ಹೊಸಪೇಟೆ:
ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಚನ್ನ ಹುಣ್ಣಿಮೆಯ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಧ್ಯಾನ ಮತ್ತು ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ನಡೆಯಿತು.
ಪ್ರಾಧ್ಯಾಪಕ ಮತ್ತು ಇಷ್ಟಲಿಂಗ ಅಧ್ಯಯನ ಕೇಂದ್ರದ ಸದಸ್ಯ ಡಾ. ಬಸವರಾಜ ಟಿ. ಹೆಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, 12ನೇ ಶತಮಾನದಲ್ಲಿ ಅಸಮಾನತೆಯ ಮೀಸಲಾತಿ ಚೌಕಟ್ಟನ್ನು ಮೀರುವ ನಿಟ್ಟಿನಲ್ಲಿ ಬಸವಾದಿ ಶರಣರು ಇಷ್ಟಲಿಂಗವೆಂಬ ಪರ್ಯಾಯ ದೈವವನ್ನು ಕಂಡುಕೊಂಡರು.





