‘ಬಸವ ಜಯಂತಿಯನ್ನು ಹಾಳು ಮಾಡಲು ಯತ್ನಿಸುತ್ತಾರೆ ಎಂಬ ಮುನ್ಸೂಚನೆ ಇತ್ತು’

ಬಸವ ಮೀಡಿಯಾ
ಬಸವ ಮೀಡಿಯಾ

ರೇಣುಕಾ ಚಿತ್ರ ಬೇಕೆಂದ ಮಾಜಿ ಬಿಜೆಪಿ ಶಾಸಕ ಮೊದಲು ಬಸವ ತತ್ವದಲ್ಲಿದ್ದರು: ಆಯೋಜಕರು

ಚಿಂಚೋಳಿ

ಚಿಂಚೋಳಿಯಲ್ಲಿ ಇತ್ತೀಚಿಗೆ ನಡೆದ ಬಸವ ಜಯಂತಿಯಲ್ಲಿ ಸೇಡಂನ ಮಾಜಿ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ರೇಣುಕಾಚಾರ್ಯರ ಚಿತ್ರವಿಲ್ಲವೆಂದು ಗಲಾಟೆಯೆಬ್ಬಿಸಿದರು.

ರಾಜ್ಯಾದ್ಯಂತ ಗಮನ ಸೆಳೆದಿರುವ ಈ ವಿವಾದದ ಬಗ್ಗೆ ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶರಣು ಪಾಟೀಲ ಮೋತಕಪಲ್ಲಿ ಮಾತನಾಡಿದ್ದಾರೆ. ಇವರು ವೀರಶೈವ ಮಹಾಸಭಾದ ಚಿಂಚೋಳಿ ತಾಲ್ಲೂಕ ಘಟಕದ ಅಧ್ಯಕ್ಷರು.

1) ತೇಲ್ಕೂರ ಈ ರೀತಿ ವಿವಾದ ಮಾಡುತ್ತಾರೆಂಬ ಮುನ್ಸೂಚನೆಯಿತ್ತೇ?

ನಾವೆಲ್ಲಾ ಕಷ್ಟಪಟ್ಟು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಯಾರಾದರು ಹಾಳುಮಾಡುವ ಪ್ರಯತ್ನ ಮಾಡುತ್ತಾರೆ ಎನ್ನುವ ಮುನ್ಸೂಚನೆ ಇತ್ತು. ಆದರೆ ತೇಲ್ಕೂರ ಅವರಿಂದ ಈ ನಿರೀಕ್ಷೆ ಇರಲಿಲ್ಲ.

2) ಬಸವ ತತ್ವದ ಕಾರ್ಯಕ್ರಮದಲ್ಲಿ ತೇಲ್ಕೂರಂತವರಿಗೆ ಅಹ್ವಾನ ನೀಡಿದ್ದು ಯಾಕೆ?

ಇದು ಚಿಂಚೋಳಿ ತಾಲೂಕ ಮಟ್ಟದ ಬಸವ ಜಯಂತಿ ಕಾರ್ಯಕ್ರಮ. ತೇಲ್ಕೂರ ಪ್ರತಿನಿಧಿಸಿದ್ದ ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ತಾಲೂಕಿನ 33 ಗ್ರಾಮಗಳು ಒಳಪಡುತ್ತವೆ. ಹಾಗಾಗಿ ನಾವು ಸೇಡಂ ನಾಯಕರಿಗೆ ಪ್ರತಿ ಕಾರ್ಯಕ್ರಮಕ್ಕೂ ಆಹ್ವಾನ ನೀಡ್ತೀವಿ.

3) ತಾವು ಬಸವ ತತ್ವದವರು ಎಂದು ತೇಲ್ಕೂರ ಭಾಷಣದಲ್ಲಿ ಹೇಳಿದರು. ಇದು ನಿಜವೇ?

ರಾಜಕೀಯಕ್ಕೆ ಬರುವ ಮುಂಚೆ ನೂರಕ್ಕೆ ನೂರು ಅವರು ಬಸವತತ್ವ ಪರಿಪಾಲಕರು, ಚಿತ್ರದುರ್ಗದ ಮುರುಘಾ ಶರಣರ ಗರಡಿಯಲ್ಲಿ ಬೆಳೆದವರು.

ಮುರುಘಾ ಶರಣರು ತೆಲ್ಕೂರ ಅವರಿಗೆ ಬಸವಣ್ಣನೇ ಧರ್ಮಗುರು ಎಂದು ತಿಳಿಸಿ ಬಹಳ ವರ್ಷಗಳ ಹಿಂದೆ ಲಿಂಗದೀಕ್ಷೆ ನೀಡಿದ್ದರು. ಕೆಲವು ದಿನ ತೇಲ್ಕೂರ ಸಾಧಕರಾಗಿದ್ದರು. ಆದರೆ ಆದರೆ ನಂತರ ರಾಜಕೀಯಕ್ಕೆ ಇಳಿದರು. ಅಲ್ಲಿಂದ ಅವರು ಬದಲಾದರು.

4) ಯಾವ ಉದ್ದೇಶದಿಂದ ತೇಲ್ಕೂರ ವಿವಾದವೆಬ್ಬಿಸಿದರು?

ಕಾರ್ಯಕ್ರಮ ಆಯೋಜಕನಾದ ನಾನು ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಕಲಬುರಗಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಮೂಲಕ ಮಹಾಸಭಾ ಅಧ್ಯಕ್ಷನಾಗಿದ್ದು ನಾನು. ನನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದು ಜೊತೆಗೆ ಬಸವ ತತ್ವವನ್ನು‌ ಪಸರಿಸಲು ಪ್ರಯತ್ನಿಸುತ್ತಿದ್ದೇನೆ.

ಇದು ಕೆಲವು ಬಸವವಿರೋಧಿಗಳಿಗೆ ಇಷ್ಟವಾಗಿಲ್ಲ. ನನ್ನನ್ನು ವಿರೋಧಿಸಲು ಇಂತಹ ಅನೇಕ ಅಸ್ತ್ರ ಪ್ರಯೋಗಿಸಿದ್ದಾರೆ.

5) ವಿವಾದಕ್ಕೆ ಚಿಂಚೋಳಿಯಲ್ಲಿ ಪ್ರತಿಕ್ರಿಯೆ ಹೇಗೆ ಬರುತ್ತಿದೆ?

ಜಯಂತೋತ್ಸವ ಯಶಸ್ವಿಯಾಗಿದೆ. ಸತ್ಯ ಎಲ್ಲರಿಗೂ ಗೊತ್ತಾಗಿದೆ. ಅರಿತವರು ಸಂತೋಷ ಪಡುತ್ತಿದ್ದಾರೆ. ಹೊಟ್ಟೆಕಿಚ್ಚು ಪಡುವವರು ನೋವಿನಿಂದ ಅಜಿವಾನ ತಿನ್ನುತ್ತಿದ್ದಾರೆ.

6) ಚಿಂಚೋಳಿಯಲ್ಲಿ ಲಿಂಗಾಯತ, ವೀರಶೈವ ಸಂಘಟನೆಗಳ ಮೇಲೆ ವಿವಾದದ ಪರಿಣಾಮವೇನು?

ಎಲ್ಲರೂ ಜೊತೆಗೂಡಿ ಎಲ್ಲಾ ಆಚರಣೆಗಳನ್ನು ಮಾಡುತ್ತೇವೆ. ಈ ವಿವಾದದ ನಂತರ ನಾವು ಇನ್ನು ಮುಂದೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
6 Comments
  • ವೀರಶೈರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯ ಬೆಳವಣಿಗೆ.

    • ವೀರಶೈವರಿಂದ ಮಾತ್ರವಲ್ಲ ಮನುಷ್ಯರಿಂದಲೇ ಅಂತರ ಕಾಯ್ದುಕೊಳ್ಳಿ…
      ಇದರಿಂದ ನಿಮಗೆ ಅನುಕೂಲವಾದಿತು.

  • You have done right sir,we are only lingayath, long live lingayath religion,Sharanu sharanarthi.

    • Simply you people’ are fighting.
      Most of the community members do not wear Instalinga,leave apart daily pooja.
      Few members are found in bar eating and drinking
      Few Swamijis are behind bar due to illegal practices.
      Instead all community members should unite and practice Basava Dharma at home and respect others feelings and practices
      In a world with 800 crores population we are just 4 crores.
      One should know where we stand.
      Respect both Sri Renukacharya and Sri Basavanna.
      Stop selling Basavanna for money and follow his Vachanas and inculcate in daily routine.

      • In Lingayat religion there is no place for Renukacharya or Ganapati.

        It is not lack of respect. It is our rejection.

        We respect other people’s faith. But do not impose them on us.

  • Jai lingayat , we are only lingayats , no other god pooja , just pray shiv basavana , it’s independent religion , just wake all lingayats from sleep , and go o through about our religion . Jai lingayat ombhai

Leave a Reply

Your email address will not be published. Required fields are marked *