ಶರಣರ ವೇದಿಕೆಯಾದ ಮಹಾಮನೆಯ ಕಲ್ಪನೆ ಅಮೋಘ: ತಿಪ್ಪೇರುದ್ರಸ್ವಾಮಿ ಶರಣರು

ನ್ಯಾಮತಿ

12ನೇ ಶತಮಾನದಲ್ಲಿ ಹೊಸ ತತ್ವ ಸಿದ್ಧಾಂತದ ಧರ್ಮ ಹುಟ್ಟಿದ್ದು, ಜೊತೆಯಲ್ಲಿ ಧರ್ಮಾಧಾರಿತವಾಗಿ ಬಂದಂತಹ ಪದಗಳಿಗೆ ಹೊಸ ಅರ್ಥ ಕೊಟ್ಟ ವಿಚಾರವನ್ನು ಅಲ್ಲಿ ಕಾಣುತ್ತೇವೆ. ಮಹಾಮನೆ ಕಲ್ಪನೆ ಆಗ ಮೂಡಿಬಂತು. ಆ ಮಹಾಮನೆಯಲ್ಲಿ ಮಹಾನುಭಾವರೆಲ್ಲ ಸೇರುತಿದ್ದರು.

ಅಲ್ಲಿ ಮಾನವ ಕಲ್ಪಿತ ಜಾತಿಯ ಎಲ್ಲಾ ವರ್ಗದವರು ಸೇರಿಕೊಂಡರು. ಅವರು ಪಡೆದ ಗುರುವಿನಿಂದ ಲಿಂಗ ಸಂಸ್ಕಾರವನ್ನು ಹೊಂದಿ ಲಿಂಗಾಪೂಜೆ ನಿಷ್ಠರಾಗಿ ಲಿಂಗಾನುಭಾವವನ್ನು ನಡೆಸುತ್ತಿದ್ದರು. ಅಂದಿನ ಮಹಾಮನೆ ಕಲ್ಪನೆ ಅಮೋಘವೆಂದು ಹೊಳಲ್ಕೆರೆ ಒಂಟಿಕಲ್ಲು ಮುರುಘಾಮಠದ ತಿಪ್ಪೇರುದ್ರಸ್ವಾಮಿ ಶರಣರು ಹೇಳಿದರು.

ಅರಿವು ಆಚಾರ ಅನುಭಾವದ ‘ಮನೆಯಲ್ಲಿ ಮಹಾಮನೆ 16ನೇ ಗೋಷ್ಠಿ’ ಶ್ರೀ ಗುರುಬಸವ ಮಹಾಮನೆಯ‌ಲ್ಲಿ ಈಚೆಗೆ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಅನುಭಾವ ನೀಡಿದರು.

ದಾವಣಗೆರೆ, ಸ್ವಾನುಭಾವ ನೆಲೆ ವೇದಿಕೆಯ ಶರಣೆ ಸುಧಾ ನಂದಿಹಳ್ಳಿ ಅಷ್ಟಾವರಣ ತತ್ವ ‘ಲಿಂಗ’ ಕುರಿತು ಅನುಭಾವ, ಶರಣೆ ಲೀಲಾವತಿ ಅಷ್ಟಾವರಣ ತತ್ವ ‘ಗುರು’ ಕುರಿತು ಅನುಭಾವ ನೀಡಿದರು. ಶರಣರ ನೆನಹುನಲ್ಲಿ, ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪನವರ ಬಗ್ಗೆ ಶರಣ ಷಣ್ಮುಖಪ್ಪ ಸಾಲಿ, ಅಲ್ಲಮಪ್ರಭುವಿನ ಬಗ್ಗೆ ಶರಣ ವಿಶ್ವೇಶ್ವರಯ್ಯ ಬಸವಬಳ್ಳಿ ಅನುಭಾವ ನೀಡಿದರು.

ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಮುಂಡರಗಿ ಶಿವರಾಜ ಸ್ವಾಗತಿಸಿದರು. ದಾಸೋಹಿ ಶರಣ ಶಂಭುಲಿಂಗಪ್ಪ ಎಸ್.ಜೆ. ಶರಣು ಸಮರ್ಪಣೆ ಮಾಡಿದರು.

ಸುರಹೊನ್ನೆ ಬಸವೇಶ್ವರ ಭಜನಾ ಮಂಡಳಿಯಿಂದ ವಚನ ಗಾಯನ, ಕದಳಿ ವೇದಿಕೆ ಶರಣೆಯರಿಂದ ವಚನ ಪ್ರಾರ್ಥನೆ ನಡೆದವು.

ನ್ಯಾಮತಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಿನ ಬಸವಾಭಿಮಾನಿಗಳ ಸಹಕಾರದೊಂದಿಗೆ
ಕಾರ್ಯಕ್ರಮ ಜರುಗಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *