯುವಂತೆ ಆಗಲಿ. ಬೇಡ ಜಂಗಮರಾಗಿ ಊರರು ಅಲೆಯುತ್ತಿರುವ ಬಹುರೂಪಿಗಳು(ವೇಷಗಾರರು ), ರಾಯಚೂರು ಜಿಲ್ಲೆಯ ಸಿದ್ಧಾಪುರ ಗ್ರಾಮದಲ್ಲಿ ಸಿಗುತ್ತಾರೆ ಬಂದು ನೋಡಿ ಬುಡ್ಗ ಜಂಗಮ ರಾದ ಕಾ ಸಿದ್ಧರು, ಸುಡುಗಾಡು ಸಿದ್ಧರು ಎನ್ನುವವರನ್ನು ನಾನು ಮೊನ್ನೆ ಒಂದು ಅಂತ್ಯಕ್ರಿಯೆಯಲ್ಲಿ ನೋಡಿದೆ. ಅವರೆಲ್ಲ ಅಲೆಮಾರಿಗಳು, ಮಾ0ಸ ಹಾರಿಗಳು. ಅಂಥವರ ಮೀಸಲಾತಿಗೆ ಕೈಹಾಕಿದ ವೀರಶೈವ ಶ್ರೇಷ್ಠರಿಗೆ ಇದು ತರವಾದ ಬೇಡಿಕೆ ಅಲ್ಲ.
Sir veershiva jangamre beda jangamru high court order ede sir idu sullu illri
ಭಾರತಸರಕಾರ ಹಿಂದು ಸಮುದಾಯದ ಬೇಡಜಂಗಮ ಜಾತಿಗೆ ಮೀಸಲಾತಿ ಕಲ್ಪಿಸಿದೆ ಹೊರತು
ವೀರಶೈವ ಧರ್ಮದ ಬೇಡ ಜಂಗಮ ಜಾತಿಗೆ ಅಲ್ಲ
ಸರಕಾರ ಹಗಲುವೇಶಧಾರಿಗಳನ್ನು ಎತ್ತಿಕಟ್ಟಿ, ವೀರಶೈವ ಪಂಥದ ಬೇಡಜಂಗಮರಿಗೆ ಅನ್ಯಾಯ ಮಾಡಹೊರಟಿದೆ !! ಸ್ವಾತಂತ್ರ ಬಂದಾಗಿಂದ ಇಂದಿನ ವರೆಗೆ ಇದೇ ಸರಕಾರದ ಆದೇಶಗಳು, ಕರ್ನಾಟಕ ಗೆಜೇಟಿಯರ್ ಡಾ.ಸೂರ್ಯನಾಥ ಕಾಮತ್ ರವರ ವರದಿಗಳು, ಆಂತ್ರಪಾಲಜಿ ಸರ್ವೆ ಆಫ್ ಇಂಡಿಯಾದ ವರದಿಗಳು, ಸಮಾಜ ಕಲ್ಯಾಣ ಇಲಾಖೆಯ ಆದೇಶಗಳು, ಕಂದಾಯ ಇಲಾಖೆಯ ಆದೇಶಗಳು, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶಗಳು ವೀಶೈವ ಲಿಂಗಾಯತ ಪಂಚಪೀಠಗಳ ಅನುಯಾಯಿಗಳೇ ನಿಜವಾದ ಬೇಡಜಂಗಮರು ಇವರು ಮಾಂಸಹಾರಿಗಳಲ್ಲ ಎಂದು ಹೇಳಿವೆ !! ಆದಾಗ್ಯೂ ಅಧಿಕಾರಿಗಳನ್ನು ದಾರಿ ತಪ್ಪಿಸುವ ಸಲುವಾಗಿ ಮಾಡುತ್ತಿರುವ ಈ ಷಡ್ಯಂತ್ರ ಯಾರೂ ಒಪ್ಪತಕ್ಕದ್ದಲ್ಲ !!
ನಿಮಗೆ ಹಗಲು ವೇಶಧಾರಿಗಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಅವರಿಗೆ ನಿಮ್ಮದೇ ಸರಕಾರ ಇದೆ !! ಸಾಕಷ್ಟು ಸೌಲಭ್ಯವನೀಡಿ ಮೇಲಕ್ಕೆ ಎತ್ತಿ !! ಅದು ಬಿಟ್ಟು ಜಾತಿ ಜಾತಿಗಳ ಮಧ್ಯ ವಿಷ ಬಿತ್ತುವ ಕೆಲಸ ಮಾಡಬೇಡಿ !!
ನೀವು ಅವರೆಂದರೆ ನಿಮ್ಮ ಮನೆಯ ಶುಭಕಾರ್ಯಗಳನ್ನು ಮಾಡಿಸಿಕೊಳ್ಳುತ್ತೀರಾ ದಯವಿಟ್ಟು ತಿಳಿಸಿ
ಸರಿಯಾಗಿ ಹೇಳಿದಿರಿ
ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ,ಅರ್ಹ ಶೋಷಿತ ಸಮುದಾಯಗಳ ಅಭಿವೃದ್ಧಿಗೆ
ಹಾಗೂ ಮುಖ್ಯ ವಾಹಿನಿಯತ್ತ ಸಾ
ಗುವ ದಾರಿಯಲ್ಲಿ ಸಿಗುವಂತಾಗಲಿ
ಹೌದು. ವೀರಶೈವ ಜಮಗಮರೇ ಬೇರೆ.ಅಲೆಮಾರಿ ಸಮುದಾಯಗಳ ಜಂಗಮರೇ ಬೇರೆ.
ಈ ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಒಂದು ಸಾಮಾಜಿಕವಾಗಿ ಎತ್ತರದಲ್ಲಿರಯವವರು ಇನ್ಮೊಂದು ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವವರು. ಎರಡೂ ಒಂದೇ ಹೇಗೆ ಆಗುತ್ತದೆ.
ಸುಳ್ಳು ಪ್ರಹಾರ ಬೇಡ ಸರ್ಕಾರ ಹಲವಾರು ಆದೇಶ ಗಳು ಇವೆ ಕುಲಕುಷವಾಗಿ ಪರಿಶೀಲಿಸಿ ಲಿಂಗಾಯತ ಪಂಥ ದಲ್ಲಿ ಬರುವ ಜಂಗಮರೇ ಬೇಡಜಂಗಮರು
ವೀರಶೈವ ಪಂಥದಲ್ಲಿ ಬರುವ ಜಂಗಮರೆ ಬೇಡ ಜಂಗಮರು ಎಂಬುದಕ್ಕೆ ಹಲವಾರು ದಾಖಲೆಗಳು ಸಿಗುತ್ತವೆ ಸಮಾಜ ಕಲ್ಯಾಣ ಇಲಾಖೆಯಲ್ಲಿ.
ವಿ ಕೆ ಸಿಂಗ್ ರವರ ಆಂಥ್ರಾಪಾಲಾಜಿ ದಾಖಲೆಗಳು ಸಿಗುತ್ತವೆ. ವೀರಶೈವ ಪಂಥದಲ್ಲಿ ಬರುವ ಜಂಗಮರೆ ಬೇಡ ಜಂಗಮರು ಎಂಬುದಕ್ಕೆ ಸೂರ್ಯನಾಥ ಕಾಮತ್ ಅವರಿಂದ ಸರ್ಕಾರವೇ ಅಧ್ಯಯನ ಮಾಡಲು ಹೇಳಿ, ಆ ಅಧ್ಯಯನವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
ಸತ್ಯವನ್ನು ಒಪ್ಪಿಕೊಂಡು ಸರ್ವರಿಗೂ ಮೀಸಲಾತಿಯಲ್ಲಿ ಅವಕಾಶ ಮಾಡಿಕೊಡಿ. ವಿತಂಡ ವಾದ ಬಿಟ್ಟು ಬಿಡಿ.