ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ತಕ್ಕ ಉತ್ತರ ಕೊಡೋಣ

ಸಂಘ ಪರಿವಾರದ ಮುಖವಾಡಗಳನ್ನು ಕಳಚೋಣ

ಗದಗ

ಇದೇ ತಿಂಗಳ 31ರಂದು ಗದಗ ನಗರದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ವನ್ನು ಹಿಂದುತ್ವವಾದಿ ಸಂಘಟನೆಗಳು ಹಮ್ಮಿಕೊಂಡಿವೆ.

ಈಗಾಗಲೇ ರಚಿತಗೊಂಡಿರುವ ಈ ಹಿಂದೂ ಸಮಾವೇಶದ ಸಮಿತಿಯನ್ನು ಒಮ್ಮೆ ಗಮನವಿಟ್ಟು ನೋಡಿದರೆ ಇದರಲ್ಲಿ ಇರುವ ಎಲ್ಲರೂ ಬಿ.ಜೆ.ಪಿ. ಪಕ್ಷದ ಸದಸ್ಯರೇ ಹಾಗೂ ಇದರ ಮುಂಚೂಣಿಯಲ್ಲಿರುವರು ಸಂಘ ಪರಿವಾರದ ಮುಖಂಡರು. ಇದು ಒಂದು ಕೋಮುವಾದಿ ಪಕ್ಷದ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತೂ ಹೇಳುವದಾದರೆ ಇದೊಂದು ಲಿಂಗಾಯತ ಮತ್ತು ಶರಣ ಪರಂಪರೆ ಅಳಿಸಿಹಾಕುವ ಆರ್ ಎಸ್ ಎಸ್ ನ ಅಜೆಂಡಾ ಆಗಿದೆ.

ಈ ಬಸವಾದಿ ಶರಣರ ಹಿಂದೂ ಸಮಾವೇಶ ಇದು ಗದಗ ನಗರಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ಹಿಂದೂ ಸಮಾವೇಶ ಇದರ ಉದ್ದೇಶ.  ನಾಟಕದ ಪ್ರಮುಖ ಸೂತ್ರದಾರರು ಆರ್.ಎಸ್.ಎಸ್. ಹಾಗೂ ಸಂಘ ಪರಿವಾರ. ಆರ್.ಎಸ್.ಎಸ್. ನ ಪ್ರಮುಖ ಪ್ರಚಾರಕರಲ್ಲಿ ಒಬ್ಬರಾದ ಈ ಕನೇರಿ ಸ್ವಾಮಿಯನ್ನು ಕೈಕೋಲಾಗಿ ಬಳಸಿಕೊಂಡಿದ್ದಾರೆ.

ಅವರು ಕೇವಲ ಹಿಂದೂ ಸಮಾವೇಶ ಮಾಡಿದ್ದರೆ ತಮ್ಮ ತಕರಾರು ಇರುತ್ತಿರಲಿಲ್ಲ. ಅವರು ಹಿಂದೂ ಸಮಾವೇಶದ ಹೆಸರಿನಲ್ಲಿ ತಗಲಾಕಿಕೊಂಡಿರುವುದು ಬಸವಾದಿ ಶರಣರನ್ನು.

ಯಾವ ಬಸವಾದಿ ಶರಣರು ಇವರ ಅಸಮಾನತೆಯ ವೈದಿಕ (ಈಗಿನ ಹಿಂದುತ್ವ) ಪರಂಪರೆಯನ್ನು, ಜಾತಿ ವ್ಯವಸ್ಥೆಯನ್ನು, ಮೇಲು, ಕೀಳು, ಸ್ತ್ರೀ ಅಸಮಾನತೆಯನ್ನು ಕಠೋರವಾಗಿ ವಿರೋಧಿಸಿದ್ದರೊ, ಅವರ ಹೆಸರಿನಲ್ಲಿ ಈ ಸಂಘ ಪರಿವಾರದ ನಾಟಕ ಕಂಪನಿ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶವನ್ನು ಮಾಡುತ್ತಿದ್ದಾರೆ.

ಇದರ ಹಿಂದೆ ದೊಡ್ಡ ರಾಜಕಾರಣ ಅಡಗಿದೆ. ಈ ಹಿಂದೆಯೂ ಕೂಡ ಇದೆ ಸಂಘ ಪರಿವಾರ ಹಿಂದೂ, ಹಿಂದುತ್ವದ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಲಿಂಗಾಯತ ಜನ ಅಷ್ಟಾಗಿ ಇವರಿಗೆ ಪ್ರತಿಕ್ರಿಯೆ ಕೊಟ್ಟಿದ್ದಿಲ್ಲ. ಜನ ಇವರನ್ನು ತಿರಸ್ಕರಿಸುತ್ತ ಬಂದಿದ್ದಾರೆ.

ಆದರೆ ಹಿಂದುತ್ವದ ಸಿದ್ಧಾಂತವನ್ನು ವಿರೋಧಿಸುತ್ತ ಬಂದಿರುವ ಬಸವಾದಿ ಶರಣರ ಹೆಸರನ್ನ ಬಳಸಿಕೊಂಡು ಇಡೀ ರಾಜ್ಯದ ಲಿಂಗಾಯತ ಧರ್ಮವನ್ನು ಸರ್ವನಾಶ ಮಾಡಿ ಸಂಘ ಪರಿವಾರ ತನ್ನ ಹಿಂದುತ್ವದ ತೆಕ್ಕೆಗೆ ಶರಣರನ್ನು ತರಲು ಈ ಸಮಾವೇಶ ಮಾಡಲು ಹೊರಟಿದ್ದಾರೆ.

ರಾಜ್ಯದ ಬುದ್ಧಿವಂತ ಲಿಂಗಾಯತರು ಇವರ ದಾಳಕ್ಕೆ ಬಲಿಯಾಗದೆ ಇವರಿಗೆ ತಕ್ಕ ಉತ್ತರವನ್ನು ನೀಡಬೇಕಾದ ಸಮಯ ಈಗ ಒದಗಿಬಂದಿದೆ.

ಈ ಹಿಂದೂ ಸಮಾವೇಶ ನಾಟಕದ ಪ್ರಮುಖ ಪಾತ್ರಧಾರಿಯನ್ನಾಗಿ ಆರ್. ಎಸ್.ಎಸ್. ಕನೇರಿ ಸ್ವಾಮಿಯನ್ನು ಮುಂದು ಮಾಡಿದೆ. ಕನೇರಿ ಸ್ವಾಮಿ ಈಗ ಇಡೀ ವಚನ ಚಳುವಳಿಯನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರನಾಗಿದ್ದಾನೆ.

ಬಸವಾದಿ ಶರಣರ ಹೆಸರಿನಲ್ಲಿ ಸುಳ್ಳು ಸುಳ್ಳು ಇತಿಹಾಸವನ್ನು ಜನರ ತಲೆಗೆ ತುಂಬಲು ಹೊರಟಿದ್ದಾನೆ. ಅಶ್ಲೀಲ, ಕೆಟ್ಟ ಶಬ್ದಗಳಿಂದ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ಇರುವ, ಅದಕ್ಕಾಗಿ ಹೋರಾಡುತ್ತಿರುವ, ಕೆಲಸ ಮಾಡುವ ಲಿಂಗಾಯತ ಮಠಾಧೀಶರಿಗೆ ಹಿಯಾಳಿಸುವ ಕೆಲಸದಲ್ಲಿ ನಿರತನಾಗಿದ್ದಾನೆ.

ಅಷ್ಟೇ ಅಲ್ಲದೆ ಹಿಂದುತ್ವ ಸಿದ್ಧಾಂತದ ಜಾತಿವ್ಯವಸ್ಥೆ, ತಾರತಮ್ಯ, ಮೇಲು ಕೀಳು, ಇವು ಸ್ವಾಭಾವಿಕ, ಇಲ್ಲಿ ಎಲ್ಲರನ್ನು ಸಮನಾಗಿ ಕಾಣಲು ಬರುವುದಿಲ್ಲ. ನಮ್ಮ ಐದು ಬೆರಳುಗಳು ಸಮವಾಗಿ ನೋಡಲು ಬರುತ್ತಾ..? ಜಾತಿ ವ್ಯವಸ್ಥೆಯು ಹಾಗೆ ಎಂದು ದಲಿತರನ್ನು ಹೀಯಾಳಿಸಿಕೊಂಡು ಬರುತ್ತಿದ್ದಾನೆ. ಇರುವ ಜಾತಿ ವ್ಯವಸ್ಥೆ ಇದ್ದಂತೆಯೇ ಇರಲಿ ಎಂದು ಪ್ರತಿಪಾದಿಸುತ್ತ ನೇರ ಅಸ್ಪೃಶ್ಯತೆ ಆಚರಣೆಯನ್ನು ಬೆಂಬಲಿಸುತ್ತಿದ್ದಾನೆ.

ಗದಗ ನಗರಕ್ಕೆ ಇಂಥ ಕಾರ್ಯಕ್ರಮ ಮೊದಲೇನಲ್ಲ. ಈ ಹಿಂದೆ 2023 ರಲ್ಲಿ ಸಂಘ ಪರಿವಾರದ ಸಹಭಾಗಿ ಸಂಘಟನೆಗಳ ಮೂಲಕ ಗದಗ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಇಡೀ ವಚನ ಚಳುವಳಿಯನ್ನು ಅಪ್ರಸ್ತುತ ಗೊಳಿಸುವ ‘ವಚನ ದರ್ಶನ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಆಗ ನಾವೆಲ್ಲರೂ ತೀವ್ರ ಪ್ರತಿರೋಧ ಒಡ್ಡಿ ಆ ವಿಚಾರ ಸಂಕಿರಣ ಯಶಸ್ವಿ ಆಗದ ಹಾಗೆ ನೋಡಿಕೊಂಡಿದ್ದೆವು. ಆದರೆ ಈಗ ಅದೇ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶವನ್ನು ಮಾಡಲು ಹೊರಟಿದ್ದಾರೆ.

ಗದಗದ ನಿಜಾಚರಣೆಯ ಲಿಂಗಾಯತರು, ಪ್ರಜ್ಞಾವಂತ ನಾಗರಿಕರು, ದಲಿತ, ಪ್ರಗತಿಪರ ಸಂಘಟನೆಗಳು ಕೂಡಿ ಈ ಶರಣರು ಹೆಸರಿನ ಹಿಂದುತ್ವದ ಈ ಸಮಾವೇಶಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಬೇಕು.

ವಚನ ಚಳುವಳಿ ಹಾಗೂ ನಮ್ಮ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹೊರಟಿರುವ ಈ ಸಂಘ ಪರಿವಾರದ ಮುಖವಾಡಗಳನ್ನು ಕಳಿಚಿ ಇವರ ಬಣ್ಣ ಬಯಲು ಮಾಡಬೇಕಿದೆ.

ಹೀಗಾಗಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡು ದೊಡ್ಡ ಪ್ರತಿರೋಧದ ಸಮಾವೇಶವನ್ನು ಮಾಡಲು ತೀರ್ಮಾನಿಸಲಾಗಿದೆ. ಈಗ ಎರಡನೇ ಪೂರ್ವಭಾವಿ ಸಭೆ ಮೇ 24 ರಂದು ರವಿವಾರ ಸಾಯಂಕಾಲ 4 ಗಂಟೆಗೆ ಶಿವಾನಂದ ನಗರದ ಬಸವ ಮಂಟಪದಲ್ಲಿ ನಡೆಯಲಿದೆ, ತಾವೆಲ್ಲ ಬರಬೇಕು. ಪರ್ಯಾಯ ಸಮಾವೇಶ ಮಾಡುವ ಕುರಿತು ಚರ್ಚಿಸಲು ನಾವೆಲ್ಲ ಕೂಡೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *