ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ
ಮಹಾರಾಷ್ಟ್ರದಲ್ಲಿ ಸಿದ್ಧರಾಮರು, ಆಂಧ್ರ ಪ್ರದೇಶದಲ್ಲಿ ಪಂಡಿತಾರಾಧ್ಯರು ೧೨ನೇ ಶತಮಾನದ ಪ್ರಸಿದ್ಧ ಗುರುಗಳು. ಇವರಿಬ್ಬರೂ ತಮ್ಮ ಸಮಕಾಲೀನರಾಗಿದ್ದ ಬಸವಣ್ಣನವರ ಭಕ್ತರಾದರು.
ಸಿದ್ಧರಾಮರ ನಾಥ-ಸಿದ್ದ ಪಂಥ ಶರಣ ಧರ್ಮದಲ್ಲಿ ಲೀನವಾಯಿತು. ಪಂಡಿತಾರಾಧ್ಯರ ಭಕ್ತರಾಗಿದ್ದ ಆರಾಧ್ಯರು ಒಳ ಬಂದರೂ ಪ್ರತ್ಯೇಕವಾಗಿ ಉಳಿದುಕೊಂಡು ಕಾಲಕ್ರಮೇಣ ವೀರಶೈವರಾಗಿ ಬೆಳೆದರು.
ಸಿದ್ದರಾಮರ ಮೂಲ ಹೆಸರು ರಾಮಯ್ಯ. ಸಿದ್ಧರಾಗಿದ್ದರಿಂದ ಅವರ ಹೆಸರು ‘ಸಿದ್ದರಾಮಯ್ಯ’ ಎಂದಾಯಿತು. ಸಿದ್ದರಾಮರು ಪ್ರಸಿದ್ಧ ನಾಥ-ಸಿದ್ದ ಗುರು ರೇವಣಸಿದ್ದರ ಕಿರಿಯ ಸಮಕಾಲೀನರು.
ಸಿದ್ದರಲ್ಲಿ ವಾಮಾಚಾರದತ್ತ ತಿರುಗುತ್ತಿದ್ದ ಕಾಪಾಲಿಕ ಸಿದ್ದ ಮತ್ತು ಶಿವಪರವಾಗಿದ್ದ ನಾಥ-ಸಿದ್ದ ಪಂಥಗಳಿದ್ದವು. ಸಿದ್ಧರಾಮರು ಕಾಪಾಲಿಕ ಸಿದ್ದರನ್ನು ತಿರಸ್ಕರಿಸಿ ನಾಥ-ಸಿದ್ದ ಪಂಥದ ಗುರುಗಳಾದರು.
ಸಿದ್ದರಾಮರ ಪಭಾವ ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಅನೇಕ ಅರಸರು ಇವರಿಗೆ ದತ್ತಿ ನೀಡಿರುವ ಶಾಸನಗಳು ಎರಡೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೊರೆಯುತ್ತವೆ.
ಕುರುಬರಾಗಿ ಹುಟ್ಟಿದ್ದ ಸಿದ್ಧರಾಮರು ಜಾತಿ ನಿಂದನೆ ಎದುರಿಸಿದರು. ಇವರು ಕಟ್ಟಿದ ಕೆರೆಯನ್ನು ಮೊರಬ ಬ್ರಾಹ್ಮಣರು ‘ಶೂದ್ರ’ ಕಟ್ಟಿಸಿದ ಕೆರೆಯೆಂದು ತೆಗಳಿದ್ದು ‘ಸಿದ್ದರಾಮ ಚರಿತ್ರೆ’ಯಲ್ಲಿ ದಾಖಲಾಗಿದೆ.
(‘ಸಿದ್ದರಾಮ ಮತ್ತು ನಾಥ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪