ಬೆಳಗಾವಿ:
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ.
ಹಿಮಾಲಯದಲ್ಲಿ ಸತತ 6 ವರ್ಷಗಳ ಕಾಲ ಸಾಧನೆ ಮಾಡಿರುವ ಖ್ಯಾತ ಯೋಗಸಾಧಕರಾದ ನಿರಂಜನ ಮಹಾಸ್ವಾಮಿಗಳು ಯೋಗ, ಧ್ಯಾನ ಕುರಿತು ಪ್ರಾತ್ಯಕ್ಷಿಕೆ ಹಾಗೂ ಆಧ್ಯಾತ್ಮಿಕ ಅನುಭಾವದ ಪ್ರವಚನ ನೀಡುತ್ತಲಿದ್ದಾರೆ.






