ತುಮಕೂರು :
ಬಸವ ಕೇಂದ್ರ, ಜಯದೇವ ವಿದ್ಯಾರ್ಥಿ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸಮಸ್ತ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 12 “ಜಗಜ್ಯೋತಿ ಬಸವೇಶ್ವರರ ಜಯಂತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮೇ 10ರಂದು ಬೆಳಿಗ್ಗೆ 10-30 ಗಂಟೆಗೆ ಜಯದೇವ ಮುರುಘರಾಜೇಂದ್ರ ಸಭಾಂಗಣ, ತುಮಕೂರು ಇಲ್ಲಿ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಗಳ ವಿವರ:
1) ವಚನ ಕಂಠಪಾಠ ಸ್ಪರ್ಧೆ 10 ನಿಮಿಷ ಬಸವಣ್ಣನವರ ವಚನಗಳು ಹೇಳಬೇಕು.
2) ಪ್ರಬಂಧ ಬರೆಯುವ ಸ್ಪರ್ಧೆ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ವಿಷಯವಾಗಿ ಅರ್ಧಗಂಟೆ ಅವಧಿಯಲ್ಲಿ ಬರೆಯಬೇಕು.
3) ವಚನ ಗಾಯನ ಸ್ಪರ್ಧೆ ಬಸವಣ್ಣನವರ ಎರಡು ವಚನಗಳನ್ನು ಹಾಡಬೇಕು.
ಈ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಥಮ ಮೂವರಿಗೆ ಜಯಂತಿ ಕಾರ್ಯಕ್ರಮದಂದು ಬಹುಮಾನ ನೀಡಿ ಸತ್ಕರಿಸಲಾಗುವದು.
ಷರತ್ತುಗಳು;
1)ಎಲ್ಲಾ ಸ್ಪರ್ಧೆಗಳಲ್ಲೂ ತೀರ್ಪುಗಾರರ ತೀರ್ಮಾನವೇ ಅಂತಿಮ.
2)ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ಏರ್ಪಡಿಸಲಾಗಿದ್ದು, 1ನೇ ಹಂತದಲ್ಲಿ 8 ವರ್ಷದಿಂದ 20 ವರ್ಷದ ಒಳಗಿನವರು. 2ನೇ ಹಂತದಲ್ಲಿ 21ನೇ ವರ್ಷದಿಂದ ಮೇಲ್ಪಟ್ಟವರಿಗೆ ಅವಕಾಶ ನೀಡಲಾಗುವುದು.
3)ಸ್ಪರ್ಧಾರ್ಥಿಗಳು ಸ್ಪರ್ಧೆಯ ದಿನದ ಪೂರ್ವದಲ್ಲಿ ಈ ಕೆಳಕಂಡ ಸಂಘಟಕರ ಬಳಿ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
4)ಹೆಚ್ಚಿನ ಮಾಹಿತಿಗೆ ಕಲ್ಪನಾ ಉಮೇಶ ಮೊ: 9448479405 ಅಧ್ಯಕ್ಷರು, ಮಹಿಳಾ ಬಸವ ಕೇಂದ್ರ, ಜಿ. ಬಿ. ನಾಗಭೂಷಣ ಮೊ: 9964030475 ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ, ಪ್ರೇಮ ಪ್ರಸಾದ ಮೊ: 9032982860 ಮಹಿಳಾ ಬಸವಕೇಂದ್ರ ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
