ಬೆಂಗಳೂರು
ಅಕ್ಟೋಬರ್ 22 ರಾಜ್ಯಧಾನಿಯಲ್ಲಿ ಕಾಂತರಾಜ್ ವರದಿಯ ಕುರಿತಾಗಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರಿಗೆ ಅಹ್ವಾನ ನೀಡಲಾಗಿದೆ.
ಇಬ್ಬರೂ ಮುಖ್ಯಮಂತ್ರಿಗಳ ಮನೆಗೆ ಹೋಗಿ ವೀರಶೈವ ಮಹಾಸಭಾದ ಅಧ್ಯಕ್ಷ ಡಾ ಶಾಮನೂರು ಶಿವಶಂಕರಪ್ಪ, ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಮಹಾದೇವ್ ಬಿದರಿ, ನಿವೃತ್ತ ನ್ಯಾಯಮೂರ್ತಿ ಶುಭಾಶಯ ಸಭೆಗೆ ಆಹ್ವಾನಿಸಿದರು.
“ಇಂತಹ ಅವೈಜ್ಞಾನಿಕ ವರದಿಯನ್ನು ಇದೇ ತಿಂಗಳು ಸಚಿವ ಸಂಪುಟದ ಮುಂದೆ ತರಲು ಸರ್ಕಾರ ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ. ಸಮಾಜದ ಹಿತದೃಷ್ಟಿಯಿಂದ ಶ್ರೀ ಕಾಂತರಾಜ್ ವರದಿಯ ಬಗ್ಗೆ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ದಿನಾಂಕ: 22-10-20248 ಮಂಗಳವಾರ ಸಂಜೆ 5.00 ಗಂಟೆಗೆ ಏಟ್ರಿಯಾ ಹೋಟೆಲ್ನಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ,” ಎಂದು ಮಹಾಸಭಾದ ಪ್ರಕಟಣೆಯೊಂದು ತಿಳಿಸಿದೆ.