ಸಾಣೇಹಳ್ಳಿ:
ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಮೇ 17 ರಿಂದ ಜೂನ್ 5 ರವರೆಗೆ ಆಯೋಜಿಸಲಾಗಿದ್ದ ೨೦ ದಿನಗಳ ‘ಯುವ ಜನ ಶೈಕ್ಷಣಿಕ ರಂಗ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ನಡೆಯಿತು.
ಸಾನಿಧ್ಯ ವಹಿಸಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಅವರು ಮಾತನಾಡಿ, ಈ ೨೦ ದಿನಗಳ ಶಿಬಿರವು ಸಮುದ್ರದಲ್ಲಿ ಸೂಜಿಯಿಂದ ನೀರು ತೆಗೆದಷ್ಟೇ ಸಣ್ಣ ಅನುಭವ. ಶಿಬಿರಾರ್ಥಿಗಳು ಪ್ರದರ್ಶಿಸಿದ ‘ಅಮ್ಮ ತಾಯಿ’ ನಾಟಕವು ಬಡತನ, ಹಸಿವು, ಅಧಿಕಾರ ಹಾಗೂ ಕೊನೆಗೆ ತಾಯಿಯೊಬ್ಬಳ ಮನಸ್ಸು ಪರಿವರ್ತನೆಯಾಗುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದೆ, ಎಂದರು.







