ಜಹಿರಾಬಾದ:
ಲಿಂಗಾಯತ ಸಮಾಜದ ವತಿಯಿಂದ ವಿಶ್ವಗುರು ಶ್ರೀ ಬಸವೇಶ್ವರ 893ನೇ ಜಯಂತೋತ್ಸವ ನಿಮಿತ್ತ ನಗರದ ಅನುಭವ ಮಂಟಪದಲ್ಲಿ ಸಾಮೂಹಿಕ ಬಸವ ಗುರುವಿನ ಪ್ರಾರ್ಥನೆ ನಡೆಯಿತು.
ನಂತರ ಬಸವತತ್ವ ಆಧಾರಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ನಡೆಸಲಾಯಿತು. ಅಲ್ಲಮಪ್ರಭು, ಬಸವೇಶ್ವರ, ಚೆನ್ನಬಸವೇಶ್ವರ, ಅಕ್ಕಮಹಾದೇವಿ, ಅಕ್ಕನಾಗಲಾಂಬಿಕೆ ಎಂಬ ಐದು ಶರಣರ ಗುಂಪುಗಳು ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಅಲ್ಲಮಪ್ರಭು ಗುಂಪು ಮೊದಲ ಬಹುಮಾನ ಹಾಗೂ ಅಕ್ಕಮಹಾದೇವಿ ಗುಂಪು ಎರಡನೇ ಬಹುಮಾನ ಪಡೆದುಕೊಂಡಿತು.
ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಲಿಂಗಾಯತ ಸಮಾಜದ ಎಲ್ಲ ಘಟಕಗಳ ಅಧ್ಯಕ್ಷ, ಕಾರ್ಯದರ್ಶಿ, ಮುಖಂಡರು ಹಾಗೂ ಸದಸ್ಯರು ಭಾಗವಹಿಸಿ ಸಂತಸಪಟ್ಟರು.

