ಬೆಂಗಳೂರು
ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ.
ರವಿವಾರ ಅಭಿನಯಿಸಿದ ಪ್ರಸಂಗ ತನ್ನ ಜೀವನದ್ದೇ, ತಾನು ಅನಾಥೆ, ಹುಟ್ಟಿದಾಗ ಜನ್ಮ ನೀಡಿದವರು ತನ್ನನ್ನು ಕಸದ ತೊಟ್ಟಿಗೆ ಹಾಕಿ ಹೋಗಿದ್ದರು ಎಂದು ಕಾರ್ಯಕ್ರಮದಲ್ಲಿ ದಿವ್ಯಾಂಜಲಿ ಮನ ಮಿಡಿಯುವಂತೆ ಮಾತನಾಡಿದಳು. ವಿಷಯ ತಿಳಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಎತ್ತಿಕೊಂಡು ಹೋಗಿ ಮಠದಲ್ಲಿ ಬೆಳಸಿದರು.